Friday, September 20, 2024

archiveಕಹಳೆ ನ್ಯೂಸ್

ಉಡುಪಿರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಒತ್ತಾಯ ; ಅನುಯಾಯಿಗಳಿಂದ ದ್ವೇಷ ವಯಕ್ತಿಕ ನಿಂದನೆ ಆರೋಪ, ಪವರ್‌ ಟಿ.ವಿ. ಟಿವಿ ಮಾಲಕನಿಂದಲೂ ತೇಜೋವಧೆ, ಕ್ರಮಕ್ಕೆ ಆಗ್ರಹ – ಕಹಳೆ ನ್ಯೂಸ್

ಕಾರ್ಕಳ,ಮೇ.3: ಸಾರ್ವತ್ರಿಕ ಚುನಾವಣೆ ನಡೆಯುವ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ, ಕುಮ್ಮಕ್ಕಿನ ಮೇರೆಗೆ ಅವರ ಅನುಯಾಯಿಗಳು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ವಾತವರಣವನ್ನು ಕಳುಷಿತಗೊಳಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕುರಿತು ಕಾರ್ಕಳ ಬಿಜೆಪಿ ಅಧ್ಯಕ್ಷ. ಮಹಾವೀರ ಹೆಗ್ಡೆ ಚುನಾವಣಾಧಿಕಾರಿಗಳಿಗೆ ಮೇ 3ರಂದು ದೂರು ನೀಡಿದ್ದಾರೆ. ಕಾಂಗ್ರೆಸಿನ ಅಭ್ಯರ್ಥಿ ಉದಯ ಶೆಟ್ಟಿಯವರ ಅನುಯಾಯಿಗಳು, ಉದಯ ಶೆಟ್ಟಿಯವರ ಪ್ರಚೋದನೆಯ ಮೇರೆಗೆ ಪರಸ್ಪರ...
ಜಿಲ್ಲೆದಕ್ಷಿಣ ಕನ್ನಡ

ಕದ್ರಿ ಮಂಜುನಾಥನ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ಕೊಡಿಯಾಲ್ ಬೈಲ್ ಪ್ರಖಂಡ ಇದರ ಹಿತಚಿಂತಕ ಅಭಿಯಾನ ಕಾರ್ಯಕ್ರಮದ ಉದ್ಘಾಟನ ಕಾರ್ಯಕ್ರಮ – ಕಹಳೆ ನ್ಯೂಸ್

ವಿಶ್ವಹಿಂದೂ ಪರಿಷತ್ ಹಿತಚಿಂತಕ ಅಭಿಯಾನ ಕಾರ್ಯಕ್ರಮದ ಕೊಡಿಯಾಲ್ ಬೈಲ್ ಪ್ರಖಂಡದ ಉದ್ಘಾಟನೆ ಕಾರ್ಯಕ್ರಮ ಕದ್ರಿ ಮಂಜುನಾಥನ ಕ್ಷೇತ್ರದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಶ್ರೀಮತಿ ಶಕೀಲಾ ಕಾವ ವಿಶ್ವಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕುಮಾರ್ ಶೇಟ್ ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ ಜಿಲ್ಲಾ ಪ್ರಮುಖರಾದ ಸಂತೋಷ್ ಕದ್ರಿ ಕೊಡಿಯಾಲ್ ಬೈಲ್ ಪ್ರಖಂಡ ಅಧ್ಯಕ್ಷರಾದ ಮಧುಸೂದನ್ ಆಯರ್ ಕಾರ್ಯದರ್ಶಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ಹಾರಡಿ ಸಮೀಪ ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕರನ್ನು ವಶಪಡಿಸಿಕೊಂಡ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು : ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನ ಹಾರಾಡಿ ಎಂಬಲ್ಲಿ ನಡೆದಿದೆ. ಹಾರಾಡಿ ಸಮೀಪ ಯುವಕರ ತಂಡ ಒಂದು ಸಾರ್ವಜನಿಕ ಸ್ಥಳದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಕೆಲ ಯುವಕರನ್ನು ವಶಕ್ಕೆ ಪಡೆದುಕೊಂಡ ಮಾಹಿತಿ ಲಭ್ಯವಾಗಿದೆ. ಯುವಕರನ್ನು ಪೊಲೀಸರು ಯಾವ ಕಾರಣಕ್ಕಾಗಿ ವಶಪಡಿಸಿಕೊಂಡಿದ್ದಾರೆ ಎಂದು ಪೋಲೀಸರ ತನಿಖೆಯ ಮೇರೆಗೆ ತಿಳಿಯಬೇಕಾಗಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

