Monday, March 31, 2025

ಯಕ್ಷಗಾನ / ಕಲೆ

ದಕ್ಷಿಣ ಕನ್ನಡಯಕ್ಷಗಾನ / ಕಲೆಸಂತಾಪಸುದ್ದಿ

ಯಕ್ಷರಂಗದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಇನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಹಲವು ದಶಕಗಳ ಕಾಲ ಯಕ್ಷ ಸೇವೆ ಮಾಡಿದ್ದಸಂಪಾಜೆ ಶೀನಪ್ಪ ರೈ ಅವರು ಇಂದು ನಿಧನರಾಗಿದ್ದಾರೆ. ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶೀನಪ್ಪ ರೈ ಅವರು ಮಂಗಳೂರಿನ ಪುತ್ರನ ಮನೆಯಲ್ಲಿ ವಾಸವಿದ್ದರು. ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಶೀನಪ್ಪ ರೈ ಅವರು ಜನಿಸಿದ್ದು ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ. ತಂದೆ ಕೂಡಾ ಯಕ್ಷಗಾನ ಕಲಾವಿದರಾಗಿದ್ದರು. ಆರಂಭಿಕ ಪಾಠವನ್ನು ತಂದೆಯಿಂದ ಕಲಿತ ಅವರು...
ದಕ್ಷಿಣ ಕನ್ನಡಯಕ್ಷಗಾನ / ಕಲೆಸಂತಾಪ

ಮಾಜಿ ಕಂಬಳ ಓಟಗಾರ ಜಯ ಶೆಟ್ಟಿ ಕಕ್ಯಪದವು ಇನ್ನಿಲ್ಲ – ದಶಕ ಕಾಲದ ನಂಬರ್ ಒನ್ ಓಟಗಾರ ಇನ್ನು ನೆನಪು ಮಾತ್ರ – ಕಹಳೆ ನ್ಯೂಸ್

ಪುಂಜಾಲಕಟ್ಟೆ : ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ  ಶೆಟ್ಟಿ  ಕಿಂಜಾಲು(65) ಅವರು ಅಸೌಖ್ಯದಿಂದ ಜೂ.27ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ  ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಜಯ ಶೆಟ್ಟಿ ಅವರು ಉದಯವಾಣಿಯಿಂದ ಕುಗ್ರಾಮವೆಂದು ಗುರುತಿಸಿದ್ದ ಉಳಿ ಗ್ರಾಮದಲ್ಲಿ ಸೌಲಭ್ಯಗಳ ಕೊರತೆಗಳ ಮಧ್ಯೆ ಉತ್ತಮ ಕೃಷಿ ಸಾಧನೆ ಮಾಡಿದ್ದರು. ಕಂಬಳಕ್ಷೇತ್ರದಲ್ಲಿ ಓಟಗಾರರರಾಗಿ ಪ್ರಖ್ಯಾತಿ ಪಡೆದಿದ್ದ ಅವರು...
ದಕ್ಷಿಣ ಕನ್ನಡಯಕ್ಷಗಾನ / ಕಲೆಸುಬ್ರಹ್ಮಣ್ಯ

ಕುಮಾರಿ ಸುದೀಕ್ಷಾ .ವಿ ಮುಡಿಗೇರಿದ ಬೆಸ್ಟ್ ಫಫರ‍್ಮೆನ್ಸ್ ಪ್ರಶಸ್ತಿ – ಸ್ಟಾರ್೧ ಕನ್ನಡ ವಾಹಿನಿ ನಡೆಸಿದ ‘ಶೋ ಯುವರ್ ಟ್ಯಾಟೆಂಟ್ 2021’ ಸ್ಪರ್ಧೆ – ಕಹಳೆ ನ್ಯೂಸ್

