Friday, September 20, 2024

archiveVijaya Bank

ಸುದ್ದಿ

ಕರ್ನಾಟಕದ ಹೆಮ್ಮೆ ಬಂಟರ ವಿಜಯ ಬ್ಯಾಂಕ್ ಮುಗಿದ ನೆನಪು: ಬರೋಡಾ ಬ್ಯಾಂಕ್‌ನಲ್ಲಿ ವಿಲೀನ – ಕಹಳೆ ನ್ಯೂಸ್

ದೇಶದ ಅತೀ ದೊಡ್ಡ ಬ್ಯಾಂಕ್‌ಗಳ ಪಟ್ಟಿಯಲ್ಲಿ ಇನ್ನು ಮುಂದೆ ಬ್ಯಾಂಕ್ ಅಫ್ ಬರೋಡಾ ಕೂಡ ಒಂದಾಗಿ ಹೊರಹೊಮ್ಮಲಿದೆ. ಈಗಾಗಲೆ ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ದೇಶದ ಅತೀ ದೊಡ್ಡ ಬ್ಯಾಂಕ್‌ನ ಪಟ್ಟಿಯಲ್ಲಿದ್ದು, ನಂತರದ ಮೂರನೆ ಬ್ಯಾಂಕ್ ಆಗಿ ಬ್ಯಾಂಕ್ ಅಫ್ ಬರೋಡಾ ಇರಲಿದೆ. ಹೌದು ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಅಫ್ ಬರೋಡಾ ಜೊತೆ ವಿಲೀನಗೊಳಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಏಪ್ರಿಲ್ ೧ ರಿಂದ ವಿಲೀನ ಜಾರಿಯಾಗಲಿದ್ದು,...
ಸುದ್ದಿ

ಮಾಣಿಯಲ್ಲಿ ಪ್ರಯೋಜನ ಬಾರದ ವಿಜಯಾ ಬ್ಯಾಂಕ್‌ ಎ.ಟಿ.ಎಂ: ಸಾರ್ವಜನಿಕ ಉಪಯೋಗಕ್ಕೆ ಮನವಿ – ಕಹಳೆ ನ್ಯೂಸ್

ಬಂಟ್ವಾಳ: ಮಾಣಿ ಎಂಬ ಪುಟ್ಟ ಊರಿನಲ್ಲಿ ಯಾವುದೇ ಅಗತ್ಯಕ್ಕೆ ಪ್ರಯೋಜನ ಬಾರದ ಸಂಗತಿ ಎಂದರೆ ಮಾಣಿ ವಿಜಯಾ ಬ್ಯಾಂಕ್‌ ಎ.ಟಿ.ಎಂ. ಎ.ಟಿ.ಎಂ.ಇದೆ ಅದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ಈ ಬಾಗದ ಅಗತ್ಯ ಕ್ಕೆ ಬೇಕಾಗುವ ಸಂದರ್ಭದಲ್ಲಿ ಇದು ಇದ್ದು ಇಲ್ಲದಂತಾಗಿದೆ. ಇದು ಕಳೆದ ಎರಡು ದಿನಗಳಲ್ಲಿ ಹಾಳಾಗಿದ್ದು ತುರ್ತು ಹಣದ ಅವಶ್ಯಕತೆ ಇರುವ ಮಾಣಿಯ ಸಾರ್ವಜನಿಕರಿಗೆ ತೊಂದರೆ ಆಗಿದೆ. ನಿನ್ನೆ ಮೊನ್ನೆ ಅಂತ ಅಲ್ಲ ಮಾಣಿ ಮತ್ತು ಪರಿಸರದ ಜನತೆಯ ಅಗತ್ಯಕ್ಕೆ ಕೈ ಕೊಡುವ...
ಸುದ್ದಿ

ರಮನಾಥ್ ರೈ ಗೆ ಅಕ್ರಮ ಮಾಡಿಯೇ ಗೊತ್ತು: ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ – ಕಹಳೆ ನ್ಯೂಸ್

ಮಂಗಳೂರು: ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ತಲೆಎತ್ತಲು ರಮಾನಾಥ ರೈ ಅವರೇ ಕಾರಣ, ಕಾಂಗ್ರೇಸ್ ಕಛೇರಿಯನ್ನು ನಿಯಮಮೀರಿ ಕಟ್ಟಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ ವ್ಯಕ್ತಪಡಿಸಿದ್ದಾರೆ. ಅವರು ಬಿಸಿರೋಡಿನ ಪಕ್ಷದ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾಮಾನ್ಯ ರು ಮನೆ ಕಟ್ಟಲು ಒಂದು ಕಾನೂನು ಪ್ರಭಾವಿಗಳು ಮತ್ತು ರೈ ಅವರು ಕಟ್ಟಡ ಕಟ್ಟಲು ಒಂದು ಕಾನೂನೇ ಎಂದು ಪ್ರಶ್ನಿಸಿದ ಅವರು ಕಾನೂನಿಗೆ ವಂಚನೆ ಮಾಡಿದ್ದಾರೆ. ಸರಕಾರಕ್ಕೆ...
ಸುದ್ದಿ

