Wednesday, April 9, 2025

ಸುಳ್ಯ

ಸುದ್ದಿಸುಳ್ಯ

ಹಲವೆಡೆ ಲಘು ಭೂಕಂಪನ: ಭಯಭೀತರಾದ ಸುಳ್ಯದ ಜನತೆ – ಕಹಳೆ ನ್ಯೂಸ್

ಸುಳ್ಯ : ಸುಳ್ಯ ತಾಲೂಕಿನ ಹಲವೆಡೆ ಇಂದು ಬೆಳಗ್ಗಿನ ವೇಳೆ ಲಘು ಭೂಕಂಪನದ ಅನುಭವವಾಗಿದ್ದು, ಸುಮಾರು 45 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸುಳ್ಯ, ಮರ್ಕಂಜ, ಕಲ್ಲುಗುಂಡಿ, ಸಂಪಾಜೆ, ಪೆರಾಜೆ, ಅರಂತೋಡು, ಐವರ್ನಾಡು, ತೊಡಿಕಾನ, ಗೂನಡ್ಕ ಸೇರಿದಂತೆ ತಾಲೂಕಿನ ವಿವಿಧೆಡೆ ಬೆಳಗ್ಗೆ ಸುಮಾರು 9.10ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಚಯರ್ ಮುಂತಾದವುಗಳು ಅಲುಗಾಡಿದ್ದು, , ಕಪಾಟಿನಲ್ಲಿಟ್ಟಿದ್ದ ಪಾತ್ರೆ...
ಸುದ್ದಿಸುಳ್ಯ

ಸುಳ್ಯ: ಬೇಂಗಮಲೆ ರಕ್ಷಿತಾರಣ್ಯದಲ್ಲಿ ನೇಣು ಬಿಗಿದು ವೃದ್ದ ಆತ್ಮಹತ್ಯೆ : ಪೊಲೀಸರಿಂದ ಸ್ಥಳ ಪರಿಶೀಲನೆ – ಕಹಳೆ ನ್ಯೂಸ್

ಸುಳ್ಯ: ಕಳಂಜದ ವೃದ್ಧರೊಬ್ಬರು ಬೇಂಗಮಲೆ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 26 ರಂದು ನಡೆದಿದೆ. ಸಾರಣೆ ಕೆಲಸ ಮಾಡುತ್ತಿದ್ದ ಕಳಂಜ ಗ್ರಾಮದ ನಾಗಪ್ಪ ಅಸೌಖ್ಯದಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬೇಂಗಮಲೆ ರಸ್ತೆ ಬದಿಯ ರಕ್ಷಿತಾರಣ್ಯದಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಮೃತ ವ್ಯಕ್ತಿಯ ಚಪ್ಪಲಿಗಳು, ತಾಂಬೂಲ ಪತ್ತೆಯಾಗಿದೆ....
ಸುದ್ದಿಸುಳ್ಯ

ರಜೆಗೆ ಅಜ್ಜನ ಮನೆಗೆ ಬಂದಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು !! – ಕಹಳೆ ನ್ಯೂಸ್

ಸುಳ್ಯ : ಅಜ್ಜನ ಮನೆಗೆ ರಜೆ ಕಳೆಯಲು ಬಂದಿದ್ದ ಬಾಲಕನೋರ್ವ ಕುಕ್ಕುಂಬಳ ಹೊಳೆಗೆ ಸ್ನಾನ ಮಾಡಲು ತೆರಳಿದ ಸಂದರ್ಭ ಮುಳುಗಿ ಮೃತಪಟ್ಟಿರುವ ಘಟನೆ ಅರಂತೋಡಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಮನ್ವಿತ್(12 ) ಎಂದು ಗುರುತಿಸಲಾಗಿದೆ. ರಜೆಯ ಸಮಯವಾದರಿಂದ ಮಂಗಳೂರಿನ ಬಾಲಕ ಮನ್ವಿತ್ ಕುಕ್ಕುಂಬಳ ತನ್ನ ಅಜ್ಜನ ಮನೆಗೆ ಬಂದಿದ್ದನು. ಸಂಜೆ ಇಬ್ಬರು ಬಾಲಕರು ಸ್ನಾನ ಮಾಡಲು ಕುಕ್ಕುಂಬಳ ಹೊಳೆಗೆ ತೆರಳಿದ್ದರು. ಸ್ನಾನ ಮಾಡುತ್ತ ಆಡವಾಡುತ್ತಿದ್ದಾಗ ಮನ್ವಿತ್ ನೀರಿನ ಸೆಳೆತೆಗೆ ಸಿಲುಕಿಕೊಂಡು...
ದಕ್ಷಿಣ ಕನ್ನಡಸುದ್ದಿಸುಳ್ಯ

ಬೈಕ್- ಜೀಪು ಮಧ್ಯೆ ಭೀಕರ ಅಪಘಾತ: ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವು, ಮತ್ತೋರ್ವನ ಸ್ಥಿತಿ ಗಂಭೀರ –ಕಹಳೆ ನ್ಯೂಸ್

ಸುಳ್ಯ : ಬೈಕ್ ಹಾಗೂ ಜೀಪು ಮಧ್ಯೆ ಭೀಕರ ಅಪಘಾತ ನಡೆದು ಓರ್ವ ಗಾಯಗೊಂಡು ಮತ್ತೋರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸುಳ್ಯದ ಕುಂಬಳಚೇರಿ ಎಂಬಲ್ಲಿ ನಡೆದಿದೆ. ಪೆರಾಜೆಯ ದರ್ಶನ್ ಮತ್ತು ವಿಶ್ವದೀಪ್ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು ಇಂದು ಪರೀಕ್ಷೆ ಮುಗಿಸಿ ಇಬ್ಬರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕುಂಬಳಚೇರಿ ಬಳಿಯ ಗಡಿ ಗುಡ್ಡೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಜೀಪ್ ಗೆ ಡಿಕ್ಕಿ ಹೊಡೆಯುವುದನ್ನು...
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ : ಎಳನೀರು ಕೊಚ್ಚುವ ಮಚ್ಚು ಹಿಡಿದು ಬೆದರಿಸಿ ದರೋಡೆ : ಚಿನ್ನಾಭರಣ ದೋಚಿ ಖದೀಮರು ಪರಾರಿ – ಕಹಳೆ ನ್ಯೂಸ್

ಸುಳ್ಯ : ಎಳನೀರು ಕೊಚ್ಚುವ ಮಚ್ಚು ಹಿಡಿದು ಬೆದರಿಸಿ ನಗ, ನಾಣ್ಯ ದೋಚಿ ಖದೀಮರು ಪರಾರಿಯಾದ ಘಟನೆ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಿನ್ನೆ ರಾತ್ರಿ 8.30ಕ್ಕೆ ನಡೆದಿದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಕಳ್ಳತನ ಪ್ರಕರಣವೊಂದು ನಡೆದಿದ್ದು, ಮಾರಕಾಸ್ತ್ರ ಸಜ್ಜಿತ ದರೋಡೆಕೋರರ ತಂಡ ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಅವರ ಅಂಬಾಶ್ರಮ ಮನೆಗೆ ನುಗ್ಗಿ ಅತ್ತೆ ಹಾಗೂ ಸೊಸೆಯನ್ನು ಮಚ್ಚು ಹಿಡಿದು ಬೆದರಿಸಿ 100 ಗ್ರಾಂ. ಚಿನ್ನ...
ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ತಿರುಮಲ ಹೋಂಡಾದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್: ಕಡಿಮೆ ಡೌನ್‍ಪೇಮೆಂಟ್‍ನೊಂದಿಗೆ ಅತ್ಯಪೂರ್ವ ಕೊಡುಗೆಗಳು- ಕಹಳೆ ನ್ಯೂಸ್

