ಹಾವುಗಳು ಉಪದ್ರವಿಯಲ್ಲ, ಪರಿಸರ ಸ್ನೇಹಿಗಳು; ಅರಣ್ಯ ಸಹ ಸಂರಕ್ಷಣಾಧಿಕಾರಿ ಪ್ರಶಾಂತ್ -ಕಹಳೆ ನ್ಯೂಸ್
ಮೂಡಬಿದಿರೆ : ವಿಷಕಾರಿ ಹಾವುಗಳಿಂದ ಯಾವುದೇ ಅಪಾಯವಿಲ್ಲ. ಅವುಗಳು ತಮ್ಮ ಆತ್ಮ ರಕ್ಷಣೆಗಾಗಿ ಧಾಳಿ ಮಾಡುತ್ತಾವೆಯೇ ಹೊರತು ಯಾವುದೇ ಪೂರ್ವದ್ವೇಷಗಳಿಂದಲ್ಲ. ಹಾವುಗಳ ಬಗ್ಗೆ ನಮಗಿರುವ ತಪ್ಪು ಮಾಹಿತಿಗಳನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಬೇಕು ಎಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಲ್ಲಬೆಟ್ಟು, ಮೂಡಬಿದಿರೆಯಲ್ಲಿ ನಡೆದ ಹಾವು-ನಾವು ಕಾರ್ಯಕ್ರಮದಲ್ಲಿ ಅರಣ್ಯ ಸಹ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ರವರು ಹೇಳಿದರು. ಸರಕಾರೇತರ ಸಂಸ್ಥೆಯ ಸದಸ್ಯರುಗಳಾದ ಉರಗ ತಜ್ಞ ವಿಪಿನ್ ರಾಯ್ ಹಾಗೂ...