Sunday, March 23, 2025

ಕಾಸರಗೋಡು

ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಪೆರಿಯಾದಲ್ಲಿ ಚಿರತೆ ಭೀತಿ, ಕೇಂದ್ರೀಯ ವಿ.ವಿ. ಪರಿಸರದಲ್ಲಿ ರಾತ್ರಿ ಕರ್ಫ್ಯೂ ಜಾರಿ-ಕಹಳೆ ನ್ಯೂಸ್

ಕಾಸರಗೋಡು: ಬೇಡಗಂ, ಅಂಬಲತ್ತರ, ಕಾರಡ್ಕ ಮೊದಲಾದೆಡೆಗಳಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ಚಿರತೆ ಭೀತಿ ಎದುರಾಗಿದ್ದು, ಪೆರಿಯದಲ್ಲಿರುವ ಕೇಂದ್ರೀಯ ವಿ.ವಿ. ಪರಿಸರದಲ್ಲಿ ಚಿರತೆ ಕಂಡಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅರಣ್ಯ ಇಲಾಖೆಗೆ ಚಿರತೆ ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದು, ಇದರಂತೆ ಮುಂಜಾಗ್ರತಾ ಕ್ರಮದಂಗವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಿ.ವಿ.ಯಲ್ಲಿ ಸುಮಾರು 2000 ವಿದ್ಯಾರ್ಥಿಗಳಿದ್ದು, ರಾತ್ರಿ ಹೊತ್ತಿನಲ್ಲಿ ವಿ.ವಿ. ಕ್ಯಾಂಪಸ್‌ನೊಳಗೆ ಇರುವ ಮರಗಳ ಸಮೀಪ ಹೋಗಬಾರದೆಂದೂ, ನಾಯಿ, ಬೆಕ್ಕುಗಳಿಗೆ ಆಹಾರ ನೀಡಬಾರದೆಂದೂ ತಿಳಿಸಲಾಗಿದೆ....
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಶುದ್ಧ ಭಸ್ಮ ತಯಾರಿಗೆ ಸನಾತನ ಮಾದರಿ-ಕಹಳೆ ನ್ಯೂಸ್

ಕಾಸರಗೋಡು: ಎಲ್ಲವೂ ಕಲಬೆರಕೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶುದ್ಧ ಭಸ್ಮ ತಯಾರಿಗಾಗಿ ಸನಾತನ ಮಾದರಿಯನ್ನು ಅನುಸರಿಸುತ್ತಿರುವ ಕಾರ್ಯವೊಂದು ನಡೆಯುತ್ತಿದೆ. ದೇಸಿ ದನದ ಸಗಣಿಯಿಂದ ಬೆರಣಿ ತಟ್ಟಿ, ನಿಗದಿತ ದಿನಗಳಲ್ಲಿ ಅದನ್ನು ಸುಟ್ಟು ತಯಾರಿಸುವ ಭಸ್ಮ ಪ್ರಾಕೃತಿಕವಾಗಿರುತ್ತದೆ ಎಂಬುದನ್ನು ಇಲ್ಲಿ ಸಾರಲಾಗಿದೆ. ಏತಡ್ಕ ಸದಾಶಿವ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಾರ್ಪಣಂ ಎಂಬ ಯೋಜನೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕರ್ತರು ದೇಸಿ ಗೋಮಯವನ್ನು ಸಂಗ್ರಹಿಸಿ ಬೆರಣಿ...
ಕಾಸರಗೋಡುಕ್ರೈಮ್ಸಿನಿಮಾಸುದ್ದಿ

ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ಆರೋಪ ; ಚೆಮ್ಮನೂರ್‌ ಮಾಲೀಕ ಅರೆಸ್ಟ್‌ – ಕಹಳೆ ನ್ಯೂಸ್

ತಿರುವನಂತಪುರಂ: ಮಲಯಾಳಂ ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಬಂಧಿಸಲಾಗಿದೆ. ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಮಂಗಳವಾರ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬೋಬಿ ಚೆಮ್ಮನೂರ್ ಅಲಿಯಾಸ್ ‘ಬೋಚೆ’ ಅವರನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಯನಾಡಿನಿಂದ ಚೆಮ್ಮನೂರ್‌ರನ್ನು ಬಂಧಿಸಲಾಯಿತು. ಅವರನ್ನು ಕೊಚ್ಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 ಸೇರಿದಂತೆ ವಿವಿಧ...
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು:ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ -ಕಹಳೆ ನ್ಯೂಸ್

