Saturday, February 15, 2025

the latest news

ಸುದ್ದಿ

ಸಿವಿಲ್ ಇಂಜಿನಿಯರಿಂಗ್ ಫೀಲ್ಡಿಗೆ ಈಶಾವಾಸ್ ಪಾದಾರ್ಪಣೆ

ಪುತ್ತೂರು:ನಗರದ ಬೊಳುವಾರು ಹಿರಣ್ಯ ಸಂಕೀರ್ಣದಲ್ಲಿ ಈಶಾವಾಸ್ ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟನ್ಸಿ ಕಛೇರಿ ಶುಭಾರಂಭಗೊಂಡಿತು. ದೀಪ ಬೇಳಗಿಸುದರ ಮೂಲಕ ಉದ್ಘಾಟನೆಯನ್ನು ಮೀನಾಕ್ಷಿ ಶಿವರಾಮ ಪದ್ಯಾಣ ಮತ್ತು ರಾಜೇಶ್ವರಿ ಮಹಾದೇವ ಮಣಿಲಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ವೆಂಕಟರಾಜ್, ಯಕ್ಷಗಾನ ಕಲಾವಿದರಾದ ಚೈತನ್ಯ ಕೃಷ್ಣ ಪದ್ಯಾಣ, ಶ್ರೀರಾಮ್ ಕಂಷ್ರಕ್ಷನ್ ಮಾಲಕರಾದ ಪ್ರಸನ್ನ ಭಟ್, ಸಾವಿತ್ರಮ್ಮ ಮಣಿಲಾ ಮಣಿಲಾ ಮಹಾದೇವ ಶಾಸ್ತ್ರಿ ಪದ್ಯಾಣ ಶಿವರಾಮ ಭಟ್ ಚೈತನ್ಯ ಕೃಷ್ಣ ಪದ್ಯಾಣ, ರಮಾನಂದ ನೆಲ್ಲಿತ್ತಾಯ, ಬಲ್ನಾಡು, ಶಶಾಂಕ ನೆಲ್ಲಿತ್ತಾಯ ಬಲ್ನಾಡು, ಪೆರುವಡಿ ಉದಯ ಭೀಮ ಭಟ್, ವಳಕ್ಕುಂಜ ಉದನೇಶ್ವರ ಭಟ್, ಈಶಾವಾಸ್ ನ ಮಾಲಕರಾದ ಶಿವಶಂಕರ ಮಣಿಲ ಮತ್ತು ಈಶಾನ್ಯ ಪದ್ಯಾಣ ಮೊದಲಾದವರು ಉಪಸ್ಥಿತರಿದ್ದರು....
ಸುದ್ದಿ

ರಾಘವೇಶ್ವರ ಶ್ರೀ ಆಶೀರ್ವಾದ ಪಡೆದ ಕೇಂದ್ರ ಸಚಿವ ಅಂನತ ಕುಮಾರ್ ಹೆಗ್ಡೆ.

ಹೊನ್ನಾವರ : ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಶ್ರೀಗಳಿಂದ ಕೆಕ್ಕಾರಿನ ರಘೋತ್ತಮ ಮಠದಲ್ಲಿ ವಿಜಯದಶಮಿಯಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಭೇಟಿ ನೀಡಿ ಆರ್ಶೀವಾದ ಪಡೆದು. ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು....
ಸುದ್ದಿ

ಕೊರಗಜ್ಜನ ನಿಂದನೆ ಉರಿದುಬಿದ್ದ ಹಿಂದೂ ಸಂರಕ್ಷಣಾ ಸಮಿತಿ.

ಮಂಗಳೂರು : ಹಿಂದೂ ಸಮಾಜವನ್ನು ಗುರಿಯಾಗಿಸಿ ಕೆಲವು ಅತೀ ಬುದ್ದಿ ಜೀವಿಗಳು ಸಾಮಾಜಿಕ ಜಾಲತಾಣದಲ್ಲಿ ಹಲವು ಸಮಯಗಳಿಂದ ಅಪಪ್ರಚಾರ ಮಾಡುತ್ತಾ ಹಿಂದೂ ದೇವರುಗಳನ್ನು ಅವಾಚ್ಯ ಶಭ್ಧಗಳಿಂದ ನಿಂದಿಸುತ್ತಾ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತ ಕೆಲಸವನ್ನು ನಿರಾತಂಕವಾಗಿ ಮಾಡುತ್ತಾ ಬರುತಿದ್ದಾರೆ. ಆದರೆ ನಮ್ಮ ರಾಜಕೀಯ ನೇತಾರರ ಜಾಣ ಕುರುಡು ಅವರನ್ನು ಇನ್ನಷ್ಟು ಅದೇ ಕೆಲಸಕ್ಕೆ ಪ್ರೇರೇಪಿಸುತಿದೆಯೇ ಹೊರತು ಅವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತಿಲ್ಲ ಅದರ ಪರಿಣಾಮ 27-9-2017ರಂದು angel nayana Prajwal (ವಾಸ್ತವಕ್ಕೆ ಇದು ಒಂದು ಹೆಣ್ಣಿನ ಹೆಸರಾಗಿ ಕಂಡರೂ ಇದು ಫೇಕ್ ಅಕೌಂಟ್ ಎನ್ನುದರಲ್ಲಿ ಎರಡು ಮಾತಿಲ್ಲ) Santhosh uppar ಎಂಬವರ ಪೋಸ್ಟ್ ಒಂದನ್ನು ಶೇರ್ ಮಾಡಿ ಅದರಲ್ಲಿ ತುಳುನಾಡಿನ ಆರಾಧ್ಯ ಮೂರ್ತಿಯಾದ ಕೊರಗಜ್ಜನ ಬಗ್ಗೆ ಅಶ್ಲೀಲ-ಅವಾಚ್ಯ ಶಬ್ದಗಳಿಂದ ಕಾಮೆಂಟ್ ಹಾಕಿದ್ದು ಸಂಘಟಿತ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುತ್ತದೆ. ಇವರ ಈ...
ಸುದ್ದಿ

ಬಿ.ಎಸ್.ವೈ.ಯೇ ನಡೆಸಲಿದ್ದಾರೆ ದಸರ!!

ಬೆಂಗಳೂರು : ಮುಂದಿನ ದಸರಾ ನನ್ನ ನೇತೃತ್ವದಲ್ಲೇ ನಡೆಸುವುದಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿತ ಬಿಎಸ್‌ವೈ 'ಮುಂದಿನ ದಸರಾ ಯಾರು ನಡೆಸಬೇಕೆನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ದೈವ ಬಲ ಮತ್ತು ಜನ ಬಲ ನಮ್ಮ ಪರವಾಗಿದ್ದು ನನ್ನ ನೇತೃತ್ವದಲ್ಲೇ ದಸರಾ ನಡೆಸುವ ವಿಶ್ವಾಸವಿದೆ' ಎಂದರು. ದಸರಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ 'ಮುಂದಿನ ದಸರಾ ನಾವೇ ಮಾಡುವುದು. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ. ನನ್ನ ನೇತೃತ್ವದಲ್ಲೇ ಚುನಾವಣೆ ನಡೆಸುವುದು' ಎಂದಿದ್ದರು....
ಸುದ್ದಿ

ಭಾರತದ ದಿಟ್ಟತನಕ್ಕೆ ಚೀನಾ ತಲೆಬಾಗಿದೆ.

ಭಾರತ-ಚೀನಾ ಹೊಸ ಅಧ್ಯಾಯಕ್ಕೆ ನೆರೆಯ ರಾಷ್ಟ್ರ ಚೀನಾ ಕರೆ... ನವದೆಹಲಿ(ಅ.01): ಭಾರತ-ಚೀನಾ ಇತಿಹಾಸದ ಪುಟಗಳನ್ನು ತೆರೆದು ನೋಡಿ, ಹೊಸ ಅಧ್ಯಾಯವನ್ನು ಆರಂಭಿಸಬೇಕು. ದ್ವಿಪಕ್ಷೀಯ ನೆಲೆಯಲ್ಲಿ ಎರಡೂ ರಾಷ್ಟ್ರಗಳು ಸಾಕಷ್ಟು ಪ್ರಗತಿ ಸಾಧಿಸಿವೆ ಎಂದು ಭಾರತಕ್ಕೆ ಚೀನಾದ ರಾಯಭಾರಿ ಲುವೊ ಜವೋ ಹ್ವಿ ಹೇಳಿದ್ದಾರೆ. ಡೋಕ್ಲಾಮ್ ಬಿಕ್ಕಟ್ಟು ಆರಂಭವಾದ ಬಳಿಕ ಸರಣಿಯಾಗಿ ಭಾರತಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದ ಚೀನಾ, ಇದೀಗ ಶಾಂತಿಯ ಪ್ರಸ್ತಾಪ ಮುಂದಿಟ್ಟಿದೆ. ಭಾರತ ಹಾಗೂ ಚೀನಾ ಒಂದಾದರೆ ಹನ್ನೊಂದು ಆಗುತ್ತದೆ ಎಂದು ಚೀನಾ ರಾಯಭಾರಿ ಒಗ್ಗಟ್ಟಿನ ಮೂಲ ಮಂತ್ರ ಪಠಿಸಿದ್ದಾರೆ. ಕ್ಸಿಯಾಮೆನ್‌'ನಲ್ಲಿ ನಡೆದ ಬ್ರಿಕ್ಸ್ ಸಮಾವೇಶದ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್ ಭೇಟಿಯಾಗಿ, ಸಾಮರಸ್ಯ ಮತ್ತು ಸಹಕಾರದ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ....
ಸುದ್ದಿ

ಸಂಪರ್ಕಿಸಿ

ವಿಳಾಸ:- ಸುದರ್ಶನ್ಸ್ ಕಂಮ್ಯುನಿಕೇಷನ್ಸ್ ಜಿಲ್ ಟ್ರೇಡ್ ಸೆಂಟರ್ ಬಂಟರ ಭವನದ ಮುಂಭಾಗ ಕೊಂಬೆಟ್ಟು ಕಾಲೇಜು ರಸ್ತೆ ಪುತ್ತೂರು-574201 ಮೊಬೈಲ್:- 8105291288 ಇಮೇಲ್:- newskahale@gmail.com (ಸುದ್ದಿಗಳನ್ನು,ಪೋಟೋಗಳನ್ನು ನೀವು ನಮಗೆ...
1 4,382 4,383 4,384
Page 4384 of 4384