ಭಾರೀ ಸಿಡಿಲು, ಗುಡುಗು: ವಿದ್ಯಾರ್ಥಿಗಳು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್
ಮಂಗಳೂರು: ಗುರುವಾರ ಸಂಜೆ ಬಂಟ್ವಾಳ ಪರಿಸರದಲ್ಲಿ ಮಳೆಯೊಂದಿಗೆ ಸುರಿದ ಭಾರೀ ಸಿಡಿಲು, ಗುಡುಗಿಗೆ ಹೆದರಿ, ಅಸ್ವಸ್ಥಗೊಂಡು ಇಬ್ಬರು ವಿದ್ಯಾರ್ಥಿಗಳು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ನಡೆದಿದೆ. ವಗ್ಗ ಕಾಲೇಜಿನ ವಿದ್ಯಾರ್ಥಿನಿಯರಾದ, ನಾವೂರು ಗ್ರಾಮದ ಪಟ್ಲ ಮನೆ ನಿವಾಸಿ ಅನ್ನತ್ ಬಾನು ಉಳಿ ಗ್ರಾಮದ ತುಂಬೆದಡ್ಕ ನಿವಾಸಿ ಸಾಹಿರಾ ಗಾಯಗೊಂಡವರು. ಇವರಿಬ್ಬರು ಇಂದು ಸಂಜೆ ಶಾಲೆಯಿಂದ ಮನೆಗೆ ಮರಳುವಾಗ ವಗ್ಗದ ನಿರ್ಕಾನ ಬಸ್ ನಿಲ್ದಾಣದಲ್ಲಿ ನಿಂತಿದ್ದ...