Monday, March 31, 2025

ಕ್ರೀಡೆ

ಕ್ರೀಡೆಸುದ್ದಿ

ನಾಲ್ಕನೇ ಏಕದಿನ ಪಂದ್ಯ: ಭಾರತಕ್ಕೆ ಹೀನಾಯ ಸೋಲು – ಕಹಳೆ ನ್ಯೂಸ್

ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಂಡಿದೆ. ನ್ಯೂಜಿಲ್ಯಾಂಡ್ 8 ವಿಕೆಟ್ ಗಳಿಂದ ಭಾರತವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಗಿಳಿದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಬೌಲರ್ ಗಳ ಅಬ್ಬರಕ್ಕೆ ಪೆವಿಲಿಯನ್ ಪರೇಡ್ ಮಾಡಿತು. ಟೀಂ ಇಂಡಿಯಾವನ್ನು 92 ರನ್ ಗಳಿಗೆ ಕಟ್ಟಿಹಾಕುವಲ್ಲಿ ನ್ಯೂಜಿಲ್ಯಾಂಡ್ ಯಶಸ್ವಿಯಾಯ್ತು. ಗುರಿ ಬೆನ್ನು ಹತ್ತಿದ ನ್ಯೂಜಿಲ್ಯಾಂಡ್ 14.4 ಓವರ್ ಗಳಿಗೆ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ...
ಕ್ರೀಡೆಸುದ್ದಿ

ಪ್ರೋ ಕಬಡ್ಡಿ: ರಾಜ್ಯದ ನೂತನ ಕಾಪ್ತನ ಆಗಿ ಪುತ್ತೂರಿನ ಮುತ್ತು ಪ್ರಶಾಂತ್ ರೈ ಆಯ್ಕೆ – ಕಹಳೆ ನ್ಯೂಸ್

ಅಪ್ಪಟ ಗ್ರಾಮೀಣ ಸೊಗಡಿನ ಕ್ರೀಡೆ ಅಂದ್ರೆ ಅದು ಕಬಡ್ಡಿ. ಕಬಡ್ಡಿ ಈಗ ಜನಮೋಹಕತೆಯನ್ನು ಕಾಣುತ್ತಿರುವ ದೇಶದ ಪ್ರಮುಖ ಕ್ರೀಡೆಯಾಗಿದೆ. ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಕ್ರಿಕೆಟ್‌ಗೂ ಸಡ್ಡು ಹೊಡೆಯುವಷ್ಟು ಬೆಳವಣಿಗೆಯನ್ನು ಕಬಡ್ಡಿ ಕಾಣುತ್ತಿದೆ. ಅದ್ರಲ್ಲೂ ಪ್ರೋ ಕಬಡ್ಡಿ ಅಂದ್ರೆ ಸಾಕು ಭಾರತೀಯರ ಕಿವಿಗಳು ನೆಟ್ಟಗಾಗುತ್ತವೆ. ಆಟಗಾರರು ಮೈದಾನಕ್ಕೆ ಇಳಿದರೆ ಸಾಕು, ಜನರಲ್ಲಿ ಕುತೂಹಲ ರೋಚಕತೆ ಮೈಯಲ್ಲಿ ಹರಿದಾಡಲು ಶುರುವಾಗುತ್ತೆ. ಸಾಮಾನ್ಯ ಕ್ರೀಡಾಪಟುಗಳಲ್ಲಿ ಸಾಮಾನ್ಯರಾಗಿದ್ದ ಕಬಡ್ಡಿ ಆಟಗಾರರು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಜನಪ್ರಿಯಗೊಳ್ಳುವುದರ ಜತೆಗೆ...
ಕ್ರೀಡೆಸುದ್ದಿ

ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು – ಕಹಳೆ ನ್ಯೂಸ್

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಫೈನಲ್ ಸೋಲಿನ ಕಂಟಕ'ದಿಂದ ಮುಕ್ತರಾಗಿದ್ದಾರೆ. ಸ್ರ‍್ಣ ಸಂಭ್ರಮದಲ್ಲಿ ತೇಲಾಡಿದ್ದಾರೆ. ಗ್ವಾಂಗ್ಝೂನಲ್ಲಿ ನಡೆದ ವರ್ಷ ವರ್ಷಾಂತ್ಯದ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಕೂಟದ ಚಾಂಪಿಯನ್‌ಶಿಪ್ ಗೆದ್ದು ದೇಶದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ನೂತನ ಅಧ್ಯಾಯವೊಂದನ್ನು ಬರೆದಿದ್ದಾರೆ. ಇದು ಭಾರತಕ್ಕೆ ಒಲಿದ ಮೊತ್ತಮೊದಲ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಎಂಬುದು ಖುಷಿಯನ್ನು ಇಮ್ಮಡಿಗೊಳಿಸಿದೆ. ರವಿವಾರ ನಡೆದ ವನಿತಾ ಸಿಂಗಲ್ಸ್ ಫೈನಲ್ನಲ್ಲಿ 2017 ರ ವಿಶ್ವ ಚಾಂಪಿಯನ್ ಜಪಾನಿನ ನೊಜೊಮಿ...
ಕ್ರೀಡೆಸುದ್ದಿ

