Saturday, September 21, 2024

archiveಕಹಳೆ ನ್ಯೂಸ್

ದಕ್ಷಿಣ ಕನ್ನಡಸುದ್ದಿ

ಶ್ರೀನಿಧಿ ಮೊಬೈಲ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಫ್ಟ್ ಸ್ಕೀಂನಲ್ಲಿ 10 ಸಾವಿರ ಮೌಲ್ಯದ ಮೊಬೈಲ್ ಗೆದ್ದ ವಸಂತ ಹಿರೇಬಂಡಾಡಿ- ಕಹಳೆ ನ್ಯೂಸ್

ಉಪ್ಪಿನಂಗಡಿ: ಉಪ್ಪಿನಂಗಡಿಯ ನಂಬರ್ 1 ಸ್ಮಾರ್ಟ್ ಫೋನ್ ಮಾರಾಟಗಾರರು ಎಂದೇ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಮೊಬೈಲ್ ಸಂಸ್ಥೆ “ಶ್ರೀನಿಧಿ ಮೊಬೈಲ್ಸ್” ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಫ್ಟ್ ಸ್ಕೀಂನ ಪಲಿತಾಂಶ ಬಂದಿದ್ದು, ಕೇವಲ ರೂ 500ಕ್ಕೆ ರೂ 10000 ಬೆಲೆಯ ಮೊಬೈಲ್ ಫೋನ್ ಪಡೆದ ಅದೃಷ್ಟವಂತರಾದ ಹಿರೆಬಂಡಾಡಿಯ ವಸಂತ ರವರಿಗೆ ಶ್ರೀನಿಧಿ ಮೊಬೈಲ್ಸ್ ಸಂಸ್ಥೆಯ ಮಾಲಕರಾದ ಜಯಪ್ರಕಾಶ್ ಶೆಟ್ಟಿ ಅವರು ಬಹುಮಾನವನ್ನು ಹಸ್ತಾಂತರ ಮಾಡಿದರು....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ಪತ್ರಿಕೋದ್ಯಮದ ಅನುಪಮ ವೇದಿಕೆಯಲ್ಲಿ ಪ್ರತಿಭಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳಲ್ಲಿ ಹಲವಾರು ಸುಪ್ತ ಪ್ರತಿಭೆಗಳಿವೆ. ಆ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಗಳು ಅತ್ಯವಶ್ಯಕವಾಗಿದೆ. ಹಾಗಾಗಿ ವಿದ್ಯಾರ್ಥಿಯು ತನ್ನ ಜೀವನದಲ್ಲಿ ದೊರಕುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಬೇಕು. ಪ್ರತಿಭೆಯನ್ನು ಪ್ರದರ್ಶಿಸುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ್ ಗೋರೆ ಹೇಳಿದರು. ಅವರು ಕಾಲೇಜಿನ ಪ್ರತಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬೈಕ್ – ಮೊಬೈಲ್ ಸೇತುವೆಯಲ್ಲಿಟ್ಟು ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ- ಕಹಳೆ ನ್ಯೂಸ್

ಬಂಟ್ವಾಳ : ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕಾರಾಜೆ ನಿವಾಸಿ ಜಲೀಲ್ (55) ಎಂದು ಗುರುತಿಸಲಾಗಿದ್ದು, ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ನೇತ್ರಾವತಿ ಸೇತುವೆಯಲ್ಲಿ ಬೈಕ್, ಚಪ್ಪಲಿ ಹಾಗೂ ಮೊಬೈಲ್ ಗಮನಿಸಿದ ಸ್ಥಳೀಯ ಈಜುಗಾರರು, ಯಾರು ಇಲ್ಲದ ಬಗ್ಗೆ ಸಂಶಯಗೊಂಡು ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ ಮಾಹಿತಿ ಪಡೆದು...
ದಕ್ಷಿಣ ಕನ್ನಡಸುದ್ದಿ

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಪುತ್ತೂರು ವಲಯದ ವಿಶ್ವಕರ್ಮ ಬಾಂಧವರಿಂದ ಸ್ವರ್ಣಕಲಶ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಪುತ್ತೂರು ವಲಯದ ವಿಶ್ವಕರ್ಮ ಬಾಂಧವರಿಂದ ಸ್ವರ್ಣಕಲಶ ಸಿದ್ಧವಾಗಿದ್ದು. ಈ ಹಿನ್ನಲೆಯಲ್ಲಿ ಜ.19ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಸ್ವರ್ಣಕಲಶವನ್ನು ವೀಕ್ಷಣೆಗೆ ಇಡಲಾಗುತ್ತದೆ. ಬಳಿಕ ಮದ್ಯಾಹ್ನ 3 ಗಂಟೆಗೆ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಸ್ವರ್ಣಕಲಶವನ್ನು ಸಮರ್ಪಿಸಲಾಗುತ್ತದೆ. ಸ್ವರ್ಣಕಲಶದ ವೀಕ್ಷಣೆಗೆ ಆಗಮಿಸುವವರು ಸರಕಾರದ ಕೋವಿಡ್ ನಿಯಮ ಅನ್ವಯ ಮಾಸ್ಕ್ ಧರಿಸಿ, ಸಾಮಾಜಿಕ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ಪ್ರೀತಿಸಿದ ಹುಡುಗಿಯನ್ನು ಮಾತನಾಡಿಸಲು ಬಂದ ಯುವಕನ ಮೇಲೆ ಹುಡುಗಿಯ ಸಂಬಂಧಿಕರಿಂದ ಹಲ್ಲೆ- ಕಹಳೆ ನ್ಯೂಸ್

