Friday, September 20, 2024
ಸುದ್ದಿ

ಬಾಳ್ತಿಲ ಗ್ರಾಂ ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ – ಕಹಳೆ ನ್ಯೂಸ್

ಮಂಗಳೂರು: ಕರ್ನಾಟಕ ಸರಕಾರ ಗ್ರಾಮ ಪಂಚಾಯತ್‌ಗಳ ವಾರ್ಷಿಕ ಪ್ರಗತಿಯನ್ನು ಆಧರಿಸಿಕೊಂಡು ಕೊಡುವ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಲ್ಲಿ ತಲಾ ಮೂರು ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಒಂದು ಗ್ರಾಮ ಪಂಚಾಯತ್‌ನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ಈ ಬಾರಿಯೂ ಬಂಟ್ವಾಳ ತಾಲೂಕಿನ ಇರಾ, ಕೊಳ್ನಾಡು, ಮತ್ತು ಬಾಳ್ತಿಲ ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿ ಮಾನದಂಡದಂತೆ ಅಂತಿಮವಾಗಿ 150 ಅಂಕಗಳ ಪ್ರಶ್ನಾಂಕಗಳ ಆಧಾರದ ಮೇಲೆ ಬಾಳ್ತಿಲ ಗ್ರಾಮ ಪಂಚಾಯತ್ ಪ್ರಶಸ್ತಿ ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಈ ವರ್ಷದಲ್ಲಿ ಪಂಚಾಯತ್ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಹಾಗೂ ಅನುದಾನ ಬಳಕೆಗೆ ಸಂದ ಗೌರವವಾಗಿದೆ. 17-18 ಸಾಲಿನಲ್ಲಿ ಎಸ್‌ಸಿ ಎಸ್‌ಟಿ ಅನುದಾನವನ್ನು ಆದ್ಯತೆಯ ನೆಲೆಯಲ್ಲಿ ಅತೀ ಹೆಚ್ಚು ಬಳಸಲಾಗಿದೆ.ಶೇಕಡಾ 100ರಷ್ಟು ಶೌಚಾಲಯ, ಗ್ರಾಮದಲ್ಲಿ ಅಡುಗೆ ಅನಿಲ ವಿತರಣೆ, ಅನುದಾನ ಬಳಕೆ, ಹಾಗೂ ಸ್ವಚ್ಛತೆಯಲ್ಲಿ ವಿಶೇಷವಾದ ಸಾಧನೆಗೈದ ಬಾಳ್ತಿಲ ಗಾಂಪಂಚಾಯತ್ ಅರ್ಹಗೊಂಡಿದ್ದು ಗಾಂದಿಜಯಂತಿಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಈ ಪುರಸ್ಕಾರವನ್ನು ಪಂಚಾಯತ್ ಸ್ವಿಕರಿಸಲಿದೆ.

ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿದ ಪಂಚಾಯತ್ ಅಧ್ಯಕ್ಷ ವಿಠಲ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದಕ್ಕೆ ಖುಷಿಯಾಗಿದೆ. ಪಂಚಾಯತ್ ವ್ಯವಸ್ಥೆ ಜಾರಿಯಾದ ನಂತರ, ನಮ್ಮ ಗ್ರಾಮ ಪಂಚಾಯತ್‌ನಲ್ಲಿ ಸೇವೆ ಸಲ್ಲಿಸುಇರುವ ಎಲ್ಲಾ ಜನಪ್ರತಿನಿಧಿಗಳ, ಸಿಬ್ಬಂದಿಗಳ ಶ್ರಮ ಹಾಗೂ ತಾಲೂಕು ಪಂಚಾಯತ್, ಜಿಲ್ಲಾ ಪಮಚಾಯತ್,ಮತ್ತು ಇಲಾಖೆಗಳ ಮೇಲಸ್ತರದ ಜನಪ್ರತಿನಿಧಿಗಳ ಸಹಕಾರವೇ ಇದಕ್ಕೆ ಕಾರಣವಾಗಿದ್ದು, ಬಾಳ್ತಿಲ ಗ್ರಾಮದ ಸಮಸ್ತ ನಾಗರೀಕರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿ ಜನಪರ ಕಾರ್ಯಗಲಿಗೆ ಸ್ಪೂರ್ತಿ ಎಂದರು.