Friday, September 20, 2024

archivebantwala

ರಾಜಕೀಯಸುದ್ದಿ

ತಂದೆ ಹಾಗೂ ಮಗಳು ಅನುಮಾನಾಸ್ಪದ ಸಾವು – ಕಹಳೆ ನ್ಯೂಸ್

ಬಂಟ್ವಾಳ: ತಂದೆ ಹಾಗೂ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ. ಬಿ.ಸಿ.ರೋಡಿನ ವಸತಿ ಸಂಕೀರ್ಣವೊಂದರಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಹಾಗೂ ಆಕೆಯ ತಂದೆ ವಸತಿ ಸಂಕೀರ್ಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಬಿ.ಸಿ.ರೋಡಿನ ವಿವೇಕ ನಗರದ ಖಾಸಗಿ ವಸತಿ ಸಂಕೀರ್ಣವೊಂದರ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಪಟ್ಟವರನ್ನು ಪ್ರಭಾಕರ (45) ಮತ್ತು ಪ್ರಮಣ್ಯ (12) ಎಂದು ಗುರುತಿಸಲಾಗಿದೆ. ನಿನ್ನೆ ಅಪ್ಪ...
ಸುದ್ದಿ

ನವೋದಯ ಯುವಕ ಸಂಘದ 29ನೇ ವಾರ್ಷಿಕೋತ್ಸವ – ಕಹಳೆ ನ್ಯೂಸ್

ಬಂಟ್ವಾಳ: ನವೋದಯ ಯುವಕ ಸಂಘ ಮೈರಾನ್ ಪಾದೆ, ಕಾಮಾಜೆ ಇದರ 29ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ನವೋದಯ ರಂಗಮಂದಿರದಲ್ಲಿ ನಡೆಯಿತು.lಬಂಟ್ವಾಳ ಶಾಸಕ ರಾಜೇಶ್ ನಾಯಕ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ಇನ್ನು ಇದೇ ಸಂದರ್ಭದಲ್ಲಿ ಪ್ರಬುದ್ದ ರಂಗಕಲಾವಿದ ಪ್ರವೀಣ್ ಕಾಮಾಜೆ ಹಾಗೂ ಕಲಿಕೆಯಲ್ಲಿ ಅಪೂರ್ವ ಸಾಧನೆ ಮಾಡಿದ ಸೂರಜ್ ಕಾಮಾಜೆ ಅವರನ್ನು ಸನ್ಮಾನಿಸಲಾಯಿತು....
ಸುದ್ದಿ

ವೈಭವದಿಂದ ಮೇಳೈಸಿತು ಕೈರಂಗಳ ಕೃಷಿ ಉತ್ಸವ – ಕಹಳೆ ನ್ಯೂಸ್

ಕೈರಂಗಳದ ಶಾರದ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಡಿಸೆಂಬರ್ 29, 30 ರಂದು ಕಾರ್ಯಕ್ರಮ ನಡೆದಿದ್ದು ಸಾಕಷ್ಟು ಕೃಷಿ ಚಟುವಟಿಕೆಗಳ ಕೇಂದ್ರದಂತೆ ಮಾರ್ಪಡುಗೊಂಡಿತ್ತು. ಶಾರದಾ ಗಣಪತಿ ವಿದ್ಯಾಕೇಂದ್ರ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಡಿಪು ವಲಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಗೊಂಡಿತ್ತು . ಈ ಕೃಷಿ ಉತ್ಸವ ಬಹಳ ವೈವಿಧ್ಯದಿಂದ ನಡೆದಿದ್ದು ವಸ್ತು ಪ್ರದರ್ಶನ, ಸಿರಿ ಉತ್ಪನ್ನ...
ಸುದ್ದಿ

ಪರಂಗಿಪೇಟೆಯ ವಿವಾದಿತ ಮೀನು ಮಾರ್ಕೆಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ವಿವಾದಿತ ಪರಂಗಿಪೇಟೆ ಮೀನಿನ ಮಾರ್ಕೆಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.ರೈಲ್ವೆ ಇಲಾಖೆಯವರ ಜಮೀನು ಅತಿಕ್ರಮಿಸಿ ಈ ಪ್ರದೇಶದಲ್ಲಿ ಮೀನಿನ ಮಾರ್ಕೆಟ್, ತರಕಾರಿ, ಹಣ್ಣು ಹಂಪಲು ಅಂಗಡಿಗಳನ್ನು ಮಾಡಿದ್ದಾರೆ ಎಂಬುದು ರೈಲ್ವೆ ಇಲಾಖೆಯ ಆರೋಪ. ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಬೇಕೆಂಬುವುದು ರೈಲ್ವೇ ಇಲಾಖೆಯ ಒತ್ತಾಯವಾಗಿದೆ. ಈ ಬಗ್ಗೆ 2016 ರಲ್ಲಿ ಅಂಗಡಿಗಳ ಮಾಲಕರಿಗೆ ನೋಟೀಸ್ ಜಾರಿ ಮಾಡಿದ್ದರು. ಅ ನಂತರ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿರುವ...