Saturday, April 12, 2025

ರಾಷ್ಟ್ರೀಯ

ರಾಷ್ಟ್ರೀಯ

ಚೀನಾಗೆ ಪ್ರಧಾನಿ ಮೋದಿ ತರಾಟೆ -ಕಹಳೆ ನ್ಯೂಸ್

ನವದೆಹಲಿ/ಕೊಪೆನ್‍ಹಗೆನ್, ಸೆ.29-ಪ್ರಮುಖ ವಸ್ತುಗಳ ಜಾಗತಿಕ ಪೂರೈಕೆ ಸರಪಳಿಗಾಗಿ ಒಂದೇ ಮೂಲವನ್ನು ಅವಲಂಬಿಸುವುದು ಎಷ್ಟು ಗಂಡಾಂತರಕಾರಿ ಎಂಬುದನ್ನು ಕೋವಿಡ್-19 ವೈರಸ್ ಪಿಡುಗು ತೋರಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಗತಿಕ ಪೂರೈಕೆಗಾಗಿ ಒಂದೇ ದೇಶದ (ಚೀನಾ) ಮೇಲೆ ಅವಲಂಬಿತವಾಗುವುದು ಸರಿಯಲ್ಲ ಎಂದು ಅವರು ವಿಶ್ವದ ರಾಷ್ಟ್ರಗಳಿಗೆ ಕರೆ ಸಲಹೆ ಮಾಡಿದ್ದಾರೆ. ಕೊರೊನಾ ವೈರಸ್ ಪಿಡುಗಿನಿಂದ ದೇಶ-ದೇಶಗಳ ನಡುವೆ ಸಂಪರ್ಕಕ್ಕೆ ಅಡ್ಡಿಯಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ...
ರಾಷ್ಟ್ರೀಯ

ನಮಾಮಿ ಗಂಗೆ: ಇಂದು ಪ್ರಧಾನಿ ಮೋದಿಯಿಂದ ಆರು ಬೃಹತ್ ಯೋಜನೆಗಳ ಉದ್ಘಾಟನೆ-ಕಹಳೆ ನ್ಯೂಸ್

ನವದೆಹಲಿ: ಉತ್ತರಾಖಂಡದಲ್ಲಿ 'ನಮಾಮಿ ಗಂಗೆ' ಯೋಜನೆ ಅಡಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಆರು ಬೃಹತ್ ಯೋಜನೆಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಲಿದ್ದಾರೆ. 68 ಎಂಎಲ್‌ಡಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ, ಹರಿದ್ವಾರದ ಚಾಂಡಿ ಘಾಟ್‌ನಲ್ಲಿ 'ಗಂಗಾ ಅವಲೋಕನ್‌' ವಸ್ತುಸಂಗ್ರಹಾಲಯ, ಹರಿದ್ವಾರದ ಜಗ್ಜೀತ್‌ಪುರದಲ್ಲಿ ಅಸ್ತಿತ್ವದಲ್ಲಿರುವ 27 ಎಂಎಲ್‌ಡಿ ಎಸ್‌ಟಿಪಿ ಘಟಕಗಳ ನವೀಕರಣ ಮತ್ತು ಸರಾಯ್‌ನಲ್ಲಿ 18 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಯೋಜನೆಗಳು ಸೇರಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ....
ರಾಷ್ಟ್ರೀಯ

ಅನ್ನದಾತರಿಗೆ ಅನ್ಯಾಯ ಆಗಲು ಬಿಡಲ್ಲ : ಸಿಎಂ ಯಡಿಯೂರಪ್ಪ-ಕಹಳೆ ನ್ಯೂಸ್

ಬೆಂಗಳೂರು,ಸೆ.28- ರೈತನ ಮಗನಾಗಿ ನಾಲ್ಕು ದಶಕಗಳ ಕಾಲ ರೈತರ ಪರ ಹೋರಾಟ ಮಾಡುತ್ತಾ, ನಾಲ್ಕು ಬಾರಿ ಸಿಎಂ ಆಗಿರುವ ನಾನು ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಐತಿಹಾಸಿಕ ನಿರ್ಣಯಗಳಾಗಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು. ತುರ್ತು ಪ್ರತಿಕಾಗೋಷ್ಠಿ ನಡೆಸಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ನನ್ನ ಬೆಳೆ, ನನ್ನ ಹಕ್ಕು. ರೈತರು ಬೆಳೆದ ಬೆಳೆಯನ್ನು...
ರಾಷ್ಟ್ರೀಯ