ಕ್ರೀಕೆಟ್ ಬದುಕಿಗೆ ಗುಡ್ ಬೈ ಹೇಳಿದ ಭಾರತ ತಂಡದ ಹಿರಿಯ ಆಟಗಾರ – ಕಹಳೆ ನ್ಯೂಸ್

ಭಾರತ ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್ ಕ್ರೀಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಗಂಭೀರ್ ನಿವೃತ್ತಿಯ ನಿರ್ಧಾರವನ್ನು ಟ್ವೀಟರ್‌ನ ಮೂಲಕ ಬಹಿರಂಗಗೊಳಿಸಿದ್ದಾರೆ. ಸತತ ವೈಪಲ್ಯದ ಕಾರಣ ತಂಡದಿಂದ ಹೊರ ಉಳಿದಿದ್ದ ಗಂಭೀರ್ 2003 ರ ನಂತರ ಮತ್ತೆ ತಂಡದಲ್ಲಿ ಆಡಿದ್ದರು. ಈಗ ಟ್ವೀಟ್‌ನ ಮೂಲಕ ಗುರುವಾರದಿಂದ ನಡೆಯುವ ರಣಜಿ ಟ್ರೋಪಿ ನನ್ನ ಪಾಲಿಗೆ ಕೊನೆಯ ಪಂದ್ಯವೆಂದು ಹೇಳಿದ್ದಾರೆ....
ಕ್ರೀಡೆಸುದ್ದಿ

ಬಂಟರ ಸಂಘ ಸಜೀಪ ವಲಯ ವಾರ್ಷಿಕ ಕ್ರೀಡೋತ್ಸವ 2018ರ ಸಮಾರೋಪ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು (ರಿ) ವಲಯ ಬಂಟರ ಸಂಘ ಸಜೀಪ ವಲಯ ಇವರ ಸಹಕಾರದೊಂದಿಗೆ  ಶ್ರೀ ಕ್ಷೇತ್ರ ಮಿತ್ತಮಜಲು ಗದ್ದೆಯ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ  2018 ಇದರ ಸಮಾರೋಪ ಸಮಾರಂಭ ಬಂಟರ ಸಂಘ ಬಂಟವಾಳ ವಲಯ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಶಿಸ್ತು ಬದ್ಧ ಕ್ರೀಡಾ ಕೂಟದ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಿದ  ಎಲ್ಲಾ ವಲಯದವರಿಗೂ ಅಭಿನಂದನೆ ಸಲ್ಲಿಸಿದರು. ಬೇರೆ ಬೇರೆ...
ಕ್ರೀಡೆಸುದ್ದಿ

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆ ಬಂದಾರು – ಕಹಳೆ ನ್ಯೂಸ್

ಬೆಳ್ತಂಗಡಿ: ಪ್ರಾಥಮಿಕ ಮತ್ತು ಫ್ರೌಢ ಶಾಲಾ ವಿಭಾಗದಲ್ಲಿ 14 ಮತ್ತು 17 ವಯೋಮಾನದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟವು ಆದಿ ಚುಂಚನಗಿರಿ ಕ್ರೀಡಾಂಗಣ ಶರಾವತಿ ನಗರ ಶಿವಮೊಗ್ಗದಲ್ಲಿ ನಡೆದಿದ್ದು, ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಶಾಲೆ ಬಂದಾರಿನ 14 ರ ವಯೋಮಾನದ ಬಾಲಕಿರ ತಂಡವು ಪ್ರಥಮ ಸ್ಧಾನವನ್ನು ಪಡೆದುಕೊಂಡಿದೆ. ಜನವರಿ ಪ್ರಥಮ ವಾರದಲ್ಲಿ ಆಂದ್ರಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತದೆ....
ಕ್ರೀಡೆಸುದ್ದಿ

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಹಾಕಿ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ – ಕಹಳೆ ನ್ಯೂಸ್

ಭುವನೇಶ್ವರ: ಹಾಕಿ ಪುರುಷರ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‍ನ ಶಾರೂಕ್ ಖಾನ್, ಮಾಧುರಿ ದೀಕ್ಷಿತ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಕೂಡ ಭಾಗಿಯಾಗಿದ್ದರು. ಈ ಬಾರಿಯ ಟೂರ್ನಿಯಲ್ಲಿ 16 ತಂಡಗಳು ಸೆಣಸಲಿದ್ದು, ನಾಲ್ಕು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಕೆನಡಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ ತಂಡಗಳೊಂದಿಗೆ ಭಾರತ ಟೂರ್ನಿಯ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೆಂಟೀನಾ, ನ್ಯೂಜಿಲೆಂಡ್,...
ಕ್ರೀಡೆಸುದ್ದಿ

ಮಹಿಳಾ ಟಿ20 ವಿಶ್ವಕಪ್‌ 2ನೇ ಸೆಮಿಫೈನಲ್‌: ಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್‌ – ಕಹಳೆ ನ್ಯೂಸ್

ನಾರ್ಥ್ಸೌಂಡ್‌: ಮಹಿಳೆಯರ ಆರನೇ ಆವೃತ್ತಿಯ ಟಿ20 ವಿಶ್ವಕಪ್​ನ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡ ಅಜೇಯ ಭಾರತವನ್ನು ಅಧಿಕಾರಯುತವಾಗಿ ಮಣಿಸಿ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.  ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಭಾರತದ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿದ್ದಾರೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರದ್ದೇ ಗರಿಷ್ಠ 34 ರನ್‌. 23 ಎಸೆತಗಳಲ್ಲಿ 34 ರನ್‌ಗಳಿಸಿ ಅವರು ಔಟಾದರು. ಜೆಮಿಮಾ ರಾಡ್ರಿಗಝ್ 26 ಎಸೆತಗಳಲ್ಲಿ 26 ರನ್‌ ಕೊಡುಗೆ ಸಲ್ಲಿಸಿದರು. ಮೊದಲು ಬ್ಯಾಟಿಂಗ್‌...
1 24 25 26 27 28 30
Page 26 of 30
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