‘ಕನ್ನಯ್ಯ ಲಾಲ್’ ಅಮಾಯಕ ಹಿಂದುವಿನ ಹತ್ಯೆ ಖಂಡಿಸಿ ದರ್ಬೆ ವೃತ್ತದಲ್ಲಿ ಬಳಿ ಬೃಹತ್ ಪ್ರತಿಭಟನೆಗೆ ಕರೆ- ಕಹಳೆ ನ್ಯೂಸ್

ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮುಸ್ಲಿಂ ದುಷ್ಕರ್ಮಿಗಳು ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬ ಹಿಂದೂವಿನ ಶಿರಚ್ಚೇದ ಮಾಡಿರುವ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲ್ಲೂಕು ಮತ್ತು ನಗರ ವತಿಯಿಂದ ಜೂ.29 ಸಂಜೆ 6.30 ಕ್ಕೆ ದರ್ಬೆ ವೃತ್ತದಲ್ಲಿ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ. ಅಮಾಯಕ ಹಿಂದುವಿನ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಉಗ್ರ ರೀತಿಯ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದು ರಾಷ್ಟ್ರಭಕ್ತರು, ಅನ್ಯಾಯವನ್ನು...
ಪುತ್ತೂರು

ಪುತ್ತೂರು: ಕೊಂಬೆಟ್ಟು ಹೋಟೆಲ್ ಉದ್ಯಮಿ ಶಕುಂತಲಾ ಕೊಲೆ ಪ್ರಕರಣ; ಕೆಲವು ವರ್ಷಗಳ ಪರಿಚಿತ ಆಟೋ ಚಾಲಕ ಶ್ರೀಧರ್ ಎಂಬತನ ಕೃತ್ಯ; ಆರೋಪಿ ಪೊಲೀಸ್ ವಶಕ್ಕೆ- ಕಹಳೆ ನ್ಯೂಸ್

  ವಿಟ್ಲ ಸಮೀಪದ ಕೆಮನಾಜೆ ಕುಂಡಡ್ಕ ನಿವಾಸಿ, ಆಟೋ ಚಾಲಕ ಶ್ರೀಧರ್ (34) ಬಂಧಿತ ಆರೋಪಿ. ಮಾಣಿಯ ಕಾಪಿಕಾಡು ನಿವಾಸಿ ದಿ. ತ್ಯಾಂಪ ಪೂಜಾರಿ ಅವರ ಪುತ್ರಿ, ಪ್ರಸ್ತುತ ಅನಂತಾಡಿಯ ದೇವಿ ನಗರ ನಿವಾಸಿ ಶಕುಂತಲಾ(35) ಸಾವನ್ನಪ್ಪಿದ ಮಹಿಳೆ. ಶಕುಂತಲಾ ಪುತ್ತೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಆಕ್ಟಿವಾ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ಯುವಕ ಆಕೆಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ....
ಸುದ್ದಿ

ಮುಕಾಂಬಿಕಾ ಕಲ್ಚರಲ್ ಅಕಾಡಮಿಯಲ್ಲಿ ನೃತ್ಯಾಂತರಂಗ ಕಾರ್ಯಕ್ರಮ; ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ- ಕಹಳೆ ನ್ಯೂಸ್