ವಿಟ್ಲ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದ ಯುವಕ ಮತ್ತು ಆತನ ಸ್ನೇಹಿತನಿಗೆ ಯುವತಿಯ ತಂದೆ, ಅಣ್ಣ ಮತ್ತು ಸಂಬಂಧಿಕರು ಸೇರಿ ಹಲ್ಲೆ ನಡೆಸಿದ ಘಟನೆ ವಿಟ್ಲದ ಏಮಾಜೆಯಲ್ಲಿ ನಡೆದಿದೆ. ಕೋಲ್ಪೆ ಸಮೀಪದ ಯುವಕ ಆತನ ಸ್ನೇಹಿತನ ಜೊತೆ ವಿಟ್ಲ ಹೇಮಾಜೆ ಸಮೀಪದ ತನ್ನ ಪ್ರಿಯತಮೆಯನ್ನು ಮಾತನಾಡಿಸಲು ಆಕೆಯ ಮನೆಗೆ ಬಂದಿದ್ದು, ಆ ವೇಳೆ ಆಕೆಯ ಮನೆಯವರು ತಡೆಗಟ್ಟಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ಸಂದರ್ಭ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ಕೊರಗಜ್ಜನಿಗೆ ಅವಮಾನ ಪ್ರಕರಣ: ಇಬ್ಬರು ಬಂಧಿತ ಆರೋಪಿಗಳಿಗೆ ಜಾಮೀನು- ಕಹಳೆ ನ್ಯೂಸ್

ವಿಟ್ಲ: ಬಂಟ್ವಾಳ ತಾಲೂಕಿನ ಸಾಲೆತ್ತೂರು ಬಳಿ ಮದುವೆ ಮನೆಯಲ್ಲಿ ಕೊರಗಜ್ಜನ ವೇಷವನ್ನು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಂಗಲ್ಪಾಡಿ ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು (28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಅಂದೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳ ಪರ ನ್ಯಾಯವಾದಿ...
ಹೆಚ್ಚಿನ ಸುದ್ದಿ

ಬೆಳಿಗ್ಗೆ ಲಾಟರಿ ಖರೀದಿಸಿದ್ದ ಪೇಂಟರ್ : ಮಧ್ಯಾಹ್ನದ ವೇಳೆ ಕೋಟ್ಯಾಧಿಪತಿ- ಕಹಳೆ ನ್ಯೂಸ್

ಕೊಟ್ಟಾಯಂ : ಲಾಟರಿಯಲ್ಲಿ ಪೇಂಟರ್ ಓರ್ವ ಬರೊಬ್ಬರಿ 12 ಕೋಟಿ ಗೆದ್ದಿರುವ ಘಟನೆ ಕೊಟ್ಟಾಯಂನ ಕುಡಯಂಪಾಡಿಯಲ್ಲಿ ನಡೆದಿದೆ. ಸದಾನಂದನ್ ಎಂಬ ಪೇಂಟರ್ ಬಹುಕೋಟಿ ಲಾಟರಿ ವಿಜೇತ. ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್ ಭಾನುವಾರ ಬೆಳಗ್ಗೆ ಕೇರಳ ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಮತ್ತು ಕೆಲವೇ ಗಂಟೆಗಳಲ್ಲಿ ಅಂದರೆ ಮಧ್ಯಾಹ್ನ, ಅವರು ಲಾಟರಿ ಹಣ ಗೆದ್ದಿದ್ದಾರೆ. ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್‍ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ: ಟಿಪ್ಪರ್ ಲಾರಿ – ಬೈಕ್ ನಡುವೆ ಬೀಕರ ರಸ್ತೆ ಅಪಘಾತ: ಇಬ್ಬರು ಯುವಕರು ದಾರುಣ ಸಾವು- ಕಹಳೆ ನ್ಯೂಸ್

ಬೆಳ್ತಂಗಡಿ: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ನಡೆದಿದೆ. ಮೃತ ಯುವಕರನ್ನು ನಾವೂರು ನಿವಾಸಿಗಳಾದ ಮಿಸ್ಪಾಯಿಲ್ (20) ಹಾಗೂ ಆಸ್ಪಾನ್ (19) ಎಂದು ಗುರುತಿಸಲಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಹಾಗೂ ಸಹಸವಾರ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
1 9 10 11 12 13 126
Page 11 of 126