Saturday, April 5, 2025

ಪ್ರಾದೇಶಿಕ

ಕ್ರೈಮ್ಪುತ್ತೂರುಸುದ್ದಿಸುಬ್ರಹ್ಮಣ್ಯ

ತಂದೆಗೆ ವಿಷ ಬೆರೆಸಿ ಹತ್ಯೆ ಯತ್ನ ಪ್ರಕರಣ ; ಆರೋಪಿಗೆ ಜಾಮೀನು ಮಂಜೂರು – ಕಹಳೆ ನ್ಯೂಸ್

ಪುತ್ತೂರು: ತಂದೆಗೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಲೋಕೇಶ್ ಎಂಬವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಫಿರೇರಾ ಜಾಮೀನು ಮಂಜೂರು ಮಾಡಿದ್ದಾರೆ. ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ಅಂಜೇರಿ ಹೊನ್ನಪ್ಪ ನಾಯ್ಕರವರ ಪುತ್ರರಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬವರು ಹೊನ್ನಪ್ಪ ನಾಯ್ಕರವರಿಗೆ ಜುಲೈ.23 ರಂದು ರಾತ್ರಿ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದರು ಎಂದು ಆರೋಪಿಸಿ, ಹೊನ್ನಪ್ಪ ನಾಯ್ಕರವರ ಪತ್ನಿ...
ಪುತ್ತೂರು

ಪುತ್ತೂರು: ಬನ್ನೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ- ಕಹಳೆ ನ್ಯೂಸ್

ಪುತ್ತೂರು: ಬನ್ನೂರು ನಿರ್ಪಾಜೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಪಕ್ಕದ ಕೊಟ್ಟಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿರುವ ಅಟೋ ಚಾಲಕರೊಬ್ಬರ ಮೃತ ದೇಹ ಆ.30ರಂದು ಪತ್ತೆಯಾಗಿದೆ‌. ಆಟೋ ಚಾಲಕನಾಗಿದ್ದ ಸುದರ್ಶನ್ (37ವ) ಮೃತಪಟ್ಟವರು. ದಿ. ರಘುನಾಥ ರೈ ಮತ್ತು ವಿಮಲ ದಂಪತಿಯ ಪುತ್ರ ಸುದರ್ಶನ್ ಆಟೋ ಚಾಲಕನಾಗಿದ್ದು ಕಳೆದ ಕೊರೋನಾ ಲಾಕ್ ಡೌನ್ ಬಳಿಕ ಮನೆಯಲ್ಲೇ‌ ಇದ್ದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆ.30 ರಂದು ಸ್ಥಳೀಯರಿಗೆ ಸುದರ್ಶನ ರೈ...
ಕ್ರೈಮ್ದಕ್ಷಿಣ ಕನ್ನಡಮಂಜೇಶ್ವರಸುದ್ದಿ

ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ವಶ ; ಗಾಂಜಾ ಸಾಗಾಟ ಮಾಡುತ್ತಿದ್ದ ಮೊಹಮ್ಮದ್ ಶಾಹ, ಮೊಯಿದ್ದೀನ್‌ ಅನ್ಸಾರ್ ಬಂಧನ – ಕಹಳೆ ನ್ಯೂಸ್

ಮಂಗಳೂರು, ಆ. 30 : ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್‌ ಪ್ರಮಾಣದಲ್ಲಿ ಪಿಕಪ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದ್ದು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿತರನ್ನು ಮಂಜೇಶ್ವರದ ವರ್ಕಾಡಿ ಗ್ರಾಮದ ಪಾವೂರಿನ ನಿವಾಸಿ ಕಲಂದರ್‌ ಮೊಹಮ್ಮದ್ ಶಾಹ (35) ಹಾಗೂ ಕಾಸರಗೋಡು ಕುಂಜತ್ತೂರು ಗ್ರಾಮದ ಉದ್ಯಾವರದ ನಿವಾಸಿ ಮೊಯಿದ್ದೀನ್‌ ಅನ್ಸಾರ್‌ (29) ಅವರನ್ನು ಬಂಧಿಸಲಾಗಿದೆ. ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಬೃಹತ್‌ ಪ್ರಮಾಣದಲ್ಲಿ ಪಿಕಪ್‌...
ಪುತ್ತೂರು

ಪುತ್ತೂರು ನಗರ ವ್ಯಾಪ್ತಿಯಲ್ಲಿರುವ ವಸತಿಗೃಹಗಳು ಹಾಗು ಸಾರ್ವಜನಿಕ ಸ್ಥಳಗಳು ಗಾಂಜಾ ವ್ಯಾಸನಿಗಳು ಹಾಗು ವೇಶ್ಯಾವಾಟಿಕೆಯ ಅಡ್ಡೆಯಾಗಿ ಬದಲಾಗುತ್ತಿದ್ದು, ಪೊಲೀಸ್ ಇಲಾಖೆ ಈ ಕುರಿತು ತೀವ್ರ ನಿಗಾವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರಿಗೆ ಮನವಿ-ಕಹಳೆ ನ್ಯೂಸ್

