ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಪಯಂದೂರು ನಿವಾಸಿ ಹುಕ್ರಪ್ಪ ರೈ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಮತ್ತು ಮನೆಯ ಸ್ಥಿತಿಯು ಶೋಚನೀಯವಾಗಿದ್ದು,ಈ ವಿಚಾರವನ್ನು ಉದ್ಯಮಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಗಮನಕ್ಕೆ ತಂದಾಗ ಸ್ಪಂದಿಸಿದ ಅಶೋಕ್ ರೈಯವರು ತನ್ನ ರೈ ಎಸ್ಟೇಟ್ಸ್ ಎಜ್ಯಕೇಶನಲ್ ಚಾರೀಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಹುಕ್ರಪ್ಪ ರೈಯವರ ಪತ್ನಿ ಲಕ್ಷ್ಮೀ ರೈಯವರಿಗೆ ಆರ್ಥಿಕ ನೆರವನ್ನು ನೀಡಿದರು.