Friday, September 20, 2024
ಸುದ್ದಿ

ಕಣ್ಣಿನಲ್ಲಿದ್ದ ಜೀವಂತ ಹುಳವನ್ನು ಶಸ್ತ್ರ ಚಿಕಿತ್ಸೆಯಿಂದ ಹೊರತೆಗೆದ ವೈದ್ಯರು – ಕಹಳೆ ನ್ಯೂಸ್

ಉಡುಪಿ: ನೋಡಿದ್ರೆ ಮೈ ಜುಮ್ ಅನ್ನಿಸೋ ದೃಶ್ಯವಿದು. ಹೌದು ಕುಂದಾಪುರದ 60 ವರ್ಷದ ವ್ಯಕ್ತಿಯೊಬ್ರು ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞ ಡಾ.ಶ್ರಿಕಾಂತ್ ಶೆಟ್ಟಿಯವರಿಗೆ ವ್ಯಕ್ತಿ ತಮ್ಮ ಕಣ್ಣನ್ನು ತೋರಿಸಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತವಾಗಿ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಣ್ಣಿನ ಒಳಗಿರುವ ಹುಳವನ್ನು ಔಷಧಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ ಊತ ಬಂದು ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಪರಿಗಣಿಸಿದ ವೈಧ್ಯ ಡಾ.ಶ್ರೀಕಾಂತ್ ಆ ಹುಳವನ್ನು ಒಂದು ಕಡೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತ ಹುಳವನ್ನು ಹೊರ ತೆಗೆದಿದ್ದಾರೆ.

ಜಾಹೀರಾತು

ಇದೀಗ ಹುಳ ತೆಗೆದ ನಂತರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಈ ಹುಳವನ್ನು ವುಚೆರಿಯಾ ಬ್ಯಾನ್ಕ್ರಾಫ್ಟಿ ಎನ್ನುವ ಜಾತಿಯದಾಗಿದ್ದು ಇದು ಸೊಳ್ಳೆಗಳ ಮೂಲಕ ಹರಡುತ್ತದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾವಾಗಳು ರಕ್ತದಲ್ಲಿ ಸೇರಿ ಅಲ್ಲೆ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೆ ಬೆಳೆದು ಹುಳುವಾಗಿ ಪರಿವರ್ತನೆಯಾಗುತ್ವೆ.