Friday, September 20, 2024

archiveCourt

ಸುದ್ದಿ

ವ್ಯಕ್ತಿಯ ಕೊಲೆ ಯತ್ನ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡದ ಮೂಡಬಿದ್ರೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ. ಸೆಪ್ಟೆಂಬರ್ 24ರಂದು ಮೂಡುಬಿದಿರೆಯ ಕರಿಂಜೆ ಗ್ರಾಮದ ಗಂಟಾಲ್ಕಟ್ಟೆಯಲ್ಲಿ ನಡೆದ ಇಮ್ತಿಯಾಝ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಬಂಧಿತನನ್ನ ಗುರುಪ್ರಸಾದ್ ಅಲಿಯಾಸ್ ಗುರುರಾಜ್ ಎಂದು ಗುರುತಿಸಲಾಗಿದೆ. ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿ ಇಮ್ತಿಯಾಜ್ ಎಂಬುವವರ ಹೋಟೆಲ್‌ಗೆ ಬೆಳಗ್ಗೆ 6 ಗಂಟೆಗೆ ಬಂದ ವ್ಯಕ್ತಿಯೋರ್ವ 10 ಚಹಾ ಬೇಕೆಂದು ಹೇಳಿದ್ದರು. ಬಳಿಕ...
ಸುದ್ದಿ

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಆರೋಪ ಸಾಬೀತು: ಆರೋಪಿಗೆ ಜೈಲು ಶಿಕ್ಷೆ – ಕಹಳೆ ನ್ಯೂಸ್

ಉಡುಪಿ:  ಕಾರ್ಕಳದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಮೂರು ವರ್ಷದ ಹಿಂದೆ ಅತ್ಯಾಚಾರಗೈದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯ ತೀರ್ಪು ನೀಡಿದೆ. ಕಾರ್ಕಳ ಕಲ್ಯಗ್ರಾಮ ಕುಂದ್ರಬೆಟ್ಟುವಿನ ಗಣೇಶ್ ಪೂಜಾರಿ ಅಲಿಯಾಸ್ ಅಣ್ಣು ಅಪರಾಧಿ. ಕೃಷಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಈತ ಅತ್ಯಾಚಾರ ಪ್ರಕರಣದ ಬಳಿಕ ಜಾಮೀನು ಸಿಗದೆ ಈಗಲೂ ಜೈಲುವಾಸ ಅನುಭವಿಸುತ್ತಿದ್ದಾನೆ. ಪ್ರಕರಣ ಕುರಿತು ಅಂದಿನ ಕಾರ್ಕಳ ಠಾಣೆ...
ಸುದ್ದಿ

ಡಾ. ರಾಜ್​ ಅಪಹರಣ ಪ್ರಕರಣದ 9 ಆರೋಪಿಗಳ ಬಿಡುಗಡೆ – ಕಹಳೆ ನ್ಯೂಸ್

ಬೆಂಗಳೂರು: ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದ ತೀರ್ಪು ಹೊರಬಿದ್ದಿದ್ದು, 9 ಆರೋಪಿಗಳನ್ನು ಬಿಡುಗಡೆ ಮಾಡಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ 3ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. 2000 ರ ಜುಲೈ 30ರಂದು ರಾಜ್​ಕುಮಾರ್​ ಅವರನ್ನು ಕಾಡುಗಳ್ಳ ವೀರಪ್ಪನ್​ ಅಪಹರಣ ಮಾಡಿದ್ದ. ಸುಮಾರು 108 ದಿನ ಅವರನ್ನು ಬಂಧಿಸಿಟ್ಟಿದ್ದ. ತತ್ಸಬಂಧ ವೀರಪ್ಪನ್​, ಆತನ ಪತ್ನಿ ಸೇರಿ ಸುಮಾರು 25 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 13 ಜನರು ಜೈಲಿನಲ್ಲಿದ್ದರು....
ಸುದ್ದಿ

ವೈಯಕ್ತಿಕ ದ್ವೇಷವಿಲ್ಲ, ಸಂಧಾನಕ್ಕೆ ‌ಒಪ್ಪುವುದಿಲ್ಲ: ಪಾನಿಪುರಿ ಕಿಟ್ಟಿ – ಕಹಳೆ ನ್ಯೂಸ್

ಬೆಂಗಳೂರು: ವೈಯಕ್ತಿಕವಾಗಿ ನನಗೂ, ವಿಜಯ್​ಗೂ ದ್ವೇಷವಿಲ್ಲ. ನನ್ನ ಅಣ್ಣನ ಮಗ ಮಾರುತಿಗೌಡ ಮೇಲೆ ಹಲ್ಲೆ ನಡೆದಿದ್ದು, ಇಂತಹ ಘಟನೆಯಿಂದ ಎಂಥವರಿಗೂ ಸಿಟ್ಟು ಬರುತ್ತದೆ. ಪ್ರಕರಣದಲ್ಲಿ ನಾನು ಕಾನೂನು ಮೊರೆ ಹೋಗಿದ್ದೇನೆ. ಅಲ್ಲದೆ, ಫಿಲಂ ಛೇಂಬರ್​ಗೂ ದೂರು ನೀಡಿದ್ದು, ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಪಾನಿಪುರಿ ಕಿಟ್ಟಿ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ನಟನಾಗಲಿ ಇನ್ನೊಬ್ಬರಿಗೆ ಮಾದರಿ ಆಗಬೇಕು. ಹಾಗಂತ ವಿಜಿ ವಿರುದ್ಧ ರೌಡಿ ಶೀಟರ್ ತೆರೆಯಲಿ ಎಂದು ನಾನು...