ಅನಂತಕುಮಾರ್ ಕುಟುಂಬಕ್ಕೆ ಶ್ರೀರಾಮಚಂದ್ರಾಪುರ ಮಠದಿಂದ ಸಾಂತ್ವನ ಪತ್ರ – ಕಹಳೆ ನ್ಯೂಸ್
ಕೇಂದ್ರ ಸಚಿವ ಅನಂತಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಶ್ರೀರಾಮಚಂದ್ರಾಪುರ ಮಠದಿಂದ ತೇಜಸ್ವಿನಿ ಅವರಿಗೆ ಪತ್ರವನ್ನು ಬರೆಯಲಾಗಿದ್ದು, ಶ್ರೀಕರಾರ್ಚಿತ ಶ್ರೀರಾಮಾದಿ ದೇವತಾನುಗ್ರಹದಿಂದ ಅಗಲಿಕೆಯ ನೋವನ್ನು ಮರೆಯುವ ಶಕ್ತಿಯು ಅವರ ಕುಟುಂಬಕ್ಕೆ ಸಿಗಲಿ ಎಂದು ಹಾರೈಸಲಾಗಿದೆ. ಅನಂತಕುಮಾರ್ ಉತ್ತಮ ರಾಜಕಾರಣಿಗಳಲ್ಲೊಬ್ಬರು, ಬಾಲ್ಯದಲ್ಲಿಯೇ ರಾಷ್ಟ್ರಭಕ್ತಿಗೆ ಸಮರ್ಪಿಸಿಕೊಂಡವರು, ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದವರು. ಅವರು ಇನ್ನಷ್ಟು ಕಾಲ ಬದುಕಿ ಸತ್ಕಾರ್ಯಗಳನ್ನು ಮಾಡಬೇಕಿತ್ತು, ಆದರೆ ಅಕಾಲಿಕವಾಗಿ ನಿಧನರಾಗಿರುವುದು ಕುಟುಂಬಕ್ಕೆ ನೋವಿನ ಸಂಗತಿ. ಹುಟ್ಟು ಸಾವುಗಳು...