Friday, September 20, 2024

archiveShiruru Swamiji

ಸುದ್ದಿ

38 ದಿನಗಳ ಕಾಲ ಬಿಗಿ ಭದ್ರತೆಯಲ್ಲಿದ್ದ ಶಿರೂರು ಮೂಲಮಠವನ್ನು ಬಿಟ್ಟುಕೊಟ್ಟ ಪೊಲೀಸರು – ಕಹಳೆ ನ್ಯೂಸ್

ಉಡುಪಿ, ಆ 28 : ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಧನದ ನಂತರ ಪೊಲೀಸ್ ವಶದಲ್ಲಿದ್ದ ಶಿರೂರು ಮೂಲಮಠಕ್ಕೆ 38 ದಿನಗಳ ಬಳಿಕ ಪೊಲೀಸ್ ವಶದಿಂದ ಮುಕ್ತಿ ದೊರಕಿದೆ. ಹಿಡಿಯಡ್ಕದಲ್ಲಿರುವ ಶಿರೂರು ಮೂಲಮಠವನ್ನು ಆ 27 ರ ಸೋಮವಾರ ಪೊಲೀಸರು ಮಠದ ದ್ವಂದ ಮಠವಾದ ಸೋದೆ ಮಠದ ಸುಪರ್ದಿಗೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ...
ಸುದ್ದಿ

ಹರಿಪಾದ ಸೇರಿದ ಶಿರೂರು ಶ್ರೀ ; ವಿಷಪ್ರಾಶನ ಶಂಕೆ – ಕಹಳೆ ನ್ಯೂಸ್

ಉಡುಪಿ: ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಯತಿ ಪರಂಪರೆಯಲ್ಲಿ 30ನೆಯವರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು (55) ಹರಿಪಾದ ಸೇರಿದ್ದಾರೆ. ತೀವ್ರ ಅಸ್ವಸ್ಥಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದು, ವಿಷಪ್ರಾಶನ ಶಂಕೆ ವ್ಯಕ್ತವಾಗಿದೆ. ಚುನಾವಣೆ ಸ್ಪರ್ಧೆ, ವಿವಾದಾತ್ಮಕ ಹೇಳಿಕೆ, ಅಷ್ಟಮಠದ ಇತರ ಸ್ವಾಮೀಜಿಗಳ ಜತೆಗಿನ ಭಿನ್ನಾಭಿಪ್ರಾಯದಿಂದ ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಸಿದ್ದ ಶ್ರೀಗಳ ಆರೋಗ್ಯ ಕೆಲ ಸಮಯದಿಂದ ಆಗಾಗ ಕೈಕೊಡುತ್ತಿತ್ತು. ಹೀಗಿದ್ದರೂ ಜುಲೈ 17ರಂದು ಆರೋಗ್ಯವಾಗಿ ಉತ್ಸಾಹದಿಂದಲೇ...
ಸುದ್ದಿ

ನಾನು ಕೃಷ್ಣಮಠ ಕೇಳಿಲ್ಲ, ಶೀರೂರು ಮಠದ ಪಟ್ಟದ ದೇವರಾದ ಅನ್ನವಿಟ್ಠಲ ನನ್ನ ಸೊತ್ತು ; ಹಿಂದಿರುಗಿಸದಿದ್ದರೆ ಭಜರಂಗ ಬಲಿ ಮುಖ್ಯಪ್ರಾಣ ತಕ್ಕ ಉತ್ತರ ಕೊಡುತ್ತಾನೆ ಎಂದು ಶೀರೂರು ಶ್ರೀ ಆಕ್ರೋಶ – ಕಹಳೆ ನ್ಯೂಸ್

ಉಡುಪಿ: ಶೀರೂರು ಮಠದ ಪಟ್ಟದ ದೇವರಾದ ಅನ್ನವಿಟ್ಠಲ ನನ್ನ ಸೊತ್ತು. ದೇವರ ಮೂರ್ತಿಯನ್ನು ಹಿಂದಿರುಗಿ ಕೊಡದೆ ಇದ್ದರೆ ನ್ಯಾಯಾಲಯದಲ್ಲಿ ಕ್ರಿಮಿನಲ್‌ ದಾವೆ ಹೂಡುವೆ ಎಂದು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಎಚ್ಚರಿಸಿದ್ದಾರೆ. ಶೀರೂರು ಮೂಲ ಮಠದಲ್ಲಿ ಸೋಮವಾರ ನಡೆದ 10 ಸಾವಿರ ಗಿಡ ನೆಡುವ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣ ಮಠದ ಶ್ರೀಕೃಷ್ಣ ನನ್ನ ಸ್ವತ್ತಲ್ಲ, ಪಲಿಮಾರು ಮಠದ ರಾಮನೂ ನನ್ನ ಸ್ವತ್ತಲ್ಲ. ಆದರೆ ಶೀರೂರು...
ರಾಜಕೀಯ

ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಶೀರೂರು ಶ್ರೀಪಾದರು ಸ್ಪರ್ಧೆ ಖಚಿತ

ಮಲ್ಪೆ: ಬಿಜೆಪಿಯಿಂದ ಅಭ್ಯರ್ಥಿಯ ಸಮೀಕ್ಷೆ ನಡೆಯುತ್ತಿದೆ. ಆ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಂದೊಮ್ಮೆ ಬಿಜೆಪಿ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಂತೂ ನಿಶ್ಚಿತ ಎಂದು ಉಡುಪಿ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು ಪುನರುಚ್ಚರಿಸಿದ್ದಾರೆ. ಅವರು ರವಿವಾರ ಜನರಲ್ಲಿ ಮತ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡುವ ಪೂರ್ವಭಾವಿಯಾಗಿ ಮಲ್ಪೆ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಬಳಿಕ...
ಸುದ್ದಿ

Exclusive : ಕರುನಾಡಿನ ಫಯರ್ ಬ್ರಾಂಡ್ ಯೋಗಿಗಳ ಸಮ್ಮಿಲನ.!? ರಾಮರಾಜ್ಯ ನಿರ್ಮಾಣಕ್ಕೆ ಹನುಮ ಸೇನೆ ಸಿದ್ಧ – ಕಹಳೆ ನ್ಯೂಸ್

ದಕ್ಷಿಣ ಕನ್ನಡ / ಉಡುಪಿ : ಎರಡೂ ಜಿಲ್ಲೆಗಳಲ್ಲಿ ಹಿಂದೂತ್ವದ ಫಯರ್ ಬ್ರಾಂಡ್ ಸಂತರು ಎಂದೇ ಪ್ರಸಿದ್ಧ ಪಡೆದ ಶೀರೂರು ಮತ್ತು ವಜ್ರದೇಹಿ ಶ್ರೀಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರಾಮರಾಜ್ಯ ನಿರ್ಮಾಣಕ್ಕೆ ಹನುಮನ ಆರಾಧಕ ಸಂಕಲ್ಪ : ಹೌದು, ಇಬ್ಬರೂ ಮುಖ್ಯಪ್ರಾಣನ ಆರಾಧಕರು, ಕರ್ನಾಟಕದ ಬದಲಾವಣೆಗೆ ಕರ್ನಾಟಕವನ್ನು ರಾಮರಾಜ್ಯವಾಗಿ ನಿರ್ಮಾಣಮಾಡಲು ಈ ಇಬ್ಬರೂ ಸಂತರ ಅವಶ್ಯಕತೆ ಕರ್ನಾಟಕಕ್ಕಿದೆ ಎಂಬುದು ರಾಜ್ಯದ ರಾಜಕೀಯ ವಿಶ್ಲೇಶಕರು ಮಾತುಗಳು. Exclusive Photo Sheeruru Swamiji &...
shiruru swamiji
ಸುದ್ದಿ

ಅಷ್ಟಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ ; ಇದೊಂದು ಫೇಕ್ ಆಡಿಯೋ – ಶೀರೂರು ಶ್ರೀ

ಉಡುಪಿ : ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ದ್ವನಿ ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡೀಯೋದಲ್ಲಿ ಕೃಷ್ಣಮಠದ ಅಷ್ಟಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ ಎಂದು ಶೀರೂರು ಶ್ರೀಗಳು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಇದೊಂದು ಫೇಕ್ ಆಡಿಯೋ ಆಗಿದೆ. ಡಬ್ಬಿಂಗ್ ಮಾಡಿ ಹರಿಯಬಿಡಲಾಗಿದೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಇದು ನಕಲಿ ಆಡಿಯೋ....
ಸುದ್ದಿ

Exclusive : ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ – ಕಹಳೆ ನ್ಯೂಸ್ ವಿಶೇಷ ಸಂದರ್ಶನದಲ್ಲಿ ಶ್ರೀಗಳು ಹೇಳಿದ್ದೇನು?

ಉಡುಪಿ: ಇಲ್ಲಿನ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಕಹಳೆ ಜೊತೆ ಮಾತನಾಡಿದ ಸ್ವಾಮೀಜಿ ಹೇಳಿದ್ದೇನು? : Shyama Sudarshan with Shiruru Swamiji ( Exclusive Interview) ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ ಅವರು, ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಅಂತ ಹೇಳಿದ್ದಾರೆ. ರಾಜಕೀಯ ಪ್ರವೇಶಕ್ಕೆ ಶ್ರೀಗಳು ನೀಡಿದ ಕಾರಣ : ಉಡುಪಿಯ...