Friday, September 20, 2024
ಸುದ್ದಿ

ಹಳದಿ ಕಾಯಿಲೆಗೆ ತುತ್ತಾಗಿ ಪಿಯು ವಿದ್ಯಾರ್ಥಿನಿ ಸಾವು – ಕಹಳೆ ನ್ಯೂಸ್

ಮಂಗಳೂರು: ಜ್ವರ, ಹಳದಿ ಕಾಯಿಲೆಗೆ ತುತ್ತಾಗಿ ಪ್ರಥಮ ಪಿಯು ವಿದ್ಯಾರ್ಥಿನಿಯೋರ್ವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕೊಂಬರು ಶಾಲಾ ಮುಖ್ಯೋಪಾಧ್ಯಯರಾದ ಕೊಂಬಾರು ಹೊಸಬೀಡು ನಿವಾಸಿ ಚಿದಾನಂದ ಗೌಡ ಎಂಬುವವರ ಪುತ್ರಿ ಹರ್ಷಾ ಕೆಸಿ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2017ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 609 ಅಂಕಗಳನ್ನು ಪಡೆಯುವ ಮೂಲಕ ಕಡಬದ ಕಾನ್ನಾಯ ಜ್ಯೋತಿ ವಿದ್ಯ ಸಂಸ್ಥೆಯ ಟಾಪರ್ ಆಗಿದ್ದ ಈಕೆ, ಬಳಿಕ ಮಂಗಲುರಿನ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದರು.

ಜಾಹೀರಾತು

ಕಳೆದ ಕೆಲವು ದಿನಗಳ ಹಿಂದೆ ಜ್ವರ ಹಾಗೂ ಜಾಂಡೀಸ್ ಖಾಯಿಲೆಗೆ ತುತ್ತಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ, ಮೃತಪಟ್ಟಿದ್ದಾರೆ.