Friday, April 18, 2025

ಕಾಸರಗೋಡು

ಕಾಸರಗೋಡುಸುದ್ದಿ

ಎಡನೀರು ಶ್ರೀ ಮಠಕ್ಕೆ ಎಡತೊರೆ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಭೇಟಿ ; ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ಜೊತೆ ಸಂವಾದ – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಕ್ಕೆ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದ್ದಾರೆ. ಶ್ರೀಗಳಿಗೆ ಎಡನೀರು ಮಠದ ವತಿಯಿಂದ ಭವ್ಯ ಸ್ವಾಗತ ಮಾಡಲಾಗಿದ್ದು, 14 ರ ವರೆಗೆ ಮಠದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಈ‌ ಸಂದರ್ಭದಲ್ಲಿ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಎಡನೀರು ಮಠಾಧೀಶರಾದ‌ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳೊಂದಿಗೆ ಸಂವಾದವನ್ನು ನಡೆಸಿದ್ದು, ಆಧ್ಯಾತ್ಮ ಮತ್ತು ಮಠದ ಬಗ್ಗೆ ಕುಶಲೋಪರಿ ಮಾತುಕತೆಗಳನ್ನು ನಡೆಸಿದ್ದಾರೆ....
ಕಾಸರಗೋಡುಜಿಲ್ಲೆಸುದ್ದಿ

ನಿದ್ರೆಯಲ್ಲಿದ್ದ ಮಕ್ಕಳನ್ನು ಬಾವಿಗೆ ನೂಕಿ ಸಾವಿಗೆ ಶರಣಾದ ತಾಯಿ – ಕಹಳೆ ನ್ಯೂಸ್

ಕೇರಳ :ಮನೆಯಲ್ಲಿನ ಬಾವಿಯಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವಿಗೀಡಾದ ದುರ್ಘಟನೆ ಕೇರಳದ ಅಳಿಕೋಡ್​ನಲ್ಲಿ ಸಂಭವಿಸಿದೆ. ಮಧ್ಯರಾತ್ರಿ ಮನೆಯವರು ಮಲಗಿರುವ ವೇಳೆ ಎದ್ದು ಹೊರಬಂದ ಭಾಮಾ (45), ಮಕ್ಕಳಾದ ಶಿವಾನಂದ್ (14) ಮತ್ತು ಅಶ್ವಂತ್ (11) ಇಬ್ಬರನ್ನೂ ನಿದ್ರೆಯಿಂದ ಕರೆತಂದು, ಸಾವಿನ ಕೂಪಕ್ಕೆ ತಳ್ಳಿರಬಹುದು. ಮಕ್ಕಳನ್ನು ತಳ್ಳಿದ ಬಳಿಕ ಆಕೆಯೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಸಂಭವಿಸುವ ಸಮಯದಲ್ಲಿ ಭಾಮಾಳ ತಾಯಿ...
ಅಂಕಣಕಾಸರಗೋಡುದಕ್ಷಿಣ ಕನ್ನಡಬೆಂಗಳೂರುಸಿನಿಮಾಸುದ್ದಿ

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಪ್ರಕಾಶ್ ತೂಮಿನಾಡು ಈಗ ಕರುನಾಡೇ ಕೊಂಡಾಡುವ ಅದ್ಭುತ ಕಲಾವಿದ – ಕಹಳೆ ನ್ಯೂಸ್

