Friday, September 20, 2024

archiveMangaluru

ಸುದ್ದಿ

ಸನ್‍ಫಿಲ್ಮ್ ಗ್ಲಾಸ್ ತೆರವುಗೊಳಿಸಿದ ಸಂಚಾರಿ ಅಧಿಕಾರಿಗಳು – ಕಹಳೆ ನ್ಯೂಸ್

ಮಂಗಳೂರು: ಸನ್ ಫಿಲ್ಮ್ ಗ್ಲಾಸ್ ಅಳವಡಿಕೆ ಮಾಡೋದನ್ನು ನಿಲ್ಲಿಸಿದರೂ ಕೂಡ ನಗರದಲ್ಲಿ ಕೆಲವೊಂದು ವಾಹನಗಳ ಸನ್ ಫಿಲ್ಮ್ ಗ್ಲಾಸ್(ಟಿಂಟ್ ಗ್ಲಾಸ್)ಗಳನ್ನು ಅಳವಡಿಕೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರ ಸಂಚಾರ ಅಧಿಕಾರಿ ಮತ್ತು ಸಿಬ್ಬಂದಿಗಳು ಎ.ಸಿ.ಪಿ ನೇತೃತ್ವದಲ್ಲಿ ಸನ್ ಫಿಲ್ಮ್ ಆಳವಡಿಸಿ ವಾಹನವನ್ನು ಚಲಾಯಿಸುತ್ತಿದ್ದ ವಾಹನಗಳ ಮೇಲೆ ವಿಶೇಷ ಕಾರ್ಯಚಾರಣೆಯನ್ನು ಕೈಗೊಂಡರು. ಒಟ್ಟು 20 ವಾಹನಗಳಿಗೆ ಆಳವಡಿಸಿದ ಸನ್‍ಫಿಲ್ಮ್ ಗ್ಲಾಸ್‍ಗಳನ್ನು ತೆರವುಗೊಳಿಸಿರುತ್ತಾರೆ....
ಸುದ್ದಿ

Breaking News : ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿಗೆ ರೇಬೀಸ್! – ಕಹಳೆ ನ್ಯೂಸ್

ಮಂಗಳೂರು: ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿ ಇಡೀ ಊರಿನ ಜನ ರೇಬೀಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ ಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ ಎದುರಾಗಿದೆ. ಯುವಕ ಆಶಿತ್ ಆಗಸ್ಟ್ 22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಈತನ ಮೃತದೇಹವನ್ನು ಮನೆ ಮಂದಿಗೆ ನೀಡುವ ಸಂದರ್ಭದಲ್ಲಿ, ರೇಬೀಸ್ ವೈರಾಣುವಿನಿಂದ ಯುವಕ ಮೃತಪಟ್ಟಿದ್ದಾನೆ ಎನ್ನುವ ಕಾರಣ ನೀಡಲಾಗಿತ್ತು. ಅಲ್ಲದೆ ಮೃತದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸೂಚನೆಯನ್ನೂ...
ಸುದ್ದಿ

ಕಸ್ತೂರಿರಂಗನ್ ವರದಿ ಜಾರಿಗೆ 6 ತಿಂಗಳು ಅವಕಾಶ – ಕಹಳೆ ನ್ಯೂಸ್

ಕೊಚ್ಚಿ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೇಲೆಯೂ ಪರಿಣಾಮ ಬೀರಿದಂತಿದೆ. ವಿಳಂಬಗೊಳ್ಳುತ್ತಿರುವ ಕಸ್ತೂರಿರಂಗನ್ ವರದಿ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಧಿಕರಣ, ಇನ್ನು 6 ತಿಂಗಳೊಳಗೆ ಈ ವರದಿ ಜಾರಿ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮಪ್ರದೇಶಗಳಲ್ಲಿ ಇನ್ನಷ್ಟು ಬದಲಾವಣೆ ಮಾಡುವುದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿರುವುದರಿಂದ ಅಂತಹ ಯಾವುದೇ ಪ್ರಕ್ರಿಯೆ ಕೈಗೊಳ್ಳಬಾರದು...
ಸುದ್ದಿ

ಅಕ್ರಮ ಚಿನ್ನಾಭರಣ ಸಾಗಾಟ ; ಕಾಸರಗೋಡಿನ ನೆಲ್ಲಿಕುಂಜೆಯ ಅಬ್ದುಲ್ ಸಅದ್ ಮತ್ತು ಸಮೀರ್ ಬಂಧನ – ಕಹಳೆ ನ್ಯೂಸ್

ಕಾಸರಗೋಡು, ಸೆ 3 : ಅಕ್ರಮವಾಗಿ ಚಿನ್ನಾಭರಣ ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಚಿನ್ನಾಭರಣ ಸಹಿತ ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನೆಲ್ಲಿಕುಂಜೆಯ ಅಬ್ದುಲ್ ಸಅದ್(30) ಮತ್ತು ಸಮೀರ್(30) ಎಂದು ಗುರುತಿಸಲಾಗಿದೆ. ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಇವರನ್ನು ಬಂಧಿಸಲಾಗಿದ್ದು, ಸುಮಾರು 1.2ಕಿಲೋ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಆರೋಪಿಗಳು ಕಾಸರಗೋಡಿಗೆ ಚಿನ್ನಾಭರಣ ಸಾಗಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು...
ಸುದ್ದಿ