ಭಗತ್‍ಸಿಂಗ್ ಶೌರ್ಯ ಎಲ್ಲಾ ವಯಸ್ಸಿನವರಿಗೂ ಸೂರ್ತಿ : ಪ್ರಧಾನಿ ಮೋದಿ-ಕಹಳೆ ನ್ಯೂಸ್

ನವದೆಹಲಿ,ಸೆ.28- ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿ ಭಗತ್‍ಸಿಂಗ್ ಅವರ ಶೌರ್ಯ ಎಲ್ಲಾ ವಯಸ್ಸಿನವರಿಗೂ ಸೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಿರುವ ಪ್ರಧಾನಿಯವರು, ಚಿಕ್ಕ ವಯಸ್ಸಿನಿಂದಲೇ ಬ್ರಿಟಿಷ್ ಆಡಳಿತವನ್ನು ಕ್ಕರಿಸಿದ್ದ ಭಗತ್‍ಸಿಂಗ್ ಅವರು ಕ್ರಾಂತಿಕಾರಿ ಹೋರಾಟದಿಂದಲೇ ಎಲ್ಲರನ್ನು ಹುರಿದುಂಬಿಸಿ ಆಂಗ್ಲರ ವಿರುದ್ಧ ಹೋರಾಡಿದ್ದರು ಎಂದು ಸ್ಮರಿಸಿದ್ದಾರೆ. ಕೇವಲ 23 ವರ್ಷದವರಾಗಿದ್ದಾಗ ಅವರನ್ನು ಗಲ್ಲಿಗೇರಿಸಲಾಯಿತು. ಭಗತ್...
ರಾಷ್ಟ್ರೀಯ

ರಫೇಲ್ ಫೈಟರ್‌ ಜೆಟ್‌ನ ಮೊದಲ ಮಹಿಳಾ ಪೈಲಟ್‌ ಶಿವಾಂಗಿ ಸಿಂಗ್-ಕಹಳೆ ನ್ಯೂಸ್

ನವದೆಹಲಿ: ರಫೇಲ್ ಯುದ್ಧ ವಿಮಾನ ಚಲಾಯಿಸುವ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ವಾರಣಾಸಿಯ ಫೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್. ಸೆಪ್ಟೆಂಬರ್ 10ರಂದು ಇವರು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ನೇಮಕಗೊಂಡಿದ್ದರು. ಶಿವಾಂಗಿ ಅಂಬಾಲದಲ್ಲಿ ರಫೇಲ್ ವಿಮಾನವನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದಾರೆ. ಶೀಘ್ರವೇ ಇವರು ಅಂಬಾಲದ ಗೋಲ್ಡನ್ ಆಯರೋಸ್ ವಾಯುನೆಲೆಯಲ್ಲಿರುವ 17 ಸ್ಕ್ವಾಡ್ರನ್‌ನ ರಫೇಲ್ ಯುದ್ಧ ವಿಮಾನಗಳನ್ನು ಚಲಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ವಾಯುಸೇನೆಯಲ್ಲಿರುವ 10 ಮಹಿಳಾ ಫೈಟರ್...
ರಾಷ್ಟ್ರೀಯಸಿನಿಮಾಸುದ್ದಿ

Breaking News : ಜನಪ್ರಿಯ ಗಾಯಕ ಎಸ್​​ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯ ಅತ್ಯಂತ ಗಂಭೀರ – ಕಹಳೆ ನ್ಯೂಸ್

ಚೆನ್ನೈ, ಸುದ್ದಿಒನ್, (ಸೆ.24): ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣಿಯನ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕರೋನಾದಿಂದ ಚೇತರಿಸಿಕೊಂಡ ನಂತರ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 40 ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಸಹಾ ಇನ್ನೂ ಅವರು ವೈದ್ಯಕೀಯ ತಪಾಸಣೆಯಲ್ಲಿದ್ದಾರೆ UNDER MEDICAL OBSERVATION). ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಮತ್ತೆ ಅನಾರೋಗ್ಯದ ಉಂಟಾದ ಕಾರಣದಿಂದ ಅಭಿಮಾನಿಗಳ ಎದೆಬಡಿತವನ್ನು ಮತ್ತಷ್ಟು ಹೆಚ್ಚಾದಂತಾಗಿದೆ. ಕರೋನಾ ಪಾಸಿಟಿವ್...
ಬೆಂಗಳೂರು

ಸ್ಯಾಂಡಲ್ ವುಡ್ ಹಾಸ್ಯನಟ ರಾಕ್ ಲೈನ್ ಸುಧಾಕರ್ ನಿಧನ -ಕಹಳೆ ನ್ಯೂಸ್

ಬೆಂಗಳೂರು, ಸೆ.24 (ಹಿ.ಸ) : ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನರಾಗಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣದ ವೇಳೆ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೆ ನಟ ರಾಕ್‍ಲೈನ್ ಸುಧಾಕರ್ ಕೊರೊನಾ ಪರೀಕ್ಷೆ ಮಾಡಿಸಿದ್ದು, ಈ ವೇಳೆ ಪಾಸಿಟಿವ್ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಸಿನಿಮಾ ಕೆಲಸಗಳಲ್ಲಿ ಸುಧಾಕರ್ ಸಕ್ರಿಯರಾಗಿದ್ದರು. ಇಂದು ಸಹ ಸುಧಾಕರ್ ಚಿತ್ರೀಕರಣಕ್ಕೆ ಹಾಜರಾಗಿದ್ದರು....
ರಾಜ್ಯರಾಷ್ಟ್ರೀಯ

Breaking News : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನ – ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (55) ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ರಾಜ್ಯ ಸಚಿವ ಸುರೇಶ್ ಅಂಗಡಿ (55) ನಿಧನರಾಗಿದ್ದಾರೆ....
1 183 184 185 186 187 195
Page 185 of 195
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