ಎಡನೀರು ಮಠಾಧೀಶರು ಬಹುಮುಖ ಪ್ರತಿಭಾ ಸಂಪನ್ನರು: ಸಂತಾಪ ಸೂಚಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್
ಧರ್ಮಸ್ಥಳ: ಪರಂಧಾಮ ಹೊಂದಿದ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಉತ್ತಮ ವಾಗ್ಮಿ, ಭಾಷಾ ಪ್ರಭುತ್ವ ಹೊಂದಿದ ವಿದ್ವಾಂಸರಾಗಿದ್ದು, ಸಂಗೀತ, ಕಲೆ, ಶಿಕ್ಷಣ, ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ, ಕೊಡುಗೆ ನೀಡಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಗೌರವ ನಮನ ಸಲ್ಲಿಸಿದ್ದಾರೆ. ಯಕ್ಷಗಾನ ಕಲೆಯಲ್ಲಿ ಶ್ರೀ ಗಳು ವಿಶೇಷ ಅಸಕ್ತಿ, ಪರಿಣತಿ ಹೊಂದಿದ್ದು, ತಮ್ಮ ಸುಮಧುರ ಕಂಠಸಿರಿಯ ಭಾಗವತಿಕೆಯಿಂದ ಅಪಾರ ಅಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದರು. ಮೂಲಭೂತ ಹಕ್ಕಿನ ವಿಚಾರವಾಗಿ...