Sunday, April 6, 2025

ಸುದ್ದಿ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

“ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ” ನಾಮಫಲಕ ಅನಾವರಣ-ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಟಿ.ಓ ಕಚೇರಿ ಬಳಿ "ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ" ಎಂಬ ನಾಮಫಲಕವನ್ನು ಹಲವು ಗಣ್ಯರ ಉಪಸ್ಥಿತಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಶಾಸಕರು ಮಂಗಳಾದೇವಿ ದೇವಸ್ಥಾನ ಎಂಬುದು ಈ ಊರಿಗೆ ಮಾತ್ರವಲ್ಲ, ಪರವೂರು ಸೇರಿದಂತೆ ನಾಡಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲೊಂದಾಗಿದೆ. ಇಂತಹ ಪುಣ್ಯಕ್ಷೇತ್ರದ ಹೆಸರಿನಲ್ಲಿ ಇನ್ನು ಮುಂದೆ ಈ ರಸ್ತೆ ಕರೆಯಲ್ಪಡುವುದು ಹರ್ಷ ತಂದಿದೆ ಎಂದರು. ಶ್ರೀ ಮಂಗಳಾದೇವಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ನೇತ್ರಾವತಿ ಸೇತುವೆ ದುರಸ್ತಿ ಕಾಮಗಾರಿ: ಏ.1ರಿಂದ ಮಾರ್ಗ ಬದಲಾವಣೆ-ಕಹಳೆ ನ್ಯೂಸ್

ಮಂಗಳೂರು: ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಹಳೆಯ ನೇತ್ರಾವತಿ ಸೇತುವೆಯಲ್ಲಿ (ತಲಪಾಡಿ - ಮಂಗಳೂರು ನಗರಕ್ಕೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಏಪ್ರಿಲ್‌ 1ರಿಂದ 30ರ ವರೆಗೆ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ನಗರದಿಂದ ತಲಪಾಡಿ ಕಡೆಗೆ ಹೋಗುವ ಒಂದು ಸೇತುವೆಯಲ್ಲಿ ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಪಂಪ್‌ವೆಲ್‌ನಿಂದ ತೊಕ್ಕೊಟ್ಟುವರೆಗೆ...
ಉಡುಪಿಜಿಲ್ಲೆಸುದ್ದಿ

ಹೆರವಳ್ಳಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ – ಕಹಳೆ ನ್ಯೂಸ್

ಉಡುಪಿ: ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಹೆರವಳ್ಳಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ. ಶಾಸನದಲ್ಲಿ ಶೃಂಗೇರಿ ಮಠದ 14ನೇ ಶ್ರೀಗಳಾದ ಶ್ರೀ ನರಸಿಂಹ ಭಾರತಿ ಶ್ರೀಪಾದರು (ಹಾಲಾಡಿ ಒಡೆಯರು) ಭೂ ದಾನ ನೀಡಿರುವ ಸಾಧ್ಯತೆಯ ಬಗ್ಗೆ ಶೃಂಗೇರಿ ಮಠದ ಸಂಶೋಧಕರು ಹೇಳಿದ್ದಾರೆ. ಪುರಾತನ ಈ ಶಿಲಾಶಾಸನ ಶ್ರೀ ಶಂಕರ ನಾರಾಯಣ ಕ್ಷೇತ್ರ ಮತ್ತು ಪಂಚಗ್ರಾಮ ಬ್ರಾಹ್ಮಣ ಸಮುದಾಯದ ಪುರಾವೆಗಳಿಗೆ ಪೂರಕವಾಗುವ ಸಾಧ್ಯತೆ ಇದೆ. ಹೆರವಳ್ಳಿಯ ಪ್ರಶಾಂತ್‌ ಹೆಗ್ಡೆ ಅವರ ಮನೆಯ...
ಜಿಲ್ಲೆಬೆಳಗಾವಿಸುದ್ದಿ

ಗೃಹಲಕ್ಷ್ಮಿ ಫೆಬ್ರವರಿ ತಿಂಗಳ ಹಣವೂ ಶೀಘ್ರ ಖಾತೆಗೆ:ಸಚಿವೆ ಹೆಬ್ಬಾಳ್ಕರ್-ಕಹಳೆ ನ್ಯೂಸ್

ಬೆಳಗಾವಿ :ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣವನ್ನು ಖಜಾನೆಗೆ ಕಳುಹಿಸಿದ್ದು, ಯುಗಾದಿ ಮತ್ತು ರಾಮ್ಜಾನ್ ಹಬ್ಬದ ಸಂದರ್ಭದಲ್ಲಿ ಖುಷಿಯ ವಿಚಾರ. ಫೆಬ್ರವರಿ ತಿಂಗಳ ಹಣವನೂ ಶೀಘ್ರವೇ ನೀಡುತ್ತೇವೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ರವಿವಾರ ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಇನ್ನೆರಡು ದಿನಗಳಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು. ಯತ್ನಾಳ್ ವಿರುದ್ಧ ವಾಗ್ದಾಳಿ ”ಯತ್ನಾಳ್ ಅವರು ನಮ್ಮ...
ರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಟ್ರಂಪ್ ಬೆದರಿಕೆಗೆ ಬೆನ್ನಲ್ಲೇ ಕ್ಷಿಪಣಿಗಳನ್ನು ಸಿದ್ದಪಡಿಸಿದ ಇರಾನ್ -ಕಹಳೆ ನ್ಯೂಸ್

