Friday, September 20, 2024

archiveNavarathri

ಸುದ್ದಿ

ಹತ್ತು ದಿನದ ಸಂಭ್ರಮದ ದಸರಾ ಹಬ್ಬದ ವಿಶೇಷ ಪೂಜೆ ಆಯುಧ ಪೂಜೆ – ಕಹಳೆ ನ್ಯೂಸ್

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಗುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಹಿಂದೂಗಳಲ್ಲಿ ಕ್ರಿಯಾತ್ಮಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಭಾರೀ ಮಹತ್ವ ಪಡೆದಿದೆ. ಈ ಹತ್ತು ದಿನಗಳ ಸಂಭ್ರಮದ ದಸರಾ ಹಬ್ಬದಂದು ಹಲವಾರು ಪೂಜೆ ಪುನಸ್ಕಾರಗಳಿದ್ದು ಇದರಲ್ಲಿ ಆಯುಧ ಪೂಜೆಯು ಒಂದು. ಆಯುಧ ಪೂಜೆ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಪೂಜಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ....
ಸುದ್ದಿ

ಪ್ರಗತಿ ಸ್ಟಡಿಸೆಂಟರ್‌ನಲ್ಲಿ 11ನೇ ವರ್ಷದ ಶಾರದೋತ್ಸವ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರಡಿಯಲ್ಲಿ ಕಾರ್ಯಾಚರಿಸುತ್ತಿದೆ. ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಅ. 15ರಂದು ನವರಾತ್ರಿಯ ಮೂರು ದಿನಗಳ ಶಾರದೋತ್ಸವದ ಅಂಗವಾಗಿ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಹೊಳ್ಳರವರ ನೇತೃತ್ವದಲ್ಲಿ ಶಾರದಾಮಾತೆಯನ್ನು ಪೀಠಲಂಕೃತಳಾನ್ನಾಗಿಸಿ, 11ನೇ ವರ್ಷದ ಶಾರದ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಈಶ್ವರಮಂಗಲ...
ಸುದ್ದಿ

ಮಡಿಕೇರಿ ದಸರಾ ವೈಭವ, ಹಲವು ವಿಶೇಷತೆಗಳ ಕೇಂದ್ರ – ಕಹಳೆ ನ್ಯೂಸ್

ಮಡಿಕೇರಿ: ಮಡಿಕೇರಿ ದಸರಾ ಮೈಸೂರು ದಸರಾದಷ್ಟೆ ಪ್ರಸಿದ್ದಿ ಪಡೆದಿದ್ದು ಮಡಿಕೇರಿ ದಸರಾವು ಹಲವು ವಿಶೇಷತೆಗಳ ಕೇಂದ್ರವಾಗಿದೆ. ಮಡಿಕೇರಿ ದಸರಾದಲ್ಲಿ ಏನೆಲ್ಲಾ ಇರುತ್ತೆ ಎಂಬುವುದನ್ನು ಹೇಳುತ್ತೆ ಈ ಸ್ಟೋರಿ. ಮಡಿಕೇರಿ ದಸರಾ ಅಂದ್ರೆ ಇಡೀ ಕೊಡಗು ಜಿಲ್ಲೆಯೆ ಸಂಭ್ರಮದಲ್ಲಿ ಮಿಂದೇಳುತ್ತೆ. ಕರಗ ಕುಣಿತ, ಪೂಜೆ ಪುನಸ್ಕಾರ, ವೈಭವದ ಮೆರವಣಿಗೆ ಎಲ್ಲರನ್ನು ರಂಜಿಸುತ್ತೆ. ಈ ಮಡಿಕೇರಿ ದಸರಾ ಶುರುವಾಗಲು ಸಣ್ಣ ಇತಿಹಾಸವಿದೆ. ಹಿಂದೆ ಮಡಿಕೇರಿ ಜನರು ರೋಗದಿಂದ ಬಳಲುತ್ತಿದ್ದಾರೆ ಎಂದು ಜಾನಪದ ಕಥೆಯು...
ಸುದ್ದಿ

ಕರಾವಳಿ ದಸರಾದ ಪ್ರಮುಖ ಆಕರ್ಷಣೆ ಹುಲಿ ಕುಣಿತ – ಕಹಳೆ ನ್ಯೂಸ್

ಮಂಗಳೂರು: ನವರಾತ್ರಿ ವೇಳೆ ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು ಹುಲಿ ಡಾನ್ಸ್. ಹುಲಿಯಂತೇ ಕಾಣುವ ವೇಷಧಾರಿಗಳಿಂದ ತಾಸೆಯ ತಾಳಕ್ಕೆ ವಿಶಿಷ್ಟ ನರ್ತನ ಕಂಡು ಬರುತ್ತದೆ. ಕರಾವಳಿಯ ದಸರಾ ಉತ್ಸವ ಮತ್ತು ಮೆರವಣಿಗೆಯಲ್ಲಿ ಈ ಹುಲಿ ಕುಣಿತವೇ ಮುಖ್ಯ ಆಕರ್ಷಣೆಯಾಗಿದ್ದು ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟು ಇಲ್ಲಿದೆ. ದಸರಾ ಬಂದರೆ ಕರಾವಳಿಯಲ್ಲಿ ತಾಸೆಯ ಸದ್ದು ಮೊಳಗಲಾರಂಭಿಸುತ್ತದೆ. ತಾಸೆಯ ಬಡಿತದ ತಾಳಕ್ಕೆ ತಕ್ಕಂತೆ ತುಳುನಾಡಿನ ಪಿಲಿಗಳ ದರ್ಬಾರ್ ಶುರುವಾಗುತ್ತೆ. ಅದರಲ್ಲೂ ಕುದ್ರೋಳಿ ದೇವಾಲಯದಲ್ಲಿ...
ಸುದ್ದಿ

ಮೈಸೂರು ದಸರಾ ಖಾಸಗಿ ದರ್ಬಾರ್‍ಗೆ ಸಿದ್ದವಾಯಿತು ‘ಸಿಂಹಾಸನ’ – ಕಹಳೆ ನ್ಯೂಸ್

ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಅದರಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಪ್ರಮುಖವಾಗಿದೆ. ಈ ಬಗ್ಗೆ ಒಂದು ವರದಿ ನಿಮಗಾಗಿ.. ಖಾಸಗಿ ದರ್ಬಾರ್ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಡುತ್ತಿದ್ದು, ಅದಕ್ಕಾಗಿಯೇ ರತ್ನಖಚಿತ ಸಿಂಹಾಸನ ಜೋಡಣೆಗೊಂಡು ಸಕಲ ರೀತಿಯಲ್ಲಿ ಸಿದ್ದಗೊಂಡಿದೆ. ನವರಾತ್ರಿ ಆರಂಭವಾಗುತ್ತಿದ್ದಂತೆಯೇ ರತ್ನಖಚಿತ ಸಿಂಹಾಸನದಲ್ಲಿ ರಾಜಗಾಂಭೀರ್ಯದಲ್ಲಿ ಆಸೀನರಾಗಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಭಾರ್ ನಡೆಸಿಕೊಡುತ್ತಿದ್ದು, ಈ ವೇಳೆ ಗತ...