ಅವರು ರಿಕ್ಷಾ ಡ್ರೈವರ್ ಆಗಿ ತಮ್ಮ ಜೀವನದ ರಥ ಸಾರಥಿಯನ್ನು ಸಾಗಿಸುತ್ತಿದ್ದವರು. ಜೊತೆಗೆ ಫ್ಲೈವುಡ್ ಫ್ಯಾಕ್ಟರಿಯಲ್ಲಿ, ಫರ್ನೀಚರ್ ಅಂಗಡಿಯಲ್ಲಿ ಹಾಗೂ ಗಾರೆ ಕೆಲಸ ಜೊತೆಗೆ ಸಾಕಷ್ಟು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದವರು. ಆದ್ರೆ ಈಗ ಕರ್ನಾಟಕವೇ ಹೆಮ್ಮೆ ಪಡುವಂತಹ ಕೊಂಡಾಡುವಂತಹ ಖ್ಯಾತ ಕಲಾವಿದ. ಅವರೇ ಪ್ರಕಾಶ್ ತೂಮಿನಾಡು ಎಂಬ ಅದ್ಭುತ ಕಲಾವಿದ. ಹೌದು. ಪ್ರಕಾಶ್ ತೂಮಿನಾಡು ಅವರು ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ಪೋಷಕ ಹಾಗೂ...
ಅಂಕಣಕಾಸರಗೋಡುದಕ್ಷಿಣ ಕನ್ನಡಬದಿಯಡ್ಕಮಂಗಳೂರುಯಕ್ಷಗಾನ / ಕಲೆಸುದ್ದಿ

ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಸಕಲಕಲಾ ವಲ್ಲಭೆ “ವಿದುಷಿ ಮೈತ್ರಿ ಭಟ್ ಮವ್ವಾರು” – ಕಹಳೆ ನ್ಯೂಸ್

ಒಂದೇ ಕಲೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದವರು ಅದೆಷ್ಟೋ ಜನ. ಆದ್ರೆ ಬೇರೆ ಬೇರೆ ಕಲೆಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಕೆಲವೇ ಕೆಲವು ಜನ. ಅಂತವರಲ್ಲಿ ವಿದುಷಿ ಮೈತ್ರಿ ಭಟ್ ಮವ್ವಾರು ಕೂಡಾ ಒಬ್ಬರು. ಹೌದು..ಎಂಎಸ್‍ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿರುವ ಮೈತ್ರಿ ಭಟ್ ಅವರಿಗೆ ಬಾಲ್ಯದಲ್ಲೇ ಭರತನಾಟ್ಯ, ಯಕ್ಷಗಾನ ಹಾಗೂ ನಾಟಕಗಳಲ್ಲಿ ಅಪಾರವಾದ ಆಸಕ್ತಿ. ಮೈತ್ರಿ ಭಟ್ ಕಾಸರಗೋಡಿನ ಮವ್ವಾರಿನವರಾಗಿದ್ದು, ಗಣಪತಿ ಭಟ್ ಚಂದ್ರಿಕಾ ಭಟ್ ದಂಪತಿಯ ಪುತ್ರಿ. ಸದ್ಯ...
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಪೆರಿಯಾದಲ್ಲಿ ಚಿರತೆ ಭೀತಿ, ಕೇಂದ್ರೀಯ ವಿ.ವಿ. ಪರಿಸರದಲ್ಲಿ ರಾತ್ರಿ ಕರ್ಫ್ಯೂ ಜಾರಿ-ಕಹಳೆ ನ್ಯೂಸ್

ಕಾಸರಗೋಡು: ಬೇಡಗಂ, ಅಂಬಲತ್ತರ, ಕಾರಡ್ಕ ಮೊದಲಾದೆಡೆಗಳಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ಚಿರತೆ ಭೀತಿ ಎದುರಾಗಿದ್ದು, ಪೆರಿಯದಲ್ಲಿರುವ ಕೇಂದ್ರೀಯ ವಿ.ವಿ. ಪರಿಸರದಲ್ಲಿ ಚಿರತೆ ಕಂಡಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅರಣ್ಯ ಇಲಾಖೆಗೆ ಚಿರತೆ ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದು, ಇದರಂತೆ ಮುಂಜಾಗ್ರತಾ ಕ್ರಮದಂಗವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಿ.ವಿ.ಯಲ್ಲಿ ಸುಮಾರು 2000 ವಿದ್ಯಾರ್ಥಿಗಳಿದ್ದು, ರಾತ್ರಿ ಹೊತ್ತಿನಲ್ಲಿ ವಿ.ವಿ. ಕ್ಯಾಂಪಸ್‌ನೊಳಗೆ ಇರುವ ಮರಗಳ ಸಮೀಪ ಹೋಗಬಾರದೆಂದೂ, ನಾಯಿ, ಬೆಕ್ಕುಗಳಿಗೆ ಆಹಾರ ನೀಡಬಾರದೆಂದೂ ತಿಳಿಸಲಾಗಿದೆ....
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಶುದ್ಧ ಭಸ್ಮ ತಯಾರಿಗೆ ಸನಾತನ ಮಾದರಿ-ಕಹಳೆ ನ್ಯೂಸ್