ಕಾಸರಗೋಡು : ಕಾಸರಗೋಡಿನ ಕುಂಬಳೆಯಲ್ಲಿ ಡಿ.26 ರಂದು ಕಾಡು ಹಂದಿಯೊAದು ಸೂಪರ್ ಮಾರ್ಕೆಟ್ ಗೆ ನುಗ್ಗಿದ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ಕಾಡು ಹಂದಿ ನುಗ್ಗಿದೆ. ಈ ಸಂದರ್ಭದಲ್ಲಿ ಮಾರ್ಕೆಟ್ ಒಳಗೆ ನೌಕರರು, ಗ್ರಾಹಕರ ಸಹಿತ ಹತ್ತು ಮಂದಿ ಇದ್ದರು. ಅನಿರೀಕ್ಷಿತವಾಗಿ ಒಳಗೆ ಬಂದು ಗ್ರಾಹಕನನ್ನು ಕಂಡು ಗಲಿಬಿಲಿಗೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ...
ಕಾಸರಗೋಡುಜಿಲ್ಲೆಶುಭಾಶಯಸುದ್ದಿ

ಜ.01 ರಂದು ಕಾಸರಗೋಡಿನ ಅಡ್ಕತ್ಬೈಲ್ ನಲ್ಲಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಕುಲ್ಫಿ ಆಂಡ್ ಮೋರ್ ಶುಭಾರಂಭ-ಕಹಳೆ ನ್ಯೂಸ್

ಕಾಸರಗೋಡು :ಕಾಸರಗೋಡಿನ ಅಡ್ಕತ್ಬೈಲ್ ನಲ್ಲಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಜ.01 ರಂದು ರಿಯಲ್ ಬಾಂಬೆ ಚೌಪಾಟಿ ಕುಲ್ಫಿಯಾದ ಕುಲ್ಫಿ ಆಂಡ್ ಮೋರ್ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ. ಇನ್ನು ಉಡುಪಿ ಗಾರ್ಡನ್ ರೆಸ್ಟೋರೆಂಟ್ ನ ಹೊಸ ಉದ್ಯಮವಾಗಿರುವ ರಿಯಲ್ ಬಾಂಬೆ ಚೌಪಾಟಿ ಕುಲ್ಫಿ ಇದರ ಗ್ರ್ಯಾಂಡ್ ಓಪನಿಂಗ್ ಅನ್ನು ಕಾಸರಗೋಡು ಪುರಸಭೆಯ ಅಧ್ಯಕ್ಷರಾಗಿರುವ ಅಬ್ಬಾಸ್ ಬೇಗಂ ಅವರು ಉದ್ಘಾಟಿಸಲಿದ್ದು, ಇದು ಮುಂಬೈನಲ್ಲಿ ತಯಾರಿಸಲಾಗುವ ಹೊಸ ಮಾದರಿಯ ಕುಲ್ಫಿ ಆಂಡ್ ಮೋರ್ ರಿಯಲ್...
ಕಾಸರಗೋಡುಕೇರಳರಾಜ್ಯಸುದ್ದಿ

ಎಡನೀರು ಮಠಾಧೀಷರಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ವಾಹನದ ಮೇಲಿನ ದಾಳಿ ಘಟನೆ‌ ಖಂಡಿಸಿ, ಅಖಿಲ ಭಾರತೀಯ ಸಂತ ಸಮಿತಿಯ ಮಹತ್ವದ ಸಭೆ ; ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಂತ ಸಮಿತಿಯ ಸಂತರು ಭಾಗಿ – ಕಾಸರಗೋಡು ಜಿಲ್ಲಾಧಿಕಾರಿಗಳ ಭೇಟಿ, ಸೂಕ್ತ ರಕ್ಷಣೆಗೆ ಸರಕಾರಕ್ಕೆ ಆಗ್ರಹ – ಕಹಳೆ ನ್ಯೂಸ್ಎಡನೀರು ಮಠಾಧೀಷರಾದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ವಾಹನದ ಮೇಲಿನ ದಾಳಿ ಘಟನೆ‌ ಖಂಡಿಸಿ, ಅಖಿಲ ಭಾರತೀಯ ಸಂತ ಸಮಿತಿಯ ಮಹತ್ವದ ಸಭೆ ; ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಂತ ಸಮಿತಿಯ ಸಂತರು ಭಾಗಿ – ಕಾಸರಗೋಡು ಜಿಲ್ಲಾಧಿಕಾರಿಗಳ ಭೇಟಿ, ಸೂಕ್ತ ರಕ್ಷಣೆಗೆ ಸರಕಾರಕ್ಕೆ ಆಗ್ರಹ – ಕಹಳೆ ನ್ಯೂಸ್

