Friday, September 20, 2024
ಸುದ್ದಿ

ಭಾರೀ ಸಿಡಿಲು, ಗುಡುಗು: ವಿದ್ಯಾರ್ಥಿಗಳು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಮಂಗಳೂರು: ಗುರುವಾರ ಸಂಜೆ ಬಂಟ್ವಾಳ ಪರಿಸರದಲ್ಲಿ ಮಳೆಯೊಂದಿಗೆ ಸುರಿದ ಭಾರೀ ಸಿಡಿಲು, ಗುಡುಗಿಗೆ ಹೆದರಿ, ಅಸ್ವಸ್ಥಗೊಂಡು ಇಬ್ಬರು ವಿದ್ಯಾರ್ಥಿಗಳು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ನಡೆದಿದೆ.

ವಗ್ಗ ಕಾಲೇಜಿನ ವಿದ್ಯಾರ್ಥಿನಿಯರಾದ, ನಾವೂರು ಗ್ರಾಮದ ಪಟ್ಲ ಮನೆ ನಿವಾಸಿ ಅನ್ನತ್ ಬಾನು ಉಳಿ ಗ್ರಾಮದ ತುಂಬೆದಡ್ಕ ನಿವಾಸಿ ಸಾಹಿರಾ ಗಾಯಗೊಂಡವರು. ಇವರಿಬ್ಬರು ಇಂದು ಸಂಜೆ ಶಾಲೆಯಿಂದ ಮನೆಗೆ ಮರಳುವಾಗ ವಗ್ಗದ ನಿರ್ಕಾನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ಗುಡುಗಿನ ಅಬ್ಬರಕ್ಕೆ ಬೆಚ್ಚಿದ್ದು, ಇವರಿಬ್ಬರ ಕೈ-ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯಾರ್ಥಿನಿಗಳಿಬ್ಬರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ದೇವಸ್ಯಪಡೂರು ಗ್ರಾಮದ ನಿವಾಸಿಗಳಾದ ಐಸಮ್ಮ, ಆಸ್ಯಮ್ಮ ಅವರು ಮನೆಯಲ್ಲಿದ್ದಾಗ ಸಿಡಿಲಬ್ಬರಕ್ಕೆ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು

ಸಿಡಿಲಬ್ಬರಕ್ಕೆ ಹೆದರಿ, ಸಣ್ಣಪುಟ್ಟ ಗಾಯಗಳೊಂದಿಗೆ ನಾಲ್ವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.