ಸ್ಟಾರ್ 1 ಕನ್ನಡ ವಾಹಿನಿ ನಡೆಸಿದ ಶೋ ಯುವರ್ ಟ್ಯಾಟೆಂಟ್ 2021 ರ ಆನ್ ಲೈನ್ ನೃತ್ಯ ಸ್ಪರ್ಧೆಯಲ್ಲಿ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯ ಕುಮಾರಿ ಸುದೀಕ್ಷಾ .ವಿರವರು ಭಾಗವಹಿಸಿ "best performance" ಪ್ರಶಸ್ತಿ ಪುರಸ್ಕಾರವನ್ನು ಪಡೆದಿರುತ್ತಾರೆ. ಇವರು ಕೌಕ್ರಾಡಿ ಆಲಂಪಾಡಿ ದಿ।ವೆಂಕಟೇಶ್.ಕೆ ಶ್ರೀಮತಿ ಹೇಮಾ.ವಿ ರವರ ಸುಪುತ್ರಿ.ಇವರು ಕುಶಾಲಪ್ಪ ನಮ್ಮ ಕಲಾವಿದೆರ್ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯಲ್ಲಿ ಅಕ್ಷಯ್ ಹೆಚ್ ಪುತ್ತೂರು, ಕಿರಣ್ ಮುರಳಿ ಮುರಳಿ ಬ್ರದರ್ಸ್...
ದಕ್ಷಿಣ ಕನ್ನಡಯಕ್ಷಗಾನ / ಕಲೆ

ಭರತನಾಟ್ಯದಲ್ಲಿ ಕುಮಾರಿ ಸನುಷಾರ ಮುಡಿಗೇರಿದ “ಸ್ವರ್ಣ ಕಲಾ ರತ್ನ” ರಾಜ್ಯ ಪ್ರಶಸ್ತಿ – ಕಹಳೆ ನ್ಯೂಸ್

ಅಕ್ಷರದೀಪ ಫೌಂಡೇಶನ್ ಸ್ನೇಹಜೀವಿ ಫೌಂಡೇಶನ್ ಹಾಗೂ ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಆಯೋಜಿಸಿದ, ರಾಜ್ಯಮಟ್ಟದ ಕ್ರೇಜಿ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಕುಮಾರಿ ಸನುಷಾ ಅವರಿಗೆ ಸ್ವರ್ಣ ಕಲಾ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ. ಆನ್ ಲೈನ್ ಮೂಲಕ ಆಯೋಜಿಸಿದ ಕ್ರೇಜಿ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಕುಮಾರಿ ಸನುಷಾ ಭಾಗವಹಿಸಿದ್ದು ಭರತನಾಟ್ಯ ವಿಭಾಗದಲ್ಲಿ ವಿಜೇತರಾಗಿ ಸ್ವರ್ಣ ಕಲಾ ರತ್ನ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬೂಡು...
ದಕ್ಷಿಣ ಕನ್ನಡಯಕ್ಷಗಾನ / ಕಲೆಸುದ್ದಿ

ಬಡ ಯಕ್ಷಗಾನ ಕಲಾವಿದರಿಗೆ ಉಚಿತ ರೇಷನ್ ; ಯಕ್ಷಧ್ರುವ ಪಟ್ಲ ಫೌಂಡೇಶನ್ ಘೋಷಣೆ – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನ ಕರಾವಳಿಯ ಪ್ರಮುಖ ಜಾನಪದ ಕಲೆ. ಯಕ್ಷಗಾನವನ್ನು ನಂಬಿಕೊಂಡು ಸಾವಿರಾರು ಕಲಾವಿದರು ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ತತ್ತರಿಸಿದ ಯಕ್ಷಗಾನ ಕಲಾವಿದರು ಈ ಬಾರಿಯೂ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದಾರೆ. ಅಂತವರ ನೆರವಿಗೆ ಮುಂದಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಚಿತ ರೇಷನ್ ವಿತರಣೆಯ ಘೋಷಣೆ ಮಾಡಿದೆ. ಲಾಕ್‍ಡೌನ್‍ನಿಂದ ಮೇಳದ ತಿರುಗಾಟವಿಲ್ಲದೆ ಮತ್ತು ಮುಂದಿನ 4-5 ತಿಂಗಳು ಯಾವ ಕಾರ್ಯಕ್ರಮವೂ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರ ಈ ಸ್ಥಿತಿಯನ್ನು...
ಉಡುಪಿಕುಂದಾಪುರಯಕ್ಷಗಾನ / ಕಲೆಸುದ್ದಿ

ಬಡಗುತಿಟ್ಟಿನ ಪ್ರಸಿದ್ದ ಮೇಳದ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಆಶ್ಚರ್ಯಕರ ರೀತಿಯಲ್ಲಿ ನಾಪತ್ತೆ ; ಪತ್ನಿ ಅಶ್ವಿನಿ ಕೊಂಡದಕುಳಿಯಿಂದ ಪೊಲೀಸರಿಗೆ ದೂರು – ಕಹಳೆ ನ್ಯೂಸ್