ಕಾಸರಗೋಡು : ಕೆಲ ದಿನಗಳ ಹಿಂದೆ ಎಡನೀರು ಮಠಾಧೀಶರು ಸಂಚರಿಸುತ್ತಿದ್ದ ವಾಹನದ ಮೇಲೆ ಪುಂಡರ ತಂಡವೊಂದು ದಾಳಿ ಮಾಡಿತ್ತು. ಈ ಹಿನ್ನಲೆಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರದೇಶ ಕಮಿಟಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಸನ್ಯಾಸಿ ಸಭೆ ನ. 25 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಿತು. ಸಭೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ದಕ್ಷಿಣ ಭಾರತ ಸಂಸ್ಥಾನಗಳಿಂದ ಅಖಿಲ ಭಾರತೀಯ ಸಂತಸಮಿತಿಯ ಕಾರ್ಯಕರ್ತರು ಭಾಗವಹಿಸಿದರು.   ಸನಾತನ ಸಂಸ್ಕೃತಿಯ...
ಕಾಸರಗೋಡುಬದಿಯಡ್ಕಸುದ್ದಿ

ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಬದಿಯಡ್ಕದಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ಬದಿಯಡ್ಕ: ನಾಡಿನ ಶಾಂತಿ ಸಮಾಧಾನವನ್ನು ಹಾಳುಗೆಡಹುವಲ್ಲಿ ಕಾರಣವಾದ ಸಮಾಜ ವಿದ್ರೋಹಿಗಳ ಗುಂಪನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ದೇಶಾದ್ಯಂತ ಪೂಜಿಸಲ್ಪಡುವ ಕೇರಳದ ಏಕೈಕ ಶಂಕರಾಚಾರ್ಯ ಪೀಠದ ಯತಿಗಳಿಗೆ ಕಾಸರಗೋಡು ಜಿಲ್ಲೆಯಲ್ಲಿ ಆದ ಅನ್ಯಾಯವನ್ನು ಇಡೀ ಹಿಂದೂ ಸಮಾಜವು ಎದುರಿಸುತ್ತದೆ ಎಂದು ಪರಿವಾರ ಸಂಘಟನೆಗಳ ರಾಜ್ಯ ಮುಖಂಡ ಸುನಿಲ್‌ ಪಿ.ಆರ್‌.ಹೇಳಿದರು. ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ನಡೆಸಿದವರನ್ನು ಬಂಧಿಸ ಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಬದಿಯಡ್ಕದಲ್ಲಿ...
ಕಾಸರಗೋಡುಕ್ರೈಮ್ಸುದ್ದಿ

ಎಡನೀರು ಶ್ರೀಗಳ ಕಾರಿನ ಮೇಲೆ ದುಷ್ಕರ್ಮಿಗಳ ದಾಳಿ ಬೆನ್ನಲ್ಲೇ ಎಡನೀರು ಮಠಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ – ಕಹಳೆ ನ್ಯೂಸ್

ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಭೇಟಿ ಮಾಡಿದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ವಾಮಿಜೀಯ ಕಾರಿನ ಮೇಲಾದ ದಾಳಿಯ ಘಟನೆಯ ಕುರಿತು ಮಾಹಿತಿ ಪಡೆದುಕೊಂಡು ಸ್ವಾಮೀಜಿಯವರಿಗೆ ದೈರ್ಯ ತುಂಬಿದರು. ಕಾಸರಗೋಡಿನ ಎಡನೀರು ಸಂಸ್ಥಾನದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರನ್ನು ಭೇಟಿ ಮಾಡಿದರು. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲೆ ಕೇರಳದ ಎಡಪಂಥೀಯ ಸರ್ಕಾರ ಪ್ರೇರಿತ ದಾಳಿಯನ್ನು ಖಂಡಿಸುತ್ತಾ...
1 2 3 17
Page 1 of 17
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