Friday, September 20, 2024

archiveAnanth Kumar

ಸುದ್ದಿ

ಮಂಗಳೂರಿನಲ್ಲಿ ಹಿರಿಯ ನಾಯಕ ಅನಂತರಿಗೆ ಪುಷ್ಪ ನಮನ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಮಂಗಳೂರುನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಭರತ್‌ರಾಜ್ ಶೆಟ್ಟಿ , ಸಂಜೀವ ಮಠಂದೂರು. ರಾಜೇಶ್ ನಾಯಕ್, ಹರೀಶ್ ಪೂಂಜ ಮತ್ತು ಇತರ ಬಿಜೆಪಿ ನಾಯಕರುಗಳು ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಪ್ರಭಾಕರ ಜೋಶಿ ನುಡಿ ನಮನಗಳನ್ನು ಮಾಡಿದರು...
ಸುದ್ದಿ

ಮಲ್ಲೇಶ್ವರಂನ ಬಿಜೆಪಿ ಕಚೇರಿಯತ್ತ ಅನಂತ್ ಕುಮಾರ್ ಪಾರ್ಥಿವ ಶರೀರ – ಕಹಳೆ ನ್ಯೂಸ್

ಕೇಂದ್ರ ಸಚಿವ ಅನಂತ್ ಕುಮಾರ್ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಿದ್ದು, ಬಸವನಗುಡಿಯಲ್ಲಿರುವ ಅನಂತ್ ಕುಮಾರ್ ನಿವಾಸದಿಂದ ಮಲ್ಲೇಶ್ವರಂನ ಬಿಜೆಪಿ ಕಚೇರಿಯತ್ತ ಅಂತಿಮ ಯಾತ್ರೆ ಹೊರಟಿದೆ. ಬೆಳಗ್ಗೆ 9 ರವರೆಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ 9.30 ರ ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ದೊರೆಯಲಿದೆ. ಅಲ್ಲಿಂದ 1 ಗಂಟೆ ನಂತರ ಚಾಮರಾಜಪೇಟೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸಿಪಿ ಅಣ್ಣಾಮಲೈ...
ಸುದ್ದಿ

ಪೊಲಿಟಿಕಲ್ ಕೆಮಿಸ್ಟ್ರಿಯನ್ನೆ ಬದಲಾಯಿಸಿದ ರಾಜಕಾರಣಿ ಅನಂತಕುಮಾರ್: ಸಿ.ಟಿ.ರವಿ – ಕಹಳೆ ನ್ಯೂಸ್

ಅನಂತ್ ಕುಮಾರ್ ಒಬ್ಬ ಅಸಾಧಾರಣ ರಾಜಕಾರಣಿಯಾಗಿದ್ದು, ಪೊಲೀಟಿಕಲ್ ಕೆಮಿಸ್ಟ್ರಿಯನ್ನೆ ಬದಲಾಯಿಸಿದ ರಾಜಕಾರಣಿಯಾಗಿದ್ರು. ಅವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನ ಭದ್ರ ಗೊಳಿಸಲು ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಲವಕುಶರಂತೆ ಕೆಲಸ ಮಾಡಿದ್ರಿಂದ ಇಂದು ಬಿಜೆಪಿ ಭದ್ರವಾಗಿದೆ. ರಾಜ್ಯದಲ್ಲಿ ಲೋಕ ಸಭಾ ಸ್ಥಾನಗಳು 5 ಕ್ಕೆ ಇಳಿಯುತ್ತೆ ಅಂತ ವರದಿ ಬಂದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಸಂಘಟನೆಗೆ ಇಳಿದಿದ್ರು. ಬಂಗಾರಪ್ಪ ಸೇರಿದಂತೆ ಹಲವರನ್ನ ಪಕ್ಷಕ್ಕೆ ಕರೆದು ಪಕ್ಷ...
ಸುದ್ದಿ

ಸೆಮಿಸ್ಟರ್ ಪರೀಕ್ಷೆ ಮುಂದೂಡಿದ ಮಂಗಳೂರು ವಿವಿ – ಕಹಳೆ ನ್ಯೂಸ್

ಮಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೆಯೇ ಇಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಸೆಮಿಸ್ಟರ್ ಪರೀಕ್ಷೆ ಮುಂದೂಡಲಾಗಿದೆ. ಪದವಿ ತರಗತಿಯ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿದ್ದು ಮುಂದಿನ ದಿನಾಂಕ ಶೀಘ್ರವಾಗಿ ತಿಳಿಸುವುದಾಗಿ ಮಂಗಳೂರು ವಿ.ವಿ.‌ ರಿಜಿಸ್ಟ್ರಾರ್ ಎ.ಎಂ.ಖಾನ್ ಅವರು ಮಾಹಿತಿ ನೀಡಿದ್ದಾರೆ....