ನೋಟ್ ಅಮಾನೀಕರಣ ಮತ್ತು ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಬಿ. ಸಿ .ರೋಡ್ ವಿಜಯ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಯಿತು. ನೋಟ್ ಅಮಾನೀಕರಣ ಹಾಗೂ ಪ್ರತಿಷ್ಠಿತ ವಿಜಯ ಬ್ಯಾಂಕ್ ನ್ನು ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಅಫ್ ಬರೋಢದ ಜೊತೆ ವಿಲೀನಗೋಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಮುಖಂಡರಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ,...
ಸುದ್ದಿ

ಮಾಜಿ ಸಚಿವ ರಮಾನಾಥ ರೈ ಹೇಳಿಕೆ ವಿರುದ್ದ ಹರಿಕೃಷ್ಣ ಬಂಟ್ವಾಳ್ ವಾಗ್ದಾಳಿ – ಕಹಳೆ ನ್ಯೂಸ್

ಮಂಗಳೂರು: ರಮಾನಾಥ ರೈ ಸಮಯ ಸಿಕ್ಕಾಗಲೆಲ್ಲಾ ಕಮಲ ನಾಯಕರ ವಿರುದ್ದ ಕಿಡಿಕಾರುತ್ತಿದ್ದು ಇತ್ತೀಚಿಗಷ್ಟೇ ನಳಿನ್ ಕುಮಾರ್ ಕಟೀಲ್ ವಿರುದ್ದ ವಿವಾದಿತ ಹೇಳಿಕೆ ನೀಡಿದ್ದು ಕರಾವಳಿ ರಾಜಕೀಯದಲ್ಲಿ ಚರ್ಚೆಗೆ ಗ್ರಾಸ್ತವಾಗಿದೆ. ಸಂಸದ ನಳಿನ್ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದ ಮಾಜಿ ಸಚಿವ ರಮಾನಾಥ ರೈ, ಸಂಸದರು ಇದ್ದೂ ಸತ್ತ ಹಾಗೆ, ಅವರ ಶವಸಂಸ್ಕಾರ ಮಾಡಲು ಮಾತ್ರ ಬಾಕಿ ಇದೆ ಎಂದಿದ್ದರು. ಈ ಹೇಳಿಕೆಯು ಬಿಜೆಪಿ ನಾಯಕರನ್ನು ಕೆರಳಿಸಿದ್ದು ಮಾತ್ರವಲ್ಲದೆ ವಾಗ್ದಾಳಿಯನ್ನು ಕೂಡ ನಡೆಸುವಂತೆ...
ಸುದ್ದಿ

ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ಹಿನ್ನೆಲೆ: ತಾಯಿ, ಮಗು ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಚಿಕ್ಕಮಗಳೂರು: ಸಾಲ ಮರುಪಾವತಿಗೆ ಬ್ಯಾಂಕ್ ನೋಟೀಸ್ ಬಂದ ಹಿನ್ನೆಲೆಯಲ್ಲಿ ಮಗುವಿನೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. 23 ವರ್ಷದ ಅನು ಹಾಗೂ 2 ವರ್ಷದ ದರ್ಶನ್ ಆತ್ಮಹತ್ಯೆಗೆ ಶರಣಾದವರು. ನ.2 ರಂದು ವಿಜಯ ಬ್ಯಾಂಕ್ 50 ಸಾವಿರ ಸಾಲ ಮರುಪಾವತಿಗೆ ನೋಟೀಸ್ ನೀಡಿತ್ತು. ಆದರೆ ಇಂದು ಬೆಳಗ್ಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ...
ಸುದ್ದಿ

ದೇನಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನಕ್ಕೆ ರಮಾನಾಥ ರೈ ವಿರೋಧ – ಕಹಳೆ ನ್ಯೂಸ್

ಮಂಗಳೂರು: ದೇನಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನಕ್ಕೆ ಮಾಜಿ ಸಚಿವ ರಮಾನಾಥ ರೈ ವಿರೋಧ ವ್ಯಕ್ತಪಡಿಸಿದ್ದಾರೆ. 87 ವರ್ಷಗಳ ಇತಿಹಾಸವುಳ್ಳ, ಲಾಭದಾಯಕ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ದೇನಾ ಮತ್ತು ಬರೋಡಾ ಬ್ಯಾಂಕ್ ಜತೆ ವಿಲೀನಗೊಳಿಸುವುದು ಸರಿಯಲ್ಲ. ಜಿಲ್ಲೆಯ ಹೆಮ್ಮೆ ಆಗಿರುವ ಬ್ಯಾಂಕನ್ನು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಜಿಲ್ಲೆಯ ಜನತೆ ಇದನ್ನು ಒಟ್ಟಾಗಿ ವಿರೋಧಿಸಬೇಕಿದೆ. ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ...