Recent Posts

Saturday, September 21, 2024

archiveಕಹಳೆ ನ್ಯೂಸ್

ದಕ್ಷಿಣ ಕನ್ನಡಸುದ್ದಿ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಜ್ಯೋತಿನಗರದ ಮೂಲಭೂತ ಸೌಕರ್ಯದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ಉತ್ತರ ವಾರ್ಡ್ ನಂಬ್ರ 13ರ ಜ್ಯೋತಿನಗರ ಪ್ರದೇಶದಲ್ಲಿ ಮೂಲಭೂತ ಸೌಕರ್ಯದ ಕಾಮಗಾರಿಗಳಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶರತ್ ಕುಮಾರ್ ಕುಂಜತ್ತಬೈಲ್, ಪಕ್ಷದ ಪ್ರಮುಖರಾದ ಗುರುರಾಜ್ ಪಾಟೀಲ್, ಶರಣ್ ಶೆಟ್ಟಿ ಜ್ಯೋತಿನಗರ, ಗಣೇಶ ಕುಲಾಲ್, ಪ್ರಕಾಶ್, ಸ್ಥಳೀಯ ಭಾಗದ ಪ್ರಮುಖರಾದ ಮಲ್ಲಣ್ಣ, ನಾಗಪ್ಪ,...
ರಾಜ್ಯಸುದ್ದಿ

‘ಡಿ. 28 ರಿಂದ ರಾಜ್ಯದಲ್ಲಿ ಮತ್ತೆ ನೈಟ್ ಕಫ್ರ್ಯೂ ಜಾರಿ’ : ಸಚಿವ ಡಾ.ಸುಧಾಕರ್- ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ನೈಟ್ ಕಫ್ರ್ಯೂ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಡಾ. ಸುಧಾಕರ್, ಡಿಸೆಂಬರ್ 28 ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ 10 ದಿನ ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದೆ. ಹೊಸ ವರ್ಷದ ಆಚರಣೆ ವೇಳೆ ಕೊರೊನಾ ಮತ್ತು ಒಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು....
ದಕ್ಷಿಣ ಕನ್ನಡಸುದ್ದಿ

ಕೋವಿಡ್ ಸೋಂಕಿನಿಂದ ಮೃತಪಟ್ಟ ಬೋಳೂರು ವಾರ್ಡುನ ಕುಟುಂಬಕ್ಕೆ ಪರಿಹಾರ ಧನ ಹಸ್ತಾಂತರಿಸಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ರಾಜ್ಯ ಸರಕಾರವು ಘೋಷಿಸಿರುವ 1 ಲಕ್ಷ ಪರಿಹಾರ ಧನವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಬೋಳೂರು ವಾರ್ಡುನ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಬೋಳೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರುಗಳಾದ ಗಣೇಶ್ ಕುಲಾಲ್, ಜಯಾನಂದ ಅಂಚನ್, ಜಯಲಕ್ಷ್ಮಿ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂಧ್ಯಾ ಮೋಹನ್ ಆಚಾರ್, ವೀಣಾ ಮಂಗಲ, ಚಂದ್ರಾವತಿ ವಿಶ್ವನಾಥ್,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಭಯೋತ್ಪಾದಕ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಹಾಗೂ ದೇಶದ್ರೋಹದ ಕೇಸ್ ದಾಖಲಿಸುವಂತೆ ಗೃಹ ಸಚಿವರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ – ಕಹಳೆ ನ್ಯೂಸ್

ರಾಜ್ಯದ ಹಲವು ಕಡೆ ಗಲಭೆ, ದೊಂಬಿ, ಕೊಲೆ, ಕೊಲೆಯತ್ನ, ನಡೆಸಿರುವಂತಹ ಹಾಗೂ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇರುವಂತಹ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಕೊಲೆ ಯತ್ನ ಪ್ರಕರಣದ ಆರೋಪಿಗಳ ಪರವಾಗಿ ಪ್ರತಿಭಟನೆ ಹೆಸರಿನಲ್ಲಿ ದೊಂಬಿ ನಡೆಸಿ ಪೋಲಿಸರ ಕೊಲೆಯತ್ನ ನಡೆಸಿರುವಂತಹ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಾನ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಉಪ್ಪಿನಂಗಡಿ ಪೋಲೀಸ್ ಠಾಣೆ ಮೇಲೆ ದಾಳಿ ಮಾಡಿದ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬಂದಾರು ಮೈದಾನದಲ್ಲಿ ಡಿ.25 ಹಾಗೂ 26ರಂದು ನಡೆಯಲಿರುವ ಆಹ್ವಾನಿತ 8 ತಂಡಗಳ ಅಂಡರ್ ಆರ್ಮ್‍ಕ್ರಿಕೆಟ್ ಪಂದ್ಯಾಟ ಬಂದಾರು ಪ್ರೀಮಿಯರ್ ಲೀಗ್ ಉದ್ಘಾಟನೆ- ಕಹಳೆ ನ್ಯೂಸ್