ಉಡುಪಿ, ಎ 28 : ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ನಾಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮತ್ಯಾಡಿಯ ಗುಡ್ಡೆಯಂಗಡಿ ನಿವಾಸಿ ಉದಯ ಹೆಗಡೆ ಕಡಬಾಳ ನಾಪತ್ತೆಯಾಗಿರುವ ವ್ಯಕ್ತಿ. ಪ್ರಸಿದ್ಧ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪುತ್ರಿ ಅಶ್ವಿನಿ ಕೊಂಡದಕುಳಿ ರವರನ್ನು ಪ್ರೀತಿಸಿ ವಿವಾಹವಾಗಿದ್ದರು. ಪೆರ್ಡೂರು ಮೇಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದಯ್ ಎ. 21 ರಂದು ಯಕ್ಷಗಾನದ ತಿರುಗಾಟಕ್ಕಾಗಿ ಮನೆಯಿಂದ ತೆರಳಿದ್ದರು. ಬಳಿಕ ಯಾವುದೇ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಗಾಬರಿಗೊಂಡ ಪತ್ನಿ...
ದಕ್ಷಿಣ ಕನ್ನಡಯಕ್ಷಗಾನ / ಕಲೆ

” ನಾಟ್ಯಹಂಸ ಸುಮಂಗಲಾ ” – ನೃತ್ಯ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಬಹುಮುಖ ಪ್ರತಿಭೆ – ಕಹಳೆ ನ್ಯೂಸ್

ಯಕ್ಷಗಾನ, ತಾಳಮದ್ದಳೆ, ಸಂಗೀತ, ಭರತನಾಟ್ಯ ಹೀಗೆ ಎಲ್ಲಾ ರಂಗದಲ್ಲಿ ಗುರುತಿಸಲ್ಪಡುವ ಕಲಾವಿದರು ಬಹು ವಿರಳ, ಆದರೆ ಅಂತಹ ಕಲಾವಿದರ ಸಾಲಿನಲ್ಲಿ ಕರಾವಳಿಯಲ್ಲಿ ಕೇಳಿ ಬರುವ ಕೆಲವೇ ಕೆಲವು ಹೆಸರುಗಳಲ್ಲಿ ನೃತ್ಯ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ ರಾವ್ ಪ್ರಮುಖರು. ಮಂಗಳೂರಿನ ಉರ್ವದಲ್ಲಿ ಪತಿ ಬಿ. ರತ್ನಾಕರ ರಾವ್ ಅವರ ಜೊತೆ ನೆಲೆಸಿದ್ದು, ಒಬ್ಬ ಅಪ್ರತಿಮ ಕಲಾವಿದೆಯಾಗಿ ಕರಾವಳಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ತಂದೆ ಪಿ. ಶ್ರೀರಾಮ ರಾವ್ ,...
ದಕ್ಷಿಣ ಕನ್ನಡಪುತ್ತೂರುಯಕ್ಷಗಾನ / ಕಲೆಸುದ್ದಿ

ಇಂದು ಉಪ್ಪಳಿಗೆಯಲ್ಲಿ ಕಟೀಲು ಮೇಳದವರಿಂದ ಶ್ರೀವಿಷ್ಣು ಬಯಲಾಟ ಸೇವಾ ಸಮಿತಿಯವರು ಅರ್ಪಿಸುವ 5ನೇ ವರ್ಷದ ಅದ್ದೂರಿ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ – ಕಹಳೆ ನ್ಯೂಸ್

ಪುತ್ತೂರು : ಉಪ್ಪಳಿಗೆಯ ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿಯವರು ಅರ್ಪಿಸುವ 5ನೇ ವರ್ಷದ ಯಕ್ಷಗಾನ ಬಯಲಾಟ ಇಂದು ಉಪ್ಪಳಿಗೆ ಶಾಲಾ ವಠಾರದಲ್ಲಿ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರು ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ವಿದ್ಯುತ್ ಅಲಂಕೃತ ಭವ್ಯ ರಂಗ ಮಂಟಪದಲ್ಲಿ ಆಡಿತೋರಿಸಲಿದ್ದು, 8.30ಕ್ಕೆ ಚೌಕಿಪೂಜೆ ನಡೆದು ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಹಳೆ ನ್ಯೂಸ್ ಗೆ ಸಮಿತಿ ಅಧ್ಯಕ್ಷರಾದ ಶರತ್...
1 8 9 10 11 12
Page 10 of 12
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