Sunday, March 30, 2025

ಕಾಸರಗೋಡು

ಕಾಸರಗೋಡುಬದಿಯಡ್ಕಸುದ್ದಿ

ಚುನಾವಣೆ ಸಂದರ್ಭದಲ್ಲೂ ಪರವಾನಿಗೆಯುಳ್ಳ ನಾಗರಿಕರ ಕೋವಿಗಳನ್ನು ಠಾಣೆಯಲ್ಲಿ ಇಡಬೇಕಿಲ್ಲ ; ಕೇರಳ ಹೈಕೋರ್ಟ್ ಮಹತ್ವದ ತೀರ್ಪು – ಕಹಳೆ ನ್ಯೂಸ್

ಕಾಸರಗೋಡು: ನಾಗರಿಕರ ವಶದಲ್ಲಿರುವ ಪರವಾನಿಗೆಯುಳ್ಳ ಕೋವಿಗಳನ್ನು ಚುನಾವಣೆಯ ಸಂದರ್ಭದಲ್ಲೂ ಪೊಲೀಸ್ ಠಾಣೆಗಳಲ್ಲಿ ಶೇಖರಿಸಿ ಇಡಲು ಅವಕಾಶವಿಲ್ಲ ಎಂದು ಕೇರಳ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಕಾಸರಗೋಡಿನ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಅವರು ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಕರಣದ ವಿವರ: ಇತ್ತೀಚಿನ ಪಂಚಾಯತ್ ಚುನಾವಣೆ ವೇಳೆ, ಕಾಸರಗೋಡು ಜಿಲ್ಲಾಧಿಕಾರಿಗಳ ಆದೇಶದಂತೆ ಬದಿಯಡ್ಕ ಠಾಣಾ ಪೊಲೀಸರು, ಅರ್ಜಿದಾರರಾದ ನ್ಯಾಯವಾದಿ ಪ್ರದೀಪ್ ರಾವ್...
ಕಾಸರಗೋಡು

ಕಾಸರಗೋಡಿನಲ್ಲಿ ಎಂಡೋ ಸಲ್ಪಾನ್ ಸಂತ್ರಸ್ತರಿಗೆ ಹಸ್ತಾಂತರಗೊಳ್ಳದೇ ಮೂಲೆ ಸೇರಿದ 59 ಮನೆಗಳು-ಕಹಳೆ ನ್ಯೂಸ್

ಕಾಸರಗೋಡು : ಎಂಡೋ ಸಲ್ಪಾನ್ ಸಂತ್ರಸ್ತರ ಬದುಕಿಗೆ ಬೆಳಕಾಗಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಮನೆಗಳು ಸಂತ್ರಸ್ತರಿಗೆ ಹಸ್ತಾಂತರವಾಗದೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು, ಇದರಿಂದ 59 ಮನೆಗಳು ಫಲಾನುಭವಿಗಳಿಗೆ ಹಸ್ತಾಂತರಗೊಳ್ಳದೆ ಮೂಲೆ ಸೇರಿದೆ. ಸಂತ್ರಸ್ಥರ ದುರವಸ್ಥೆಯನ್ನು ಮನಗಂಡು ತಿರುವನಂತಪುರದ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ 81 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಹಾಗೂ ಎಣ್ಮಕಜೆಯ ಬಜಕೂಡ್ಲುವನಲ್ಲಿ 36 ಮತ್ತು ಪೆರಿಯಕಾಟು ಮುಂಡದಲ್ಲಿ 45 ಮನೆಗಳನ್ನು ನಿರ್ಮಿಸಲಾಗಿದೆ. ಬಜಕೂಡ್ಲುವಿನಲ್ಲಿ ಮನೆ...
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ 94 ಮಂದಿಯಲ್ಲಿ ಪತ್ತೆಯಾದ ಕೊರೊನಾ ಸೋಂಕು – ಕಹಳೆ ನ್ಯೂಸ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ರವಿವಾರದಂದು 94 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ನಡುವೆ 38 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, 1004 ಮಂದಿ ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ.ಹಾಗೆ 6449 ಮಂದಿ ನಿಗಾದಲ್ಲಿದ್ದಾರೆ....
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಗೆ ಕೊರೋನಾ ಪಾಸಿಟಿವ್- ಕಹಳೆ ನ್ಯೂಸ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ 78 ಜನರ ಪೈಕಿ 73 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು 89 ಮಂದಿ ಗುಣಮುಖರಾಗಿದ್ದು, 826 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ....
ಕಾಸರಗೋಡು