ಬೆಳ್ತಂಗಡಿ : ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ- ಮುಗೇರಡ್ಕ, ಮೊಗ್ರು ಬೆಳ್ತಂಗಡಿ ಇದರ ವತಿಯಿಂದ ಲೀಗ್ ಮಾದರಿಯ ಆಹ್ವಾನಿತ 8 ತಂಡಗಳ ಅಂಡರ್ ಆರ್ಮ್‍ಕ್ರಿಕೆಟ್ ಪಂದ್ಯಾಟ ಬಂದಾರು ಪ್ರೀಮಿಯರ್ ಲೀಗ್‍ ಇಂದು ಉದ್ಘಾಟನೆಗೊಂಡಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕ್ರಿಕೆಟ್ ಪಂದ್ಯಾಟವನ್ನುಉದ್ಘಾಟಿಸಿದ್ರು. ಇದೇ ಪಂದ್ಯಾಟದಲ್ಲಿ ಹರಿಯಾಣ ವಿಶ್ವ ವಿದ್ಯಾಲಯದಲ್ಲಿ ನಡೆದರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ತಾಲೂಕಿನ ಕ್ರೀಡಾಪಟುಗಳಾದ ಅಭಿಶೃತ್ ಮುರ, ಸುಜಿತ್ ಬಿ.ಕೆ ಶ್ರೀರಾಮನಗರ,...
ಸುದ್ದಿ

ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಬಸ್ ನಿರ್ವಾಹಕ – ಕಹಳೆ ನ್ಯೂಸ್

ಚಿಕ್ಕಮಗಳೂರು : ಕೆಎಸ್‍ಆರ್ ಟಿಸಿ ಬಸ್ ನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ನಡೆದಿದೆ. ವಿಜಯ್ ( 43) ಮೃತ ನಿರ್ವಾಹಕ ಚಿಕ್ಕಮಗಳೂರು-ಉಡುಪಿ ಕೆಎಸ್‍ಆರ್ ಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬಸ್ ಹೊರಟಿದೆ. ಮಾರ್ಗ ಮಧ್ಯೆಯೇ ನಿರ್ವಾಹಕ ವಿಜಯ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಸ್ ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ....
ದಕ್ಷಿಣ ಕನ್ನಡಸುದ್ದಿ

ಬೈಕ್‍ನಲ್ಲಿ ರನ್ ಆಫ್ ಕಛ್‍ನತ್ತ ಹೊರಟ ಮಂಗಳೂರಿನ ಯುವತಿಯರು- ಕಹಳೆ ನ್ಯೂಸ್

ಮಂಗಳೂರು : ಎಲ್ಲರಿಗೂ ಒಂದೊಂದು ರೀತಿಯ ಆಸೆಗಳಿರುತ್ತದೆ. ಅದೇ ರೀತಿ ಮಂಗಳೂರಿನ ಈ ಯುವತಿಯರಿಗೆ ದೇಶ ಸುತ್ತಬೇಕೆಂಬ ಆಸೆ, ಅದೂ ಬೈಕ್‍ನಲ್ಲೇ. ಹುಡುಗರು ಬೈಕ್ ಮೇಲೆ ನಾಲ್ಕು ಬ್ಯಾಗ್ ಏರಿಸಿ ದೇಶ ಸುತ್ತುತ್ತಾರೆ. ನಮಗ್ಯಾಕೆ ಆಗಲ್ಲ ಅಂತಾ ನಿರ್ಧರಿಸಿದ ಯುವತಿಯರು ಈಗ ಬೈಕ್ ಮೇಲೆ ಬ್ಯಾಗ್ ಹಾಕಿ ಹೊರಟು ನಿಂತಿದ್ದಾರೆ. ಮಂಗಳೂರಿನ ಕೀರ್ತಿ ಉಚ್ಚಿಲ್, ಪೂಜಾ ಜೈನ್, ದಿವ್ಯಾ ಪೂಜಾರಿ, ಅಪೂರ್ವ ಮಂಗಳೂರಿನಿಂದ ರನ್ ಆಫ್ ಕಛ್‍ಗೆ ಬೈಕ್‍ನಲ್ಲಿ ಹೊರಟ...
ಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಮಾನ್ವಿತಾ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕೇತ್ರಕ್ಕೆ ಟಗರು ಸಿನಿಮಾ ನಾಯಕಿ ನಟಿ ಮಾನ್ವಿತಾ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ನಟಿ ಮಾನ್ವಿತ ‘ತುಂಬಾ ಜನರಿಗೆ ನಾನು ಮಂಗಳೂರಿನವಳು ಎಂಬುದು ಗೊತ್ತಿಲ್ಲ, ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರ ಕಥೆ ಸಿಕ್ಕರೆ ನಟಿಸಲು ಸಿದ್ಧಳಿದ್ದೇನೆ' ಎಂದು ಹೇಳಿದರು. 'ಹೈದರಾಬಾದ್‌ನಲ್ಲಿ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದೇನೆ. ಒಳ್ಳೆಯ ಕನ್ನಡ ಚಿತ್ರಗಳ ನಿರ್ಮಿಸುವ ಗುರಿ ಇದೆ ಅದಕ್ಕಾಗಿ ದೇವರ ಆಶೀರ್ವಾದಕ್ಕಾಗಿ ಇಲ್ಲಿಗೆ...
1 23 24 25 26 27 126
Page 25 of 126