ಟೆಹ್ರಾನ್: ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಭಾನುವಾರ ಇರಾನ್‌ಗೆ ಬೆದರಿಕೆ ಹಾಕಿತ್ತು. ಒಂದು ವೇಳೆ ಟೆಹ್ರಾನ್ ಪರಮಾಣು ಒಪ್ಪಂದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಇರಾನ್ ಮೇಲೆ ಬಾಂಬ್ ಸ್ಫೋಟಿಸುವುದು ಒಂದೇ ನಮ್ಮಲಿರುವ ಆಯ್ಕೆಯಾಗಿದೆ ಆದ್ದರಿಂದ ಇರಾನ್ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಬೇಕು ಅಥವಾ ಬಾಂಬ್ ದಾಳಿಯನ್ನು ಎದುರಿಸಬೇಕು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದರು. ಆದರೆ ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್ ಅಮೆರಿಕ ದಾಳಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು...
ದೆಹಲಿರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಎ.14ರ ಅಂಬೇಡ್ಕರ್‌ ಜಯಂತಿಗೆ ಸಾರ್ವಜನಿಕ ರಜೆ: ಕೇಂದ್ರ ಸರಕಾರ‌ ಘೋಷಣೆ-ಕಹಳೆ ನ್ಯೂಸ್

ಹೊಸದಿಲ್ಲಿ: ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನವಾದ ಎ.14ನ್ನು ಸಾರ್ವಜನಿಕ ರಜಾದಿನವೆಂದು ಕೇಂದ್ರ ಸರಕಾರ‌ ಶುಕ್ರವಾರ ಘೋಷಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, “ಸಂವಿಧಾನ ಶಿಲ್ಪಿ, ಸಮಾಜದಲ್ಲಿ ಸಮಾನತೆ ಯುಗವನ್ನು ಸ್ಥಾಪಿಸಿದ ಬಾಬಾ ಸಾಹೇಬ್‌ ಡಾ| ಅಂಬೇಡ್ಕರ್‌ ಅವರ ಜನ್ಮದಿನವು ಇನ್ನು ಮುಂದೆ ಸಾರ್ವಜನಿಕ ರಜಾದಿನವಾಗಲಿದೆ ಎಂದಿದ್ದಾರೆ. ಅಲ್ಲದೆ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಬಾ ಸಾಹೇಬರ ಅನುಯಾಯಿಯಾದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಶಿಕ್ಷಣಸುದ್ದಿ

ವಿವಿ ಕಾಲೇಜಿನಲ್ಲಿ ಮಜ್ಜಿಗೆ ಹಬ್ಬ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು, ಮಾ. 29: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವ ಶಾಸ್ತ್ರ ವಿಭಾಗದ ವತಿಯಿಂದ ಮಜ್ಜಿಗೆ ಹಬ್ಬವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಭಾರತದ ಸೂಕ್ಷ್ಮಾಣುಜೀವ ಶಾಸ್ತ್ರ ಸಮಾಜದ ಸಂಸ್ಥಾಪಕ ಅಧ್ಯಕ್ಷ ಡಾ. ದೇಶ್ಮುಖ್ ಅವರು ಉದ್ಘಾಟಿಸಿ, ಜನರು ಟೀ, ಕಾಫಿ ಅಥವಾ ಇತರ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವ ಬದಲು ಆರೋಗ್ಯಕರ ಮಜ್ಜಿಗೆ ಕುಡಿಯುವಂತೆ ಪ್ರೋತ್ಸಾಹಿಸಲು ಈ ಅಭಿಯಾನ ಪ್ರಾರಂಭಿಸಿರುವುದಾಗಿ ತಿಳಿಸಿದರು. ಮಜ್ಜಿಗೆ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಅಲ್ಲದೇ, ಆರೋಗ್ಯಕರ ಪಾನೀಯವಾಗಿದ್ದು, ಸಾಕಷ್ಟು...
ಜಿಲ್ಲೆದಕ್ಷಿಣ ಕನ್ನಡಸುದ್ದಿಸುಳ್ಯ

ಸುಮಧುರ ಸಂಜೆಯ ಸಂಗೀತದಲ್ಲಿ ತೇಲಾಡಿದ ಪ್ರೇಕ್ಷಕರು-ಕಹಳೆ ನ್ಯೂಸ್

ಸುಳ್ಯ : ಪ್ರಕೃತಿ ನಾನಾ ಕಲೆಗಳ ಮೂಲ ಕಲೆ ಕಲಾವಿದರು ಬದುಕಿನ ಅನರ್ಘ್ಯ ರತ್ನಗಳು ಕಲೆ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ದೊಡ್ಡ ಮನಸ್ಸು ನಮ್ಮಲ್ಲಿರಬೇಕು ಅದೇ ಭಕ್ತಿರಸ ಗಾನಸುಧಾ ಗಾಯನ ಬದುಕನ್ನು ರೂಪಿಸುತ್ತದೆ ಸುಳ್ಯ ತಾಲೂಕಿನ ಬೆಳ್ಳಾರೆ ಕಳಂಜ ಗ್ರಾಮದ ತಂಟೆಪ್ಪಾಡಿ ನೀನಾದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಂಗೀತಕ್ಕೆ ಗುರುವರೇಣ್ಯರ ಜೊತೆ ಹಾಡುವ ಸೌಭಾಗ್ಯ ಖ್ಯಾತ ಗಾಯಕೀ ಸುಪ್ರಿಯ ರಘುನಂದನ್ ಮತ್ತು ಉದಯೋನ್ಮುಖ ಪ್ರತಿಭೆ ಸುಮಾ ಕೋಟೆ ತುಳು ಭಕ್ತಿಗೀತೆ,...
1 6 7 8 9 10 2,833
Page 8 of 2833
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