ಅಂಗನವಾಡಿಗಳನ್ನು ಡಿಸೆಂಬರ್ 21ರಿಂದ ಪುನಾರಾರಂಭಿಸಲು ಕೇರಳ ಸರಕಾರ ತೀರ್ಮಾನ-ಕಹಳೆ ನ್ಯೂಸ್

ಕಾಸರಗೋಡು: ಕೊರೋನಾ ಕಾರಣದಿಂದ ಮಾರ್ಚ್ 10ರಿಂದ ಮುಚ್ಚಿರುವ ಅಂಗನವಾಡಿಗಳನ್ನು ಪುನಾರಾರಂಭಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ. ಹಾಗೆಯೇ ಅಂಗನವಾಡಿ ನೌಕರರು ಹಾಗೂ ಸಹಾಯಕರು ಡಿಸೆಂಬರ್ 21 ರಿಂದ ಹಾಜರಾಗಬೇಕು ಎಂದು ಆದೇಶ ನೀಡಲಾಗಿದೆ.ಆರೋಗ್ಯ ಮತ್ತು ಶಿಶು ಕಲ್ಯಾಣ ಸಚಿವೆ ಕೆ.ಕೆ ಶೈಲಜಾ ಟೀಚರ್ ಅವರು ಮಕ್ಕಳ ಪ್ರವೇಶಾತಿ‌ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ....
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ 1;15 ರ ವೇಳೆ ಶೇ.50ರಷ್ಟು ಮತದಾನ-ಕಹಳೆ ನ್ಯೂಸ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಂದುವರೆದಿದೆ. ಮಧ್ಯಾಹ್ನ 1.15 ರ ವೇಳೆಗೆ ಶೇ. 50 ರಷ್ಟು ಮತದಾನವಾಗಿದೆ. ಈ ಅವಧಿಯನ್ನು ಒಟ್ಟು 5,26,467 ಮಂದಿ ಹಕ್ಕು ಚಲಾವಣೆ ಮಾಡಿದ್ರು.ಈ ಪೈಕಿ 2,52,592 ಪುರುಷರು, 2,73,875 ಮಹಿಳಾ ಮತದಾರರು ಸೇರಿದ್ದಾರೆ. ಜಿಲ್ಲಾ ಪಂಚಾಯತ್ ನ 17 ಡಿವಿಜನ್, 6 ಬ್ಲಾಕ್ ಪಂಚಾಯತ್ ಮತ್ತು 38 ಗ್ರಾಮ ಪಂಚಾಯತ್ ಗಳು...
ಕಾಸರಗೋಡುರಾಜ್ಯಸುದ್ದಿ

ಎಡನೀರು ಮಠದ ನೂತನ ಯತಿಗಳಿಗೆ ಕಾಂಚಿ ಶ್ರೀಗಳಿಂದ ಸನ್ಯಾಸ ದೀಕ್ಷೆ ; ಶ್ರೀ ಶ್ರೀ ಶ್ರೀ ಸಚ್ಚಿದಾನಂದಭಾರತಿ ಸ್ವಾಮಿಗಳು ನಾಳೆ ಎಡನೀರು ಮಠಕ್ಕೆ, ಅಕ್ಟೋಬರ್ 28ರಂದು ಪಟ್ಟಾಭಿಷೇಕ – ಕಹಳೆ ನ್ಯೂಸ್

ಎಡನೀರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟಿರುವ ಜಯರಾಮ ಮಂಜತ್ತಾಯ ಅವರ ಸನ್ಯಾಸ ಧೀಕ್ಷೆ ಕಾರ್ಯಕ್ರಮ ಕಾಂಚಿ ಕಾಮಕೋಟಿ ಪೀಠದ ಜಗದ್ಗುರುಗಳಿಂದ ನೆರವೇರಲ್ಪಟ್ಟಿತು. ಕಾಂಚಿ ಶ್ರೀಗಳಿಂದ ನೂತನ ಪೀಠಾಧಿಪತಿಗಳಿಗೆ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಎಂದು ನಾಮಕರಣವಾಗುವುದರೊಂದಿಗೆ ಜಯರಾಮ ಮಂಜತ್ತಾಯರು ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಜಯರಾಮ ಮಂಜತ್ತಾಯರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರಿ ಶ್ರೀಮತಿ ಸಾವಿತ್ರಿ ಮತ್ತು ಶ್ರೀನಾರಾಯಣ ಕೆದಿಲಾಯ ದಂಪತಿಗಳಿಗೆ 08-03-1970...
ಕಾಸರಗೋಡುಸುದ್ದಿ

ಕೇಶವಾನಂದಭಾರತೀ ಶ್ರೀಪಾದರ ನಿಧನ ಹಿನ್ನಲೆ ; ಎಡನೀರು ಮಠದ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯರು ” ಶ್ರೀ ಶ್ರೀ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ” ಅಧಿಕೃತ ಘೋಷಣೆ – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಶನಿವಾರ ಮಧ್ಯರಾತ್ರಿ 12.30ಕ್ಕೆ ದೈವಾದೀನರಾಗಿದ ಹಿನ್ನಲೆಯಲ್ಲಿ ಶ್ರೀಎಡನೀರು ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ನಿಯುಕ್ತಿ ಮಾಡಲಾಗಿದೆ. ಈ ಹಿಂದೆ ಮಠದಲ್ಲಿ ಶ್ರೀಗಳ‌ ಜೊತೆಗಿದ್ದ, ಶ್ರೀ ಜಯರಾಮ ಮಂಜತ್ತಾಯರನ್ನು ಶ್ರೀಗಳ ಆಸೆಯಂತೆ ಇಂದು ಉತ್ತರಾಧಿಕಾರಿ ಎಂದು, ಮಠದ ಪ್ರಮುಖರು ಹಾಗೂ ವಿದ್ವಾಂಸರು, ತಂತ್ರಿಗಳ ಸಭೆಯಲ್ಲಿ ಘೋಷಣೆ ಮಾಡಲಾಗಿದೆ‌. 28/9/2020 ರಂದು ಪೀಠಾರೋಹಣ ನಡೆಯಲಿದೆ. ಸಭೆಯಲ್ಲಿ ಮಠದ ಭಕ್ತರಾದ ಟಿ. ಶ್ಯಾಮ್ ಭಟ್ ,...
1 13 14 15 16 17 18
Page 15 of 18
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