Saturday, September 21, 2024
ಸುದ್ದಿ

ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣ ವಿತರಣೆ – ಕಹಳೆ ನ್ಯೂಸ್

ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಆಶ್ರಯದಲ್ಲಿ ತಲಪಾಡಿ ವಲಯವನ್ನು ಸೋಲಾರ್ ಗ್ರಾಮ ಮಾಡುವ ಉದ್ದೇಶದಿಂದ ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಯ ಮುಖಾಂತರ ಮಜಿಬೈಲ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಹಾಲ್‍ನಲ್ಲಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಮಜಿಬೈಲ್ ಬ್ಯಾಂಕಿನ ಮನೇಜರ್ ರಾಮಕೃಷ್ಣ ಕಡಂಬಾರ್‍ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಅಧಿಕಾರಿಯಾದ ನಿತಿನ್ ಮಾನ್ಯ, ಹೊಂಸಗಡಿ ಒಕ್ಕೂಟದ ಸೇವಾ ಪ್ರತಿನಿಧಿ ಶೋಭಾ ಹರೀಶ್ ಕಡಂಬಾರ್, ಅಧಕ್ಷರಾದ ಸವಿತಾ ಜಗದೀಶ್ ಮತ್ತು ಎಲ್ಲಾ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮತಿ ಗೀತಾರವರಿಗೆ ವಾಟರ್ ಹೀಟರ್ ಉಪಕರಣ, ಶ್ರೀಮತಿ ಶ್ರುತಿಯವರಿಗೆ ಲೈಟ್ ಸಿಸ್ಟಮ್ ಶ್ರೀಮತಿ ಸುಂದರಿಯವರಿಗೆ ವಾಟರ್ ಹೀಟರ್‍ನ ಉಪಕರಣವನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ತಲಪಾಡಿ ವಲಯದ ಎಲ್ಲಾ ಸದಸ್ಯರ ಮನೆಯಲ್ಲಿ ಸೋಲಾರ್ ದೀಪ ಬೆಳಗುವ ಉದ್ದೇಶವನ್ನು ಮೋಹನ್‍ರವರು ಅಭಿಪ್ರಾಯ ಪಟ್ಟರು. ಧರ್ಮಸ್ಥಳ ಯೋಜನೆಯಿಂದ ಲಭಿಸುವ ಸವಲತ್ತುಗಳನ್ನು ಉಪಯೊಗಿಸಿ ಎಲ್ಲಾ ಸದಸ್ಯರು ಸೋಲಾರ್ ಅಳವಡಿಸಿ ವಿದ್ಯುತ್ ಬಳಕೆ ಕಡಿಮೆ ಮಾಡಿ ಎಂದು ಬ್ಯಾಂಕ್ ಮೇನೇಜರ್ ರಾಮಕೃಷ್ಣ ಕಡಂಬಾರ್ ತಿಳಿಸಿದರು. ಶ್ರೀಮತಿ ಗೀತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಜಯಮಾಲ ಆಶೋಕ ಸ್ವಾಗತಿಸಿ, ಶ್ರೀಮತಿ ಉಷಾ ಸಂಜೀವ ವಂದಿಸಿದರು.