ಪುತ್ತೂರು : :ಪುತ್ತೂರಿನ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಟರಲ್ ಅಕಾಡೆಮಿ ಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 91ನೇ ಸರಣಿಯಲ್ಲಿ ಸಂಸ್ಥೆಯ ಕಾಂಭೋಜಿ ತಂಡದ ವಿದ್ಯಾರ್ಥಿನಿಯರಾದ ಮಂದಿರಾ ಕಜೆ, ಲಾಸ್ಯ ಸಂತೋಷ್,ವೈಭವಿ ಲಕ್ಷ್ಮಿ ಅವನಿ, ಸೋನು ರಾಜ್, ರಿಶಿತ ಮತ್ತು ಸಿಂಚನಾರವರಿಂದ ಭರತನಾಟ್ಯ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಐತಪ್ಪ ನಾಯ್ಕ ಶುಭಹಾರೈಸಿದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್...
ಪುತ್ತೂರುಸುದ್ದಿ

ವಿಟ್ಲ: ಹಿಂದೂ ಸಂಘಟನೆಯ ಇತ್ತಂಡಗಳ ನಡುವೆ ಮಾರಾಮಾರಿ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ.- ಕಹಳೆ ನ್ಯೂಸ್

ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತೆ ಮೂವರು ಹಿಂದೂ ಸಂಘಟನೆಯ ಮುಖಂಡರನ್ನು ಬಂಧಿಸಿದ್ದಾರೆ. ಪ್ರಶಾಂತ್ ಅಲಿಯಾಸ್ ಪಚ್ಚು ಎಂಬವನಿಗೆ ಚೂರಿ ಇರಿತ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಗಳಾದ ಚಂದ್ರಹಾಸ್ ಕನ್ಯಾನ, ನಾಗೇಶ್ ಮತ್ತು ದೇವದಾಸ ಎಂಬವರನ್ನು ಮಡಿಕೇರಿ ಸಮೀಪದಲ್ಲಿ ವಿಟ್ಲ ಠಾಣಾ...
ಸುದ್ದಿ

ಕಡಬ ಪೇಟೆಯಲ್ಲಿ ಕಳ್ಳತನ; ಇಲೆಕ್ಟ್ರಾನಿಕ್, ಟೈಲ್ಸ್ ಅಂಗಡಿಯಿಂದ ಕಳವು- ಕಹಳೆ ನ್ಯೂಸ್

ಕಡಬ: ಕಡಬದ ಮುಖ್ಯ ಪೇಟೆಯಲ್ಲೇ ಖತರ್ನಾಕ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಮುಖ್ಯ ಪೇಟೆಯ ಇಲೆಕ್ಟ್ರಾನಿಕ್, ಟೈಲ್ಸ್ ಅಂಗಡಿಗೆ ನುಗ್ಗಿದ ಕಳ್ಳರು ನಗದು, ಡಿ.ವಿ.ಆರ್ ಕಳವು ಮಾಡಿ ಪರಾರಿಯಾಗಿದ್ದಾರೆ. ಕಡಬ ಪೇಟೆಯಲ್ಲಿ ಕಾರ್ಯಚರಿಸುತ್ತಿರುವ ಸಂಗೀತಾ ಇಲೆಕ್ಟ್ರಾನಿಕ್ ಹಾಗೂ ಪಕ್ಕದ ಸಾಹೀರಾ ಟೈಲ್ಸ್ ಅಂಗಡಿಗೆ ನಿನ್ನೆ ರಾತ್ರೆ ನುಗ್ಗಿದ ಕಳ್ಳರು ನಗದನ್ನು ಕಳವು ಮಾಡಿದ್ದಾರೆ. ಮಾತ್ರವಲ್ಲದೆ ಎರಡೂ ಅಂಗಡಿಯಲ್ಲಿದ್ದ ಸಿ.ಸಿ ಕ್ಯಾಮರಾ ಹಾಗೂ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ.ಇನ್ನು ಘಟನಾ ಸ್ಥಳಕ್ಕೆ ಕಡಬ ಪೋಲೀಸರ...
1 2 3 126
Page 1 of 126