Friday, September 20, 2024
ಸುದ್ದಿ

ಮಲೆನಾಡಿನಲ್ಲಿ ಮತ್ತೆ ಮಳೆಯ ಅಬ್ಬರ: ಸಣ್ಣ ಕಾಲುವೆ ಸೇತುವೆ ಕುಸಿತ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮತ್ತೆ ಮಳೆಯ ಅವಾಂತರವಾಗಿದ್ದು, ರಾತ್ರಿ ಸುರಿದ ಭಾರೀ ಮಳೆಗೆ ಸೇತುವೆ ಕುಸಿದು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಮಾರಿದಿಬ್ಬ ಬಳಿ ನಡೆದಿದೆ.

ಭದ್ರಾ ನದಿಗೆ ಸೇರುವ ಸಣ್ಣ ಕಾಲುವೆಗೆ ಕಟ್ಟಿದ್ದ ಸೇತುವೆ ಸುಮಾರು ಹತ್ತು ಅಡಿ ಕುಸಿದಿದ್ದು, ಈ ಕಾರಣದಿಂದಾಗಿ ಎನ್‌ಆರ್‌ಪುರದ ಸಂಚಾರ ಸ್ಥಗಿತವಾಗಿದೆ. ಇದರಿಂದಾಗಿ ಇಲ್ಲಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು