Tuesday, April 1, 2025

ಸುದ್ದಿ

ಸುದ್ದಿ

ಹೆಲ್ಮೆಟ್ ಹಾಕದ್ದಕ್ಕೆ ಕಾರು ಚಾಲಕನಿಗೆ ಹುಬ್ಬಳ್ಳಿ ಪೊಲೀಸರಿಂದ ದಂಡ!

ಹುಬ್ಬಳ್ಳಿ: ಬೈಕ್ ಸವಾರರು ಹೆಲ್ಮೆಟ್ ಹಾಕದೇ ಇದ್ದರೆ ಸಂಚಾರಿ ಪೊಲೀಸರು ನೋಟಿಸ್ ನೀಡೋದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಕಾರು ಚಾಲಕರೊಬ್ಬರಿಗೆ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕಲಿಲ್ಲ ಎಂದು ನೋಟಿಸ್ ನೀಡಿ, ದಂಡ ಕಟ್ಟಿಸಿಕೊಂಡು ಎಡವಟ್ಟು ಮಾಡಿದ್ದಾರೆ. ಹೌದು, ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭಾನುವಾರ ಸಂಜೆ ರವಿ ಎಂಬುವವರ ಕಾರನ್ನು ತಡೆದಿದ್ದಾರೆ. ಹಳೆಯ ಬಸ್ ನಿಲ್ದಾಣದ ಬಳಿ ಉತ್ತರ ಸಂಚಾರಿ ಪೊಲೀಸರು ರವಿ ಕಾಂಬಳೆರನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ ಎಲ್ಲ ಡಾಕ್ಯುಮೆಂಟ್ ಸರಿಯಾಗಿತ್ತು. ಆದ್ದರೂ...
ಸುದ್ದಿ

ದಿಲ್ಲಿಯಲ್ಲಿ ಪಟಾಕಿ ಇಲ್ಲದ ದೀಪಾವಳಿ : ಸುಪ್ರೀಂ ಕೋರ್ಟ್‌ ನಿಷೇಧ.

ಹೊಸದಿಲ್ಲಿ : ದೀಪಾವಳಿಗೆ ಸಾಕಷ್ಟು ಮುನ್ನವೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪಟಾಕಿ ಮಾರಾಟದ ಲೈಸನ್ಸ್‌  ಅಮಾನತು ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ಸೋಮವಾರ ಎತ್ತಿ ಹಿಡಿದಿದೆ. ದಿಲ್ಲಿಯಲ್ಲಿ  ಸುಡು ಮದ್ದುಗಳ ಮಾರಾಟ ಹಾಗೂ ದಾಸ್ತಾನನ್ನು 2017 ನವೆಂಬರ್‌ 1ರ ವರೆಗೆ ನಿಷೇಧಿಸಲಾಗಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್‌, ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಸುಡುಮದ್ದುಗಳ ಚಿಲ್ಲರೆ ಹಾಗೂ ರಖಂ ಮಾರಾಟ ಮತ್ತು ದಾಸ್ತಾನಿಗೆ ಅವಕಾಶ ನೀಡುವ ಎಲ್ಲ ಲೈಸನ್ಸ್‌ಗಳನ್ನು ಅಮಾನತುಮಾಡಿತ್ತು....
ಸುದ್ದಿ

ಗೋಧ್ರಾ ಹತ್ಯಾಕಾಂಡ: 11 ಮಂದಿಗೆ ಶಿಕ್ಷೆ ಬದಲಿಸಿದ ಕೋರ್ಟ್

ಅಹಮದಾಬಾದ್: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ 11 ಮಂದಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿ, ಗುಜರಾತ್‌ ಹೈಕೋರ್ಟ್​ ಇಂದು ಸೋಮವಾರ ಆದೇಶ ಹೊರಡಿಸಿದೆ. 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣ ತೀರ್ಪು. 11 ದೋಷಿಗಳ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಗೆ ಮಾರ್ಪಾಟು ಎಸ್‌ಐಟಿ ಕೋರ್ಟ್‌ ತೀರ್ಪು ಎತ್ತಿ ಹಿಡಿದ ಗುಜರಾತ್‌ ಹೈಕೋರ್ಟ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗುಜರಾತ್‌ ಸರ್ಕಾರ ವಿಫಲವಾಗಿತ್ತು ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಕೋರ್ಟ್‌...
ಸುದ್ದಿ

ಮಹಿಳಾ ಸಮಾವೇಶಕ್ಕೆ ಕಿಕ್ಕಿರಿದು ಸೇರಿದ ಜನಸ್ತೋಮ. ಸಂಸದ ನಳೀನ್ ಭಾಗಿ.

ಪುತ್ತೂರು : ನಗರದ ಕೊಟೇಚ ಹಾಲಿನಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶಕ್ಕೆ ನಿರೀಕ್ಷೆಗೂ ಮಿರೀ ಕಾರ್ಯಕರ್ತರು ಸಾರ್ವಜನಿಕರೂ ಆಗಮಿಸಿದ್ದರು. ಇದು ಬಿ.ಜೆ.ಪಿ. ಗೆಲುವಿನ ಸಂಕೇತ, ಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷ ಭರ್ಜರಿ ಬಹುಮಹತ ಸಾಧಿಸಲಿದೆ. ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ರಾಜ್ಯ ಉಪಾಧ್ಯಕ್ಷೆ ಸುಲೋಚನ ಜಿ.ಕೆ. ಭಟ್, ಮಲ್ಲಿಕಾಪ್ರಸಾದ್, ಚನಿಲ ತಿಮ್ಮಪ್ಪ ಶೆಟ್ಟಿ, ಸೇರಿದಂತೆ ಬಿ.ಜೆ.ಪಿ. ಹಿರಿಯ...
ಸುದ್ದಿ

CPM ಕಚೇರಿಗೆ ಮುತ್ತಿಗೆ, BSY ಸೇರಿದಂತೆ ಹಲವರ ಬಂಧನ.

ಬೆಂಗಳೂರು: ಕೇರಳದ ಜನರಕ್ಷಾ ಯಾತ್ರೆಯನ್ನು ಬೆಂಬಲಿಸಿ ರಾಜ್ಯ ಬಿಜೆಪಿ ಘಟಕ ಸೋಮವಾರ ಪಾದಯಾತ್ರೆ ಮೂಲಕ ಬಸವನಗುಡಿಯಲ್ಲಿರುವ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದಲ್ಲಿ ಆರ್ ಎಸ್ಎಸ್, ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಜನರಕ್ಷಾ ಯಾತ್ರೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರಕ್ಷಾ ಯಾತ್ರೆ ಬೆಂಬಲಿಸಿ...
ಸುದ್ದಿ

ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡ ಕನ್ನಡಿಗ .

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರ ಅನಂತ್‌ನಾಗ್‌ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನ್ನಡಿಗ ಯೋಧ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಾಧ್ಯಮ ವರದಿ ತಿಳಿಸಿದೆ. ಬೆಂಗಳೂರಿನ ರಾಜಗೋಪಾಲ ನಗರದ ನಿವಾಸಿ ನರೇಂದ್ರ ಗುಂಡು ಹಾರಿಸಿಕೊಂಡ ಯೋಧ. ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಯೋಧನ ಸಾವಿನ ಕುರಿತು ಸೇನೆಯ ಹಿರಿಯ ಅಧಿಕಾರಿಗಳು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ನರೇಂದ್ರನ ತಾಯಿ ನನ್ನ ಮಗ...
ಸುದ್ದಿ

ವೈಲ್ಡ್ ಲೈಫ್ ಫೋಟೋಗ್ರಾಪಿ ಸ್ಪರ್ಧೆಯಲ್ಲಿ ಅಪುಲ್ ಆಳ್ವಾಗೆ ದ್ವಿತೀಯ ಬಹುಮಾನ.

  ಮಂಗಳೂರು : ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾದ " ವೈಲ್ಡ್ ಲೈಫ್ ಫೋಟೋಗ್ರಫಿ " ಸ್ಪರ್ಧೆಯಲ್ಲಿ ವಿಜಯವಾಣಿಯ ಮಂಗಳೂರಿನ ಛಾಯಾಗ್ರಹಕ ಅಪುಲ್ ಆಳ್ವಾ ಇರಾ ಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದೆ....
ಸುದ್ದಿ

ಸೈನ್ಯ ಸೇರಲು ಬಂದವರಿಗೆ ವಸತಿ ಕಲ್ಪಸಿದ್ರು ಸೇವಾ ಭಾರತಿ ಮತ್ತು ಶ್ರೀಬಸವರಾಜ್ ದಿಗ್ಗಾವಿ ತಂಡದವರು, ಫೋಸ್ ಕೊಟ್ರು ಫೇಕ್ ಬ್ರಿಗೇಡ್ ಗಳು.

ಕಲಬುರ್ಗಿ : ಸೈನ್ಯಕ್ಕೆ ಸೇರಲೆಂದು ಬಂದು ರಸ್ತೆಯಲ್ಲಿ ಮಲಗ ಬೇಕಾದ ಪರಿಸ್ಥಿತಿಯಲ್ಲಿದ್ದ ಯುವಕರಿಗೆ ಸೂಕ್ತ ವಸತಿಯನ್ನು ಸೇವಾ ಭಾರತಿ ಮತ್ತು ಸ್ಥಳೀಯ ಕೆಲ ಸಂಘಟನೆಗಳು ಒದಗಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಹೌದು ಹೀಗೊಂದು ಸುದ್ದಿ ಬಂದಿರೋದು ಕಲಬುರ್ಗಿಯಿಂದ, ಕಲಬುರ್ಗಿಯ ಚಂದ್ರಶೇಕರ್ ಪಾಟೀಲ್ ಮೈದಾನದಲ್ಲಿ ಸೇನಾಭಾರತಿ ಆಯ್ಕೆಗೆಂದು ವಿವಿಧ ಊರುಗಳಿಂದ ಸಾವಿರಾರು ಮಂದಿ ತರುಣರು ಬಂದಿದ್ದರು. ಅವರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲದೆ, ರಸ್ತೆಯ ಬದಿಯಲ್ಲೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನರಿತ ಸ್ಥಳೀಯ...
1 2,817 2,818 2,819 2,820 2,821 2,829
Page 2819 of 2829
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