ಸೀರೆಯುಟ್ಟು ಮಿರ ಮಿರ ಮಿಂಚುತ್ತಾ ವಾಕಿಂಗ್ ಮಾಡಿದ್ರು ಮಂಗಳೂರಿನ ನಾರಿಮಣಿಯರು – ಕಹಳೆ ನ್ಯೂಸ್

ಮಂಗಳೂರು, ಆಗಸ್ಟ್ 13: ಸೀರೆಯುಟ್ಟು ವಾಕಿಂಗ್ ಹೋಗೋಕೆ ಕಂಫರ್ಟಬಲ್ ಅನಿಸಲ್ಲ ಅನ್ನುವ ಕಾರಣಕ್ಕೆ ಮಹಿಳೆಯರು ಜಾಗ್ ಹೋಗೋಕೆ ದೂರ ಸರಿಯುತ್ತಾರೆ. ಇಂತಹ ಮಹಿಳೆಯರನ್ನು ನಡಿಗೆಗೆ ಪ್ರೋತ್ಸಾಹಿಸಲು ಮಂಗಳೂರಿನಲ್ಲೊಂದು ಪ್ರಯತ್ನ ನಡೆಸಲಾಗಿದೆ. ಹೌದು, "ಸಾರಿ ಉಟ್ಟರೆ ನಡೆದಾಡಲು ಅಷ್ಟು ಹಿತಕರ ಅನಿಸುವುದಿಲ್ಲ" ಎಂದು ಬಹಳಷ್ಟು ಮಹಿಳೆಯರ ದೂರುತ್ತಿರುವ ಕಾರಣಕ್ಕೋ ಏನೋ ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಮಹಿಳೆಯರು ಸೀರೆಯಲ್ಲೇ ವಾಕಿಂಗ್ ಮಾಡಿದ್ದಾರೆ. ಮಂಗಳೂರಿನ "ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್" ವತಿಯಿಂದ ಸೀರೆ...
ಸುದ್ದಿ

Big Breaking News : ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣ ಮತ್ತೋರ್ವ ಆರೋಪಿ ಕೃಷ್ಣಪುರದ ಮುಸ್ಲಿಂ ಯುವಕ ಸಫ್ವಾನ್ ಅಂದರ್ – ಕಹಳೆ ನ್ಯೂಸ್

ಮಂಗಳೂರು, ಜು 17: ಸುರತ್ಕಲ್ ಕಾಟಿಪಳ್ಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುರತ್ಕಲ್ ಕೃಷ್ಣಾಪುರದ ಸಫ್ವಾನ್ ಯಾನೆ ಚಪ್ಪು(23) ಬಂಧಿತ ಆರೋಪಿ. ಈತನನ್ನು ಸುರತ್ಕಲ್ ಸಮೀಪದ ಮುಕ್ಕದಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಪ್ರಕರಣದ ತನಿಖಾಧಿಕಾರಿಯವರಾದ ಸಂಚಾರ ಉಪವಿಭಾಗದ ಎಸಿಪಿ ಮಂಜುನಾಥ ಶೆಟ್ಟಿಯವರಿಗೆ ಹಸ್ತಾಂತರಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ೧೨ ಮಂದಿ...
ಸುದ್ದಿ

ಬಿಜೆಪಿ ಸಿದ್ದಾಂತಗಳೊಂದಿಗೆ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ – ಶ್ರೀಕರ ಪ್ರಭು

ಮಂಗಳೂರು : ಬಿಜೆಪಿಯ ಸಿದ್ದಾಂತಗಳನ್ನು ಮುಂದಿಟ್ಟುಕೊಂಡು ನಾನು ’ಪಕ್ಷೇತರ’ನಾಗಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುತ್ತೇನೆ ಎಂದು, ಬಿಜೆಪಿಯ ಮಾಜಿ ಮುಖಂಡ ಶ್ರೀಕರ ಪ್ರಭು ಘೋಷಿಸಿದ್ದಾರೆ. ನಗರದ ಸಿ ವಿ ನಾಯಕ್ ಹಾಲ್ ನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಜನ ಸಂಪರ್ಕ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಏಕಾಎಕಿ ಕಾರಣ ನೀಡದೆ ಉಚ್ಚಾಟನೆ ಮಾಡಿದ್ದು ಯಾಕೆಂದು...
ಸುದ್ದಿ

ಮಂಗಳೂರು ಬಂದರಿನ ಗುಜರಿ ಅಂಗಡಿಯಲ್ಲಿ ಭಾರಿ ಬೆಂಕಿ – ಕಹಳೆ ನ್ಯೂಸ್

ಮಂಗಳೂರು: ಇಲ್ಲಿನ ಬಂದರು ಪ್ರದೇಶದ ಬಿಬಿ ಅಲಾಬಿ ರಸ್ತೆಯಲ್ಲಿ ಗುಜರಿ ಅಂಗಡಿಯೊಂದರಲ್ಲಿ  ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ.  ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ತಹಬದಿಗೆ ತರಲು ಹರಸಾಹಸ ಪಟ್ಟರು. ಅಂಗಡಿಯ ಸುತ್ತಲಿನ ಕಟ್ಟಡದಲ್ಲಿ  ವಸತಿ ಪ್ರದೇಶವಾಗಿದ್ದು ಅಲ್ಲಿನ ನಿವಾಸಿಗಳು ಬೆಂಕಿ ತಗಲುವ ಭೀತಿಯಲ್ಲಿದ್ದರು. ಬೆಂಕಿಯನ್ನು ವ್ಯಾಪಿಸಲು ಅಗ್ನಿಶಾಮಕ ದಳದ ಸಿಬಂದಿಗಳು ಅವಕಾಶ ನೀಡಲಿಲ್ಲ. https://youtu.be/X43OrvO1Pd0 ವರದಿ : ಕಹಳೆ ನ್ಯೂಸ್...
1 2 3 4 5
Page 4 of 5