ಪುತ್ತೂರು: ತಿರುಮಲ ಹೋಂಡಾದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್‍ಗಳು ಸಿದ್ಧವಾಗಿದೆ. ಅತೀ ಕಡಿಮೆ ಡೌನ್‍ಪೇಮೆಂಟ್‍ನೊಂದಿಗೆ ಅತ್ಯಪೂರ್ವ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ ಒದಗಿ ಬಂದಿದೆ. 94,155 ಆನ್‍ರೋಡ್ ಪ್ರೈಸ್‍ನ ಟುವೀಲರ್ ಖರೀದಿಸಲು, ರಿಜಿಸ್ಟರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ 2,999 ರೂಪಾಯಿ ಡೌನ್‍ಪೇಮೆಂಟ್ ಮಾಡಿದ್ರೆ ಆಯ್ತು. ಇನ್ನು 4,999 ರೂಪಾಯಿ ಡೌನ್ ಪೇಮೆಂಟ್ ಮಾಡಿದ್ರೆ , 84,987 ರೂಪಾಯಿ ಮೌಲ್ಯದ ಟುವೀಲರ್‍ನ್ನು ನೀವು ಖರೀದಿಸ್‍ಬಹುದು. ಈ ಖರೀದಿಗಳ ಮೇಲೆ ಬ್ರಾಂಡೆಡ್ ಹೆಲ್ಮೆಟ್, ಬ್ರಾಂಡೆಡ್...
ಸುದ್ದಿಸುಳ್ಯ

ಬೇಕರಿಯಲ್ಲಿ ಅಡುಗೆ ಗ್ಯಾಸ್ ಸೊರಿಕೆ: ವ್ಯಕ್ತಿಗೆ ಗಾಯ..! – ಕಹಳೆ ನ್ಯೂಸ್

ಸುಳ್ಯ : ಬೇಕರಿಯಲ್ಲಿ ಅಡುಗೆ ಗ್ಯಾಸ್ ಸೊರಿಕೆಯಾಗಿ ಬೆಂಕಿ ತಾಗಿ ವ್ಯಕ್ತಿಯೊಬ್ಬರಿಗೆ ಗಾಯವಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕು ಮರಕಂಜ ಗ್ರಾಮದ ನಿವಾಸಿ ಮಂಜುನಾಥ ಎಂಬವರು ಅರಂತೋಡಿನಲ್ಲಿರುವ ತಮ್ಮ ಅಣ್ಣನ ಬೇಕರಿಯಲ್ಲಿ ಬ್ರೆಡ್ ಮಾಡಲು ಓವೆನ್ ಬಿಸಿಯಾಗಲು ಗ್ಯಾಸ್ ನಲ್ಲಿಟ್ಟು ಬೆಂಕಿ ಹೊತ್ತಿಸಿದಾಗ ಅದರ ಒಳಗೆ ಗ್ಯಾಸ್ ತುಂಬಿದ್ದರಿಂದ ಒಮ್ಮೆಲೇ ಗ್ಯಾಸ್ ಹೊರಬಂದು ಮಂಜುನಾಥರ ಮುಖ ಮತ್ತು ಎದೆಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ...
ದಕ್ಷಿಣ ಕನ್ನಡಸುದ್ದಿಸುಳ್ಯ

ನದಿ ನೀರಿನಲ್ಲಿ ಮುಳುಗಿ ಆರು ವರ್ಷದ ಬಾಲಕ ಸಾವು – ಕಹಳೆ ನ್ಯೂಸ್

ಸುಳ್ಯ: ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಸುಳ್ಯ ತಾಲೂಕು ಪೈಚಾರು ದೊಡ್ಡೇರಿ ಎಂಬಲ್ಲಿ ನಡೆದಿದೆ. ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದ, ಆಂಧ್ರ ಮೂಲದ ಕುಟುಂಬಸ್ಥರು ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದರು. ನದಿಗೆ ಸ್ನಾನ ಮಾಡಲೆಂದು ಕುಟುಂಬದ ಹಿರಿಯರು ಮತ್ತು ಮಕ್ಕಳು ಹೋಗಿದ್ದು, ಸ್ನಾನ ಮಾಡುತ್ತಿದ್ದ ಸಂದರ್ಭ ಆರು ವರ್ಷದ ಮಗು ಕುಪ್ಪರಾ ಕಾಣೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರುವ ಅನುಮಾನದಿಂದ ಹುಡುಕಾಡಿದಾಗ ಪಕ್ಕದಲ್ಲಿ ಆತನ ಮೃತದೇಹ...
1 14 15 16 17 18 23
Page 16 of 23
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