ಕಾಸರಗೋಡು: ಎಲ್ಲವೂ ಕಲಬೆರಕೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶುದ್ಧ ಭಸ್ಮ ತಯಾರಿಗಾಗಿ ಸನಾತನ ಮಾದರಿಯನ್ನು ಅನುಸರಿಸುತ್ತಿರುವ ಕಾರ್ಯವೊಂದು ನಡೆಯುತ್ತಿದೆ. ದೇಸಿ ದನದ ಸಗಣಿಯಿಂದ ಬೆರಣಿ ತಟ್ಟಿ, ನಿಗದಿತ ದಿನಗಳಲ್ಲಿ ಅದನ್ನು ಸುಟ್ಟು ತಯಾರಿಸುವ ಭಸ್ಮ ಪ್ರಾಕೃತಿಕವಾಗಿರುತ್ತದೆ ಎಂಬುದನ್ನು ಇಲ್ಲಿ ಸಾರಲಾಗಿದೆ. ಏತಡ್ಕ ಸದಾಶಿವ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಾರ್ಪಣಂ ಎಂಬ ಯೋಜನೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕರ್ತರು ದೇಸಿ ಗೋಮಯವನ್ನು ಸಂಗ್ರಹಿಸಿ ಬೆರಣಿ...
ಕಾಸರಗೋಡುಕ್ರೈಮ್ಸಿನಿಮಾಸುದ್ದಿ

ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ಆರೋಪ ; ಚೆಮ್ಮನೂರ್‌ ಮಾಲೀಕ ಅರೆಸ್ಟ್‌ – ಕಹಳೆ ನ್ಯೂಸ್

ತಿರುವನಂತಪುರಂ: ಮಲಯಾಳಂ ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಬಂಧಿಸಲಾಗಿದೆ. ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಮಂಗಳವಾರ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬೋಬಿ ಚೆಮ್ಮನೂರ್ ಅಲಿಯಾಸ್ ‘ಬೋಚೆ’ ಅವರನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಯನಾಡಿನಿಂದ ಚೆಮ್ಮನೂರ್‌ರನ್ನು ಬಂಧಿಸಲಾಯಿತು. ಅವರನ್ನು ಕೊಚ್ಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 ಸೇರಿದಂತೆ ವಿವಿಧ...
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು:ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ -ಕಹಳೆ ನ್ಯೂಸ್

ಕಾಸರಗೋಡು : ಕಾಸರಗೋಡಿನ ಕುಂಬಳೆಯಲ್ಲಿ ಡಿ.26 ರಂದು ಕಾಡು ಹಂದಿಯೊAದು ಸೂಪರ್ ಮಾರ್ಕೆಟ್ ಗೆ ನುಗ್ಗಿದ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ಕಾಡು ಹಂದಿ ನುಗ್ಗಿದೆ. ಈ ಸಂದರ್ಭದಲ್ಲಿ ಮಾರ್ಕೆಟ್ ಒಳಗೆ ನೌಕರರು, ಗ್ರಾಹಕರ ಸಹಿತ ಹತ್ತು ಮಂದಿ ಇದ್ದರು. ಅನಿರೀಕ್ಷಿತವಾಗಿ ಒಳಗೆ ಬಂದು ಗ್ರಾಹಕನನ್ನು ಕಂಡು ಗಲಿಬಿಲಿಗೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ...
1 2 3 18
Page 1 of 18
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