ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ‘ಗ್ರೂಪ್ ಕೌನ್ಸೆಲಿಂಗ್’ ಕಾರ್ಯಕ್ರಮ – ಕಹಳೆ ನ್ಯೂಸ್
ಅಡ್ಯನಡ್ಕ: ಇಲ್ಲಿನ ಜನತಾ ಪ.ಪೂ. ಕಾಲೇಜು ಹಾಗೂ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಅ.30 ರಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮನೋವೈದ್ಯ ಡಾ.ಗಿರೀಶ್ ಅವರು 'ಮನಸ್ಸಿನ ಸಿದ್ಧತೆ, ವ್ಯಾಸಂಗದ ಸಿದ್ಧತೆ ಮತ್ತು ಪರೀಕ್ಷಾ ಸಿದ್ಧತೆ' ಎಂಬ ವಿಷಯದಲ್ಲಿ ಗ್ರೂಪ್ ಕೌನ್ಸೆಲಿಂಗ್ ನಡೆಸಿದರು. ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ಸ್ವಾಗತಿಸಿ, ಪ್ರಾಂಶುಪಾಲ ಡಿ.ಶ್ರೀನಿವಾಸ್ ಪರಿಚಯಿಸಿ, ಸಹಶಿಕ್ಷಕ ಶಿವಕುಮಾರ ಸಾಯ ವಂದಿಸಿದರು. ...