Friday, September 20, 2024
ಸುದ್ದಿ

ಮಹಾಮಳೆಗೆ ತತ್ತರಿಸಿರುವ ಮಡಿಕೇರಿಯಲ್ಲಿ ಸರಳ ದಸರಾ ಆಚರಣೆಗೆ ಸಾ ರಾ ಮಹೇಶ್ ಮನವಿ – ಕಹಳೆ ನ್ಯೂಸ್

ಮೈಸೂರು ದಸರಾಕ್ಕೆ ಯಾವ ರೀತಿಯ ಇತಿಹಾಸವಿದೆಯೋ ಅದೇ ರೀತಿ ಮಡಿಕೇರಿ ದಸರಾಗೂ ತನ್ನದೇ ಆದ ಇತಿಹಾಸವಿದೆ. ಜತೆಗೆ ಎಂತಹ ಸಂದರ್ಭದಲ್ಲಿಯೂ ಇಲ್ಲಿಯ ಆಚರಣೆ ನಿಂತಿಲ್ಲ. ಹೀಗಿರುವಾಗ ಈ ಬಾರಿ ಮಹಾಮಳೆ ಮತ್ತು ಭೂಕುಸಿತದಿಂದ ತತ್ತರಿಸಿರುವ ಮಡಿಕೇರಿಯಲ್ಲಿ ದಸರಾವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಮಡಿಕೇರಿ ದಸರಾ ಆಚರಣೆಗೆ 50 ಲಕ್ಷ ರೂ. ಮತ್ತು ಗೋಣಿಕೊಪ್ಪ ದಸರಾಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಹೇಳಿದ್ದು, ದಸರಾವನ್ನು ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು