Friday, September 20, 2024
ಸುದ್ದಿ

ಉಡಗಳ ಮಾರಣ ಹೋಮ: ಆರೋಪಿಗಳ ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು – ಕಹಳೆ ನ್ಯೂಸ್

ಮಂಗಳೂರು: ಅಳಿವಿನಂಚಿನ ಉಡಗಳನ್ನು ಲೈಂಗಿಕ ಶಕ್ತಿ ಮುಲಾಮು ತಯಾರಿಕೆಗೆ ಮತ್ತು ವಾಮಾಚರಕ್ಕೆ ಉಡಗಳ ಮಾರಣ ಹೋಮ ನಡೆಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ.

ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಬಳಿಯ ಅತ್ತಿಗುಂಡಿಯಲ್ಲಿ ಮಾರಾಟ ಜಾಲ ಪತ್ತೆಯಾಗಿದೆ. ಅಕ್ರಮವಾಗಿ ಉಡಗಳ ಅಂಗಾಂಗ ಮಾರಾಟ ಮಾಡುತ್ತಿದ್ದ ಖದೀಮರನ್ನು ಆರ್ ಎಫ್ ಓ ಶಿಲ್ಪಾ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಆರೋಪಿಗಳಿಂದ 49 ಉಡಗಳ ಅಂಗಾಂಗ ವಶಕ್ಕೆ ಪಡೆಯಲಾಗಿದ್ದು ಶಾಹಿದ್ (25), ನೌಷದ್(೩೪) ಕೇಮು(50) ಸುಧಾ(40) ಎಂಬುವವರು ಬಂಧಿತ ಆರೋಪಿಗಳು. ಇವರು ನೂರಾರು ಉಡಗಳನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.