ಪುತ್ತೂರು ನಗರ ವ್ಯಾಪ್ತಿಯಲ್ಲಿರುವ ವಸತಿಗೃಹಗಳು ಹಾಗು ಸಾರ್ವಜನಿಕ ಸ್ಥಳಗಳು ಗಾಂಜಾ ವ್ಯಾಸನಿಗಳು ಹಾಗು ವೇಶ್ಯಾವಾಟಿಕೆಯ ಅಡ್ಡೆಯಾಗಿ ಬದಲಾಗುತ್ತಿದ್ದು, ಪೊಲೀಸ್ ಇಲಾಖೆ ಈ ಕುರಿತು ತೀವ್ರ ನಿಗಾವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಪಾಟ್ರಕೋಡಿ ಸಮೀಪದ ನಿವಾಸಿ ‘ಬಹುಪತ್ನಿ ವಲ್ಲಭ’ನಾದರೂ ಅಪ್ರಾಪ್ತೆ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ; ನ್ಯಾಯಾಂಗ ಬಂಧನ – ಕಹಳೆ ನ್ಯೂಸ್

ಪುತ್ತೂರು, ಆ 27 : ತನ್ನ ಅಪ್ರಾಪ್ತೆ ಪುತ್ರಿಯ ಮೇಲೆ ತಂದೆಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆತನ ವಿರುದ್ದ ಪತ್ನಿ ನೀಡಿದ ದೂರಿನ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.   ಆರೋಪಿಯೂ ಪಾಟ್ರಕೋಡಿ ಸಮೀಪದ ನಿವಾಸಿಯಾಗಿದ್ದು, ತನ್ನ ಕೊನೆಯ ಹೆಂಡತಿಯ ಅಪ್ರಾಪ್ತೆ ಪುತ್ರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆ.25ರಂದು ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಪತಿಯನ್ನು ತಡೆದ ನನಗೆ ಹಲ್ಲೆ ನಡೆಸಿರುವುದಾಗಿ ಪತ್ನಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ತೆಂಕಿಲದಲ್ಲಿ ಅಕ್ರಮ ಹುಲಿ ಚರ್ಮ ಮಾರಾಟ ಪ್ರಕರಣ ; ಆರೋಪಿಗಳ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಸುಮಾರು 11 ವರ್ಷಗಳ ಹಿಂದೆ ಪುತ್ತೂರು ನಗರದ ಬೈಪಾಸ್ ತೆಂಕಿಲ ಎಂಬಲ್ಲಿ ಅಕ್ರಮವಾಗಿ ಹುಲಿ ಚರ್ಮವನ್ನು ಮಾರಾಟ ಮಾಡುತ್ತಿದರೆಂದು ಆರೋಪಿಸಲಾದ ಪ್ರಕರಣವೊಂದರಲ್ಲಿ ಆರೋಪಿಗಳಾದ ಅಬೂಬಕ್ಕರ್, ವಿನೋದ್, ಉಮೇಶ್ ಮತ್ತು ಕರಿಂಮ್‍ರವರನ್ನು ಪುತ್ತೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಮಂಜುನಾಥ ಎಸ್.ರವರು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದಾರೆ. ಮಂಗಳೂರು ವಿಶೇಷ ಪೆÇಲೀಸ್ ಸಂಚಾರಿದಳದ ಪೋಲೀಸ್ ಉಪನಿರೀಕ್ಷಕರಿಗೆ ಪುತ್ತೂರು ತಾಲೂಕು ಈಶ್ವರಮಂಗಲ ಎಂಬಲ್ಲಿಂದ ಆಟೋರಿಕ್ಷಾ ಕೆ.ಎ.21-9102 ನೇದರಲ್ಲಿ ಹುಲಿಚರ್ಮವನ್ನು...
ಪುತ್ತೂರುಶಿಕ್ಷಣ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ-ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಜನ್ಮ ದಿನದ ಅಂಗವಾಗಿ ಸದ್ಭಾವನಾ ದಿನಾಚರಣೆಯನ್ನು ಆನ್‍ಲೈನ್ ವೆಬಿನಾರ್ಮೂ ಲಕ ಆಗಸ್ಟ್ 20 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ,ಯುವ ಸಮುದಾಯದಲ್ಲಿ ದೇಶ ಪ್ರೇಮವು ಜಾಗೃತಗೊಂಡು ಧನಾತ್ಮಕ ಚಿಂತನೆಗಳ ಮೂಲಕ ಸದ್ಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ, ಶುಭ ಹಾರೈಸಿದರು. ಕಾಲೇಜಿನ...
ಪುತ್ತೂರು

ಸಿಇಟಿ 2020 : ಅತ್ಯುತ್ತಮ ಸಾಧನೆ ಮಾಡಿದ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು-ಕಹಳೆ ನ್ಯೂಸ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2020 ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಗೌರೀಶ್ ಕಜಂಪಾಡಿ ಇವರು ಇಂಜಿನಿಯರಿಂಗ್‌ನಲ್ಲಿ 9 ನೇ ರ‌್ಯಾಂಕ್ & ಫಾರ್ಮಾದಲ್ಲಿ 10 ನೇ ರ‌್ಯಾಂಕ್ ಗಳಿಸಿದ್ದಾರೆ. ಇವರು ಬಾಲರಾಜ ಕಜಂಪಾಡಿ ಹಾಗೂ ಶ್ರೀಮತಿ ರಾಜನಂದಿನಿ ಇವರ ಪುತ್ರ. ಪುತ್ತೂರಿನ ದಿನೇಶ್ ಪಾಂಗಾಳ್ ಹಾಗೂ ಸಂಧ್ಯಾ ಪಾಂಗಾಳ್ ಇವರ ಪುತ್ರನಾದ ಅಕ್ಷಯ್ ಪಾಂಗಾಳ್ ಇವರು ಇಂಜಿನಿಯರಿಂಗ್ BNYS 63,ಇಂಜಿನಿಯರಿಂಗ್...
1 685 686 687 688 689 703
Page 687 of 703
